ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಸಾಗರ ಸೇರುವ ನದಿಯಂತೆ.. ಮೂರು ಮುಖ್ಯ ಪಾತ್ರಗಳು ರಾಜಕುಮಾರ್, ನರಸಿಂಹರಾಜು ಮತ್ತು ಭಾರತಿ.. ಆರಂಭದ ದೃಶ್ಯಗಳಲ್ಲಿ ಸೇರುವ ಪಾತ್ರಗಳು ಚಿತ್ರದುದ್ದಕ್ಕೂ ಅನೇಕ ತಿರುವುಗಳಲ್ಲಿಯೂ ಕೂಡ ವಿಚಲಿತರಾಗದೆ ಸಮಚಿತ್ತಗಳಿಂದ ಕೂಡುವ ಚಿತ್ರವಿದು.
ಶ್ರೀಮತಿ ಸುನಂದಮ್ಮ ಅವರ ಕಥೆಯನ್ನು ಆಧರಿಸಿ ನಿರ್ದೇಶಕ ಟಿ ವಿ ಸಿಂಗ್ ಠಾಕೂರ್ ನಿರ್ದೇಶಿಸಿರುವು ಚಿತ್ರವಿದು.
ಉಪೇಂದ್ರಕುಮಾರ್ ಅವರ ಹಿತವಾದ ಸಂಗೀತ, ಆರ್ ಏನ್ ಜಯಗೋಪಾಲ್ ಮತ್ತು ಜಿ ವಿ ಅಯ್ಯರ್ ಅವರ ಹಾಡುಗಳಿಗೆ ದನಿಯಾದವರು ಪಿ ಬಿ ಶ್ರೀನಿವಾಸ್, ಎಸ್ ಜಾನಕೀ ಮತ್ತು ಎಲ್ ಆರ್ ಈಶ್ವರಿ.
ಛಾಯಾಗ್ರಹಣ ಶ್ರೀಕಾಂತ್ ಮತ್ತುರಾಜಾರಾಮ್ ಮತ್ತೆ ಕುಮಾರ್.
ರಾಜಕುಮಾರ್ ಮತ್ತು ನರಸಿಂಹರಾಜು ಒಂದು ಮುರುಕಲು ಹಡಗಿನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಹಗಲು ಹೊತ್ತಿನಲ್ಲಿ ಕೆಲಸ.. ರಾತ್ರಿ ಅಲ್ಲಿಯೇ ವಾಸ. .. ಒಂದು ದಿನ ಭಾರತಿ ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಸಮುದ್ರಕ್ಕೆ ಹಾರಿದಾಗ ಅದನ್ನು ಕಂಡ ರಾಜಕುಮಾರ್ ಅವರನ್ನು ಬದುಕಿಸಿ ದಡಕ್ಕೆ ತಂದು.. ಏತಕ್ಕೆ ಆತ್ಮಹತ್ಯೆ ಎಂದು ಕಾರಣ ಕೇಳಿದಾಗ ಇಷ್ಟವಿಲ್ಲದ ಮದುವೆ ಕಾರಣ ಎನ್ನುತ್ತಾರೆ.. ಮತ್ತೆ ನನ್ನನ್ನು ಎಲ್ಲಿಗೂ ಕಳಿಸಬೇಡಿ ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಒತ್ತಾಯ ಮಾಡುತ್ತಾರೆ
ಮೂವರು ಅದೇ ಮುರುಕಲು ಹಡಗಿನಲ್ಲಿ ವಾಸ ಮಾಡುವಾಗ.. ಆ ಹಡಗಿನ ಮಾಲೀಕ.. ಇಲ್ಲಿಗೆ ಕೆಲಸ ಮುಗಿಯಿತು.. ನಾಳೆಯಿಂದ ನಿಮ್ಮ ಹಾದಿ ನೋಡಿಕೊಳ್ಳಿ ಎಂದಾಗ ಇವರಿಗೆ ಸಮಸ್ಯೆ ಶುರು..
ಅತ್ತ ರಾಜಕುಮಾರ್ ಅವರ ಮನೆಯಲ್ಲಿ ತಾಯಿ ಮತ್ತು ತಮ್ಮನನ್ನು ಹಳ್ಳಿಯಲ್ಲಿ ಬಿಟ್ಟು ಬಂದಿರುತ್ತಾರೆ.. ಸಂಪಾದನೆ ಮಾಡಿ ಮನೆಗೆ ಕಲಿಸಬೇಕು ಎಂದು.. ಆದರೆ ಊಟಕ್ಕೆ ತತ್ವಾರ.. ಕೆಲಸವಿಲ್ಲ.. ಜೊತೆಯಲ್ಲಿ ಇನ್ನೊಬ್ಬರ ಹೊಣೆಗಾರಿಕೆ..
ಈ ಹಾದಿಯಲ್ಲಿ ಚಿತ್ರ ಮುಂದುವರೆಯುತ್ತದೆ..
ರಾಘವೇಂದ್ರರಾವ್ ಅವರು ಭಾರತಿ ಅವರ ತಂದೆಯ ಪಾತ್ರ.. ಆಕೆಯನ್ನು ಮದುವೆ ಮಾಡಿಕೊಂಡು ಮಾವನ ಆಸ್ತಿಯನ್ನು ಕಬಳಿಸಲು ಉದಯಕುಮಾರ್ ಸಂಚು.. ಅದನ್ನು ನಿಷ್ಪಲ ಮಾಡುವುದು ರಾಜಕುಮಾರ್ ಮತ್ತು ನರಸಿಂಹರಾಜು ಅವರ ಕಾಯಕವಾಗುತ್ತದೆ
ಇದರ ಮಧ್ಯೆ ರಾಜಕುಮಾರ್ ಅವರ ತಮ್ಮ ಪುಟ್ಟ ಬಾಲಕ.. ಮತ್ತು ದೇವರಿಗೆ ಬರೆಯುವ ಪತ್ರ.. ಅದನ್ನು ನೆರವೇರಿಸಲು ರಾಘವೇಂದ್ರರಾವ್ ಅವರ ಪರಿಶ್ರಮ.. ಹೀಗೆ ಸಾಗುವ ಚಿತ್ರ. ಅಂತ್ಯದಲ್ಲಿ ಎಲ್ಲವೂ ಶುಭವಾಗುತ್ತದೆ..
ಪಂಡರಿಬಾಯಿ ಆ ಪುಟ್ಟ ಬಾಲಕನ ಮುಗ್ಧ ತಾಯಿಯ ಪಾತ್ರ..
ಕುಪ್ಪುರಾಜ್, ಎಚ್ ಆರ್ ಶಾಸ್ತ್ರೀ, ಜಯಶ್ರೀ, ಗಣಪತಿ ಭಟ್, ಶನಿಮಹಾದೇವಪ್ಪ, ಕಮೆಡಿಯನ್ ಗುಗ್ಗು, ಇಂದಿರಾ ಜಾರ್ಜ್ ಪಾತ್ರಗಳಿಗೆ ಜೀವ ತುಂಬುತ್ತಾರೆ..
ರಾಜಕುಮಾರ್ ಅವರ ಅಭಿನಯ ಈ ಚಿತ್ರದ ಶ್ರೀ ರಕ್ಷೆ.. ಅದರಲ್ಲೂ ಅಂತಿಮ ದೃಶ್ಯದಲ್ಲಿ ತನ್ನ ತಮ್ಮನ ಮುಂದೆ ಕೈಜೋಡಿಸಿಕೊಂಡು ಕ್ಷಮೆ ಕೇಳುವ ಪಾತ್ರದಲ್ಲಿ ಕಣ್ಣೇರು ತರಿಸುತ್ತಾರೆ. ಚಿತ್ರದುದ್ದಕ್ಕೂ ಸಮಯೋಚಿತ ಅಭಿನಯ ನೀಡುವ ಅವರ ಪಾತ್ರಾಭಿನಯ ಖುಷಿ ನೀಡುತ್ತದೆ. ಶ್ರೀರಾಮನಾಗಿ ನಾಟಕದಲ್ಲಿನ ಅಭಿನಯ.. ಸೂಪರ್
ಭಾರತಿ ಮುಗ್ಧೆಯಾಗಿ ಅಭಿನಯ ಇಷ್ಟವಾಗುತ್ತದೆ.. ಹಿತವಾದ ಮಾತು, ಕಂಗಳು ಮಾತಾಡುವುದು.. ನಾಯಕನ ಮೇಲೆ ಗೌರವ, ಪ್ರೀತಿ , ಮಮತೆ ಎಲ್ಲವೂ ಮಿಳಿತವಾದ ಸಂಭಾಷಣೆಗಳು ಖುಷಿ ಕೊಡುತ್ತದೆ.
ಸೀತೆಯಾಗಿ ನಾಟಕದಲ್ಲಿನ ಅಭಿನಯ ಕಳೆಕಟ್ಟುತ್ತದೆ..
ನರಸಿಂಹರಾಜು ಹಾಸ್ಯದಲ್ಲೂ ಮತ್ತು ನಾಯಕನಿಗೆ ಪ್ರತಿ ಸನ್ನಿವೇಶದಲ್ಲೂ ಸಹಾಯ ಮಾಡುವ ಪಾತ್ರ.
ಖಳನಾಗಿ ಉದಯ್ ಅಬ್ಬರಿಸುತ್ತಾರೆ.
ರಾಘವೇಂದ್ರರಾವ್ ಅಪ್ಪನ ಪಾತ್ರದಲ್ಲಿನ ತೊಳಲಾಟ ಸೊಗಸಾಗಿದೆ.. ಹಾಗೆ ತಂಗಿಯಾಗಿ ಜಯಶ್ರೀ ಪಾತ್ರವೂ ಕೂಡ.
ಹಾಡುಗಳು ಖುಷಿ ಕೊಡುತ್ತದೆ
ಒಂದು ದಿನ ಎಲ್ಲಿಂದಲೋ ನೀ ಬಂದೆ
ನೋಡು ನೋಡು ಮೆಲ್ಲಗೆ
ಒಂದೇ ತಾಯಿ ಮಕ್ಕಳು
ಈ ಮೀನಂತ ಹೆಣ್ಣು
ಸೀತೆ ಹೃದಯದ ಹೆಣ್ಣು
ನೀ ಯಾರೋ ಏನೋ ಸಖ
ಇನ್ನೊಂದು ವಿಶೇಷ ಎಂದರೆ.. ಪ್ರಣಯದ ಚಿತ್ರಗೀತೆಗಳಲ್ಲಿ ನಾಯಕ ನಾಯಕಿಯನ್ನು ಎತ್ತಿ ಕೊಳ್ಳುವುದು ಸಾಮಾನ್ಯ.. ಆದರೆ ಇಲ್ಲಿ ನಾಯಕಿ ನಾಯಕನನ್ನು ಎತ್ತಿ ಕೊಳ್ಳುವುದು..
ಹೌದು ಚಿತ್ರದ ತುಣುಕು ಇದೆ ನೋಡಿ..
ಒಂದು ಸುಂದರ ಚಿತ್ರವನ್ನು ನೋಡಿದ ಖುಷಿ ನನ್ನದು.. ಹಾಗೆ ರಾಜಕುಮಾರ್ ಎಂಬ ನಟನ ಉಲ್ಕೆ ಕರುನಾಡಿನ ಬೆಳ್ಳಿ ಬರದೆಯಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಸಿನಿರಸಿಕರನ್ನು ರಂಜಿಸಿ ಮುಂದುವರೆಯುತ್ತಿರುವುದು..
















No comments:
Post a Comment