Thursday, April 24, 2014

ರಾಜ್ ಆಸ್ಥಾನದಲ್ಲಿ ಅಣ್ಣಾ !!!!

ಕಾಂತ.. ಶ್ರೀಕಾಂತ.. ಶ್ರೀಕಾಂತು.. ಶ್ರೀಕಾಂತೂ...

ಯಾರೋ ಕೂಗಿದ ಹಾಗೆ ಆಯಿತು.. ಮಯೂರ ಶೈಲಿಯಲ್ಲಿಯೇ

"ನಿನಗೆ ನನ್ನ  ಜನುಮ ದಿನ ನೆನಪಿಲ್ಲವೇ.. .. ಇದರ ಬಗ್ಗೆ ಏನಾದರೂ ಬರೆಯುದಿಲ್ಲವೇ.. "

ಅಚಾನಕ್ ಕಣ್ಣು ಬಿಟ್ಟೆ.. ಸುತ್ತ ಮುತ್ತಲು ಕಪ್ಪು ಕತ್ತಲೆ...

ನಿಧಾನವಾಗಿ ಇದ್ದ ಜಾಗವನ್ನು ಪರಿಶೀಲಿಸುತ್ತಾ ಹೋದೆ.. ಅಭಿಮಾನದ ಬೆಳಕಲ್ಲಿ ಅಲ್ಲಿ ಇದ್ದ ದೃಶ್ಯಗಳು ಕಾಣತೊಡಗಿದವು..

ಒಂದು ಕಿರು ನಗೆ ಬೀರಿದೆ..

ಹಾ ಈಗ ಬರಿಯಬಹುದು.. ಬೇಗ ಬರಿ ಕಾಂತ.. ಓದಬೇಕು ಎಂದಿತು ಒಂದು ಅಶರೀರವಾಣಿ... !

ಅದರ ಫಲವೇ ಈ ಲೇಖನ!!!!!

***************

ರಾಜಸ್ಥಾನದಲ್ಲಿ ನಡೆಯುತ್ತಾ ಹೋದೆ.. ಆ ಕಡೆ ಈ ಕಡೆ ಸಾಧು ಸಂತರು, ಸಾಮಂತರು, ಪ್ರಜೆಗಳು, ಗಾಯಕರು, ಕಲಾವಿದರು ಎಲ್ಲರೂ ನೆರೆದಿದ್ದರು.. ನಿಧಾನವಾಗಿ ಕಣ್ಣು ಹಾಯಿಸಿದೆ.. ಬಹು ಪರಾಕ್ ಬರುತ್ತಿತ್ತು..

"ರಾಜಾಧಿರಾಜ.. ರಾಜ ಮಾರ್ತಂಡ.. ಕರುನಾಡಿನ ಅಭಿನಯ ತಿಲಕ, ಹುಟ್ಟು ಕಲಾವಿದ.. ಬಹು ಪರಾಕ್ ಬಹು ಪರಾಕ್.. "

"ಅಭಿಮಾನಿ ದೇವರುಗಳೇ.. ದಯಮಾಡಿ ಎಲ್ಲರೂ ಆಸೀನರಾಗಿ.. ನೀವೆಲ್ಲ ಇಂದು ಬಂದದ್ದು ನನಗೆ ಬಹಳ ಸಂತಸವಾಗುತ್ತಿದ್ದೆ. ನೀವೆಲ್ಲ ಇಂದು ಬಂದ ಕಾರಣ ಹೇಳಿದರೆ ನನಗೆ ಇನ್ನಷ್ಟು ಖುಷಿಯಾಗುತ್ತದೆ.. ಒಬ್ಬೊಬ್ಬರಾಗಿ ನಿಮ್ಮ ಪರಿಚಯ ಮಾಡಿಕೊಳ್ಳಿ..ಹಾಗೆಯೇ ಇಂದು ನಮ್ಮ ಆತಿಥ್ಯ ಸ್ವೀಕರಿಸಿ ನನ್ನನ್ನು ಕೃತಾರ್ಥನನ್ನಾಗಿ ಮಾಡಬೇಕು"

ನೆರೆದಿದ್ದ ಎಲ್ಲರೂ ಒಂದೇ ಉಸಿರಲ್ಲಿ "ಆಗಬಹುದು" ಎಂದರು.. ಇಲ್ಲಿಂದ ಶುರುವಾಯಿತು ಒಂದು ಬೃಹತ್ ಸಭಾ ದೃಶ್ಯ..

******************

ಅಣ್ಣ ನಿಮಗಾಗಿ ನನ್ನ ಕಣ್ಣು ಕೊಡಲು ಸಿದ್ಧ ಅಂತ ಒಬ್ಬರು ನಿಂತರು.. ಅಣ್ಣಾ ನೀವು ಹೇಳಿ.. ನಾ ಅದನು ಮಾಡಲು ಸಿದ್ಧ ಎಂದರು ಇನ್ನೊಬ್ಬರು..


ನಿಮ್ಮ ರಾಜ್ಯದಲ್ಲಿ ಸಾಧು ಸಂತರಿಗೆ.. ದೇವಾನು ದೇವತೆಗಳಿಗೆ ತೊರುತ್ತಿರುವ ಅಭಿಮಾನ, ಭಕ್ತಿ ತುಂಬಾ ಇಷ್ಟವಾಗುತ್ತಿದೆ ಪ್ರಭು ಎಂದರು ಇನ್ನಿಬ್ಬರು.. 


ಪ್ರಭು .. ಕರುನಾಡಿನ ಉಳಿವಿಗಾಗಿ ಹೋರಾಡಲು ಸದಾ ಸಿದ್ಧ.. ನೋಡಿ ಗದೆಯನ್ನು ಯಾವಾಗಲೂ ಹೀಗೆಯೇ ಇಟ್ಟುಕೊಂಡು ನಿಂತಿರುತ್ತೇನೆ..!

ಕನ್ನಡ ನಾಡಿನ ಸಿಂಹಗಳಿಗೆ ನೀವು ಕಳಶಪ್ರಾಯ.. ಅದರಂತೆ ನಾವು ಕೂಡ ಎಂದರು ರಣಧೀರರು!


ದೇವರಿಲ್ಲದ ತಾಣವಿಲ್ಲ.. ನಾಡಿನ ಬಗ್ಗೆ ಅಭಿಮಾನವಿರದ ಪ್ರಜೆಗಳಿಲ್ಲ.. ಕೈವಾರದಿಂದ ಕಿತ್ತೂರಿನ ತನಕ ಎಲ್ಲೆ ಇರದ ಅಭಿಮಾನದ ಭಕ್ತಿ ನಮ್ಮದು ಅಣ್ಣಾ ಎಂದರೂ ಕೈವಾರ ಮತ್ತು ಕಿತ್ತೂರಿನ ಪ್ರಮುಖರು..


"ಕುಲ ಕುಲವೆಂದು ಹೊಡೆದಾಡುತ್ತಲೇ ಇಲ್ಲ ರಾಜರೆ.. ನಮಗೆ ಎಲ್ಲರೂ ಸಮಾನರು ಎನ್ನುವ ನಿಮ್ಮ ತತ್ವವೇ ನಮಗೆ ಆದರ್ಶ.. ಚೇತ ಆಗಿರಲಿ ಕಬೀರ್ ಆಗಿರಲಿ ಎಲ್ಲರೂ ಒಂದೇ ಎನ್ನುವ ನಿಮ್ಮ ಮಾತಿಗೆ ನಮ್ಮ ನಮನಗಳು"


"ಕರುನಾಡಿನ ವಿಷಯಕ್ಕೆ ಬಂದರೆ ಸತಿಶಕ್ತಿ ಮಹತ್ವವೇನು ಎಂದು ತೋರಿಸಿಯೇ ಬಿಡುತ್ತೇನೆ.. ಎಂದು ಟೊಂಕ ಕಟ್ಟಿ ನಿಂತಿದ್ದೇನೆ ಅಣ್ಣ.. ನೀವು ಹೂಂ ಎಂದು ಹೇಳಿ.. ಮುಂದೆ ನಮಗೆ ಬಿಡಿ"


ಕೈಲಾಸದಿಂದ ಬಂದ ಗೌರಿಯೇ ಆದರೂ.. ತ್ರೇತಾಯುಗದ ಸೀತೆಯೇ ಆದರೂ ಹೆಣ್ಣು ಮಕ್ಕಳಿಗೆ ಸದಾ ಗೌರವ ಆದರಗಳು ಇದ್ದೆ ಇವೆ.. ನಮಸ್ಕಾರಗಳು ಪ್ರಭುಗಳೇ!


ನಾ ಹಾಡುವ ಹಾಡು ನಿಮ್ಮ ಸಾಮ್ರಾಜ್ಯದ ಏಳಿಗೆಗಾಗಿ.. ನನ್ನ ಭಕ್ತಿ ನಾಡಿನ ಸಾಧನೆಗಾಗಿ..  ವಿಠಲನ ದಯೆ ಇರಲಿ ಸದಾ ನಿಮ್ಮ ಮೇಲೆ ಎಂದು ಬೇಡಿಕೊಳ್ಳುವೆ ಪ್ರಭು ಎಂದರು ತುಕಾರಾಂ


ಮಹಾರಾಜರೇ.. ನೀವು ಹೀಗೆ ನನ್ನ ತರಹ ಯೋಚಿಸುವುದೇ ಬೇಡ... ನಾ ಸುಮ್ಮನೆ ನಂದಲಾರದ ದೀಪವನ್ನು ಹೇಗೆ ಬೆಳಗಿಸಬೇಕು ಎಂದು ಯೋಚಿಸುತ್ತಿರುವೆ ಅಷ್ಟೇ ..



ಎಮ್ಮೆ ಕಾದರೂ ಸರಿಯೇ.. ಏನೇ ಆದರೂ ನಿಮ್ಮ ನಾಡಿನಲ್ಲಿ ಸತ್ಯಕ್ಕಿರುವ ಬೆಲೆ ಮಹಾರಾಜ ಹರಿಶ್ಚಂದ್ರನ ವರ್ಚಸ್ಸಿಗಿಂತಲೂ ಹೆಚ್ಚು...!

ರಾಘವೇಂದ್ರ ಸ್ವಾಮಿಗಳನ್ನು ಧರೆಗಿಳಿಸಿದ ಪುಣ್ಯ ಭೂಮಿಯಿದು.. ಶಿವನ ಇನ್ನೊಂದು ರೂಪವೇ ಇರುವ ಪುಣ್ಯ ನೆಲೆಯಿದು.. ಆ ನೆಲದಲ್ಲಿರುವ ನಾವೇ ಧನ್ಯ ಪ್ರಭುಗಳೇ


ಗೂಡಾಚಾರರೂ ಎಲ್ಲ ರಾಜ್ಯಗಳಿಗೂ ಬೇಕು.. ನಿಮ್ಮ ರಾಜ್ಯವನ್ನು ಸಂಕಷ್ಟದಿಂದ ಪಾರು ಮಾಡಲು ನಾ ಸದಾ ಎಚ್ಚರದಿಂದ ಇರುವೆ.. ನಾ ಕರುನಾಡಿನ ಬಾಂಡ್ ಜೇಮ್ಸ್ ಬಾಂಡ್..


ನಮ್ಮ ಭಾಗ್ಯ.. ನಿಮ್ಮ ಬೆಳಗು.. ರಾಜರೆ.. ನಾಡಿನಲ್ಲೆಲ್ಲ ಈ ರಾಜ ಭಲೇ ರಾಜ ಎಂದು ಕೊಂಡಾಡುತ್ತಿದ್ದಾರೆ!!!


ನಿಮ್ಮ ಆಶೀರ್ವಾದದ ಫಲ.. ಬೆಂದಕಾಳೂರಿಗೆ ನಾಡ ಪ್ರಭುವಾಗಿದ್ದೇನೆ.. ನಿಮ್ಮನ್ನು ಭೇಟಿ ಮಾಡಲು ಬಂದೆ.. ಮಹಾರಾಜರೇ..


ಮನದ ಉಯ್ಯಾಲೆಗೆ ಕಡಿವಾಣ ಹಾಕಲು ಕೆಲವೊಮ್ಮೆ ಬುದ್ಧನ ಹಿಂದೆ ಹೋಗಬೇಕಾಗುತ್ತದೆ.. ಅವರ ತತ್ವಗಳನ್ನು ನಾಡಿನಲ್ಲಿ ಪ್ರಚಾರ ಮಾಡುತ್ತಿದ್ದೇವೆ.. ಜೊತೆಯಲ್ಲಿ ಬಾಳು ಬೆಳಗಿಸಲು ಬರುವ ಅಡ್ಡಿ ಆತಂಕಗಳನ್ನು ತೊಡೆದು ಹಾಕಲು ನಾವು ಬಂದಿರುವೆವು.,


ಒಬ್ಬರು ಇಬ್ಬರಾಗಿರಲಿ ಇಬ್ಬರು  ಒಬ್ಬರಾಗಿರಲಿ ಆದ್ರೆ ಅಭಿಮಾನ ಮಾತ್ರ ಸದಾ ಏಕ ಮುಖವಾಗಿರಲಿ ಕಾರಣ ನಮ್ಮೆಲ್ಲರದ್ದು ಭಲೇ ಜೋಡಿ.. ಅಲ್ಲವೇ ಮಿ. ರಾಜರೆ

ಮನೆತನದ ಗೌರವ.. ಕುಲದ ಗೌರವ ಕಾಪಾಡಲು ತಾತ ಮಗ ಮೊಮ್ಮಗ ಒಟ್ಟಿಗೆ ಬಂದಿದ್ದೇವೆ.. ಒಲವು ನಮ್ಮ ಬದುಕು.. ಒಲವೆ ಜೀವನ ಸಾಕ್ಶತ್ಕಾರ ಎನ್ನುವ ತತ್ವ ನಮ್ಮದು..


ನಮ್ಮನ್ನು ನಂಬಿರುವ ಜನತೆಗೆ ಉದಾರ ಮನಸ್ಸಿನಿಂದ ದಾನ ಮಾಡಬೇಕು ಸಾಕಬೇಕು ಸಲಹಬೇಕು ಎನ್ನುವ ಕಸ್ತೂರಿ ಸಂದೇಶ... ಭೂ ತಾಯಿಯನ್ನು ನಂಬಿದರೆ ಕೆಡುಕಿಲ್ಲ ಎನ್ನುವ ನೀತಿ ನಮ್ಮ ನಾಡಿನದು.. ಅದಕ್ಕೆ ನಮ್ಮ ನಾಡು ಬಂಗಾರದ ಕಸ್ತೂರಿ ನಿವಾಸ...


 ಹುಚ್ಚು ಮನಸ್ಸನ್ನು ಕಡಿವಾಣದಲ್ಲಿಡುವುದು ಹೇಗೆ ಅಂದರೆ ಹೀಗೆ.. ಅನ್ನುತ್ತಾರೆ ಕೆಲ ಭಲೇ ಹುಚ್ಚರು.. ಆದರೆ ಅದು ಕೆಲ ಕ್ಷಣಗಳು ಮನೋರಂಜನೆಗೆ ಮಾತ್ರ.. ಅದಕ್ಕಾಗಿ ನಾ ಬಂದಿರುವೆ..


ದೂರದ ಬೆಟ್ಟದಲ್ಲಿ ಗಂಧದಗುಡಿ ಇದೆ ಆದರೆ ಗಂಧದ ಘಮ ಘಮ ಎಲ್ಲ ಕಡೆಯೂ ಪಸರಿಸುತ್ತಿದೆ.. ಕನ್ನಡ ನಾಡು ಗಂಧದ ಬೀಡು.. ಅದರ ರಕ್ಷಣೆಗೆ ನಾ ಇರುವೆ..


ವಜ್ರಗಳ ಬಗ್ಗೆ ಕನಸ್ಸು ಕೆಲವೊಮ್ಮೆ ಮುದಕೊಡುತ್ತದೆ.. ಆದರೆ ನಮ್ಮ ನಾಡಿನಲ್ಲಿ ಕಲಾವಿದರೇ ವಜ್ರಗಳು.. ಮುತ್ತು ರತ್ನ ಸೇರಿನಲ್ಲಿ ಅಳೆಯುತ್ತಿದ್ದ ನಾಡು ನಮ್ಮದು.. ಇನ್ನು ಮೂರುವರೆ ವಜ್ರಗಳು ಎರಡು ಕನಸೊಂತು ಅಲ್ಲವೇ ಅಲ್ಲ ಪ್ರಭುಗಳೇ..


 ಮಣ್ಣಲ್ಲಿ ಮಡಿಕೆ ಕುಡಿಕೆ ಮಾಡುವ ಕಾಯಕ ಹೊಂದಿರುವ ನಾನು, ಪ್ರತಿ ಜೀವಿಯಲ್ಲೂ ಪಾಂಡುರಂಗನನ್ನು ಕಾಣುತ್ತೇನೆ.. ಆ ಪಾಂಡುರಂಗನ ಒಲುಮೆ ನಿಮ್ಮ ರಾಜ್ಯಕ್ಕೆ ಸದಾ ಇರಲಿ ಎಂದು ಕೈಯೆತ್ತಿ ಆ ದೇವನಲ್ಲಿ ಪ್ರಾರ್ಥಿಸುತ್ತಿದ್ದೇನೆ..


ನಾಡಿನ ಭಾಷೆ ಗಡಿ ರಕ್ಷಣೆಯ ವಿರುದ್ಧ ನಿಲ್ಲುವವರಿಗೆ ನನ್ನ ಸವಾಲ್.. ಭದ್ರವಾಗಿ ನಾ ನಿಲ್ಲುವೆ ನಿಮ್ಮ ಜೊತೆ ಅಣ್ಣಾ!!!


ಪಂಜರ ಹೇಗಾದರೂ ಇರಲಿ.. ಪ್ರಜೆಗಳ ಮುದ್ದಾದ ಮುಗ್ಧತನ... ಅವರು ಇರುವ ಕಡೆಯಲ್ಲಿಯೇ ಬಂಗಾರ ಬೆಳೆವ ಅವರ ಮನಸ್ಸಿಗೆ ನನ್ನ ಒಂದು ಶಿಳ್ಳೆ!!!


ಪಕ್ಕದ ಊರಿನಲ್ಲಿ ತಿಮ್ಮಪ್ಪನ ನೋಡಲು ಹೋಗಬೇಕಿತ್ತು.. ಆದ್ರೆ ನಿಮ್ಮ ರಾಜ್ಯದಲ್ಲಿ ಆ ಶ್ರೀನಿವಾಸನನ್ನು  ಕಂಡದ್ದು ಖುಷಿಯಾಯಿತು.. ತಿರುಪತಿ ಗಿರಿವಾಸ ಶ್ರೀ ವೆಂಕಟೇಶ.. ನೀನೊಲಿದ ಮನೆ ಮನೆಯು ಲಕ್ಷ್ಮಿನಿವಾಸ.. !



ಕರುನಾಡ ಸಿಂಹಾಸನಧೀಶ್ವರ.. ನಿಮಗೆ ಬಲಗೈಯಾಗಿ  ನಾ ಇರುವೆ.. ಕನ್ನಡದ ಪತಾಕೆ ಮುಗಿಲೆತ್ತರಕ್ಕೆ ಏರಲಿ.. !



ದಾರಿ ತಪ್ಪಿದ ಎಷ್ಟೋ ಜನರನ್ನು ನಿಮ್ಮ ರಾಜ್ಯಭಾರದಲ್ಲಿ ದಾರಿಗೆ ತಂದಿದ್ದೀರ .. ಅದಕ್ಕೆ ಧನ್ಯತಾ ಭಾವ ಸೂಸಲು ತ್ರಿಮೂರ್ತಿಯಾಗಿ ನಾವೆಲ್ಲಾ ಬಂದಿದ್ದೇವೆ..


ಅಣ್ಣಾ ನಿಮ್ಮನ್ನು ನಾವು ಮರೆಯಲಾರೆವು... ಬಹದ್ದೂರ್ ಗಂಡು ಮೆಟ್ಟಿದ ಈ  ನೆಲದಲ್ಲಿ ನಿಮ್ಮನ್ನು  ಅಭಿನಂದಿಸಲು ಬಂದಿದ್ದೇವೆ.. ಮೋಟಾರ್ ಬೈಕ್ ನಲ್ಲಿ


ಪ್ರತಿ ಶುಭ ಸಮಾರಂಭಕ್ಕೆ.. ಬೆಳಗಿನ ಪೂಜೆಗೆ ಸನಾಧಿ ನಾದ ಬೇಕೇ ಬೇಕು.. ಹಾಗೆಯೇ ಗಾನ ಸುಧೆ ಕೂಡ.. ನಿಮ್ಮ ಗಾನ ಸಭೆಗೆ ನಾವಿಬ್ಬರು ಜೊತೆಯಲ್ಲಿ ಜುಗಲ್  ಬಂಧಿ... 


ಕರಾವಳಿಯಿಂದ ಬಿಸಿಲಿಂದ ಮಡಿಕೇರಿಯ ತಂಪಿನ ತನಕ ನಿಮ್ಮ ಎಲ್ಲಾ ಪ್ರಜೆಗಳು ಕ್ಷೇಮವಾಗಿದ್ದಾರೆ..ಅದನ್ನು ತಿಳಿಸಲು ನಾವಿಬ್ಬರು ಹೀಗೆಯೇ ಬಂದಿದ್ದೇವೆ


ಕನ್ನಡ ಕಂಪನ್ನು.. ಇಂಗ್ಲಿಷ್ ಪದಗಳ ಜೊತೆಯಲ್ಲಿ ಹಾಡಿ.. ಎಲ್ಲರನ್ನೂ ರಂಜಿಸಲು ನಾ ಇರುವೆ.. ಬರುವೆ.. ಹಾಡುವೆ..


ಕರುನಾಡು ಹೊಸಬಬೆಳಕಲ್ಲಿ ಸದಾ ಬೀಗುತ್ತಿರಬೇಕು,.. ಬೆಳಗುತ್ತಿರಬೇಕು.. ನನ್ನ ಹಾಡು ಆ ಹೊಸಬೆಳಕಿಗಾಗಿ !!!


ಯೋಗ ದೇಹಕ್ಕೆ ಎಷ್ಟು ಮುಖ್ಯವೋ ಹಾಗೆಯೇ ಛಲ ಕೂಡ ಮನಸ್ಸಿಗೆ ಮುಖ್ಯ.. ಅಂದುಕೊಂಡಿದ್ದನ್ನು ಸಾಧಿಸಬೇಕು.. ಸಾಧಿಸಿದ್ದನ್ನು ಹಂಚಿಕೊಳ್ಳಬೇಕು.. ಅದುವೇ ಜೀವನ.. ಕಾಮನಬಿಲ್ಲಿನ ಈ ಸಂದೇಶ ಪ್ರಜೆಗಳಿಗೆ ಸದಾ ನೀಡುತ್ತಿದ್ದೇವೆ..


ನಮ್ಮ ದೇಶದ ಮುತ್ತು  ಕಾಳಿದಾಸ..ಅವರು ಬರೆದ ಪ್ರತಿ ಕಾವ್ಯವು ಒಂದು ಮುತ್ತಿನ ಕಥೆ.. ನಾ ಸಾಗರದ ಆಳದಿಂದ ಮುತ್ತನ್ನು ತಂದರೆ ಇವರು ಅಕ್ಷರಗಳ ಒಡಲಲ್ಲಿರುವ ಮುತ್ತನ್ನು ಹೊರತರುತ್ತಾರೆ..



ದೇವರಿರುವ ಪ್ರತಿ ತಾಣದಲ್ಲೂ ಮನುಷ್ಯಇರುತ್ತಾನೆ .. ಮನುಷ್ಯ ಇರುವ ಪ್ರತಿ ಕ್ಷಣದಲ್ಲೂ ದೇವರು ಇರುತ್ತಾನೆ ಎನ್ನುವ ಮಾತು ನನ್ನದು.. ಅಲ್ಲವೇ ಅಣ್ಣಾ..



ಹಾಡುತ್ತಾ ಹಾಡುತ್ತಾ ಹಿಮಗಿರಿಯಿಂದ ನಾದ ಗಂಗೆಯನ್ನು ಇಳಿಸುವ ಈ ಗಾಯನದಿಂದ ನಿಮ್ಮ ಮನಸ್ಸನ್ನು ತಣಿಸಲು ನಾ ಬಂದಿರುವೆ..

ನೀವು ಹುಟ್ಟಿದ್ದು ಕರುನಾಡಿನಲ್ಲಿ.. ನಾ ಹುಟ್ಟಿದ್ದು ಕರುನಾಡಿನಲ್ಲಿ.. ಮೆಟ್ಟಿದ್ದು ಕರುನಾಡಿನಲ್ಲಿ.. ಅಣ್ಣಾ ನಿಮಗೆ ಜೈ ಜೈ ಜೈ..


ಕನ್ನಡ ಪದಗಳು ಶಬ್ಧವೇದಿ ಇದ್ದ ಹಾಗೆ.. ಅದು ಹೇಳಬೇಕಾದ್ದು ಹೇಳುತ್ತದೆ.. ಹೇಳಿದಂತೆ ಬರೆಯುತ್ತದೆ.. ಅದು ಈ ಭಾಷೆಯ ತಾಕತ್.. ಅಣ್ಣಾ ನಿಮ್ಮನ್ನು ನೋಡಲು ಜೀಪಲ್ಲಿ ಬಂದಿರುವೆ..



***********

"ಅಣ್ಣ ಹೇಗಿದೆ..?" 

ಕಾಂತಾ..ನಾ ಏನೂ ಹೇಳೋಲ್ಲ.. ನೀ ಬರೆದಿದ್ದನ್ನು ಹೇಳಲು.. ಅದರ ಬಗ್ಗೆ ಪ್ರತಿಕ್ರಿಯೆ ಕೊಡಲು ನನ್ನ ಅಭಿಮಾನಿ ದೇವರುಗಳು ಇದ್ದಾರೆ ... ನಿನ್ನ ಓದುಗರಿದ್ದಾರೆ.. ಅವರ ಮಾತುಗಳನ್ನು ನಾ ಹೀಗೆ ಕುಳಿತು ಕೇಳುತ್ತಿರುತ್ತೇನೆ ನೋಡುತ್ತಿರುತ್ತೇನೆ... ನೋಡು ಹೀಗೆ ಇಲ್ಲಿಯೇ ಕುಳಿತಿರುವೆ.. 



ಅಣ್ಣಾವ್ರ ಇನ್ನೊಂದು ಜನುಮ ದಿನ.. ಇನ್ನೊಂದು ವರ್ಷ ಅವರ ಚಲನ ಚಿತ್ರಗಳಿಂದ ಕಲಿತ ಪಾಠ ನೀತಿ ಸಂಯಮಗಳನ್ನು ಅಳವಡಿಸಿಕೊಳ್ಳಲು ಮತ್ತೊಂದು ದಿನ... ಮತ್ತೊಂದು ವರ್ಷ..!!!!

ಅಣ್ಣಾವ್ರೆ ನೀವು..... ಕರುನಾಡಿನ ಮಹಾರಾಜರೇ ಸರಿ.. ಜನುಮದಿನದ ಶುಭಾಶಯಗಳು.... !

Saturday, April 12, 2014

ಅಣ್ಣಾವ್ರ ಚಿತ್ರಗಳಲ್ಲಿ ಅಪ್ಪಾವ್ರು !!!!!


ತ್ರಿಮೂರ್ತಿ ಚಿತ್ರ ಬಿತ್ತರವಾಗುತ್ತಿತ್ತು

"ಏನು ಮಾಡಲಿ ನಾನು ಏನು ಹೇಳಲಿ"

ಮನದಲ್ಲಿ ಹಾಡು ಮೂಡುತ್ತಿತ್ತು.. "ಏನು ಬರೆಯಲಿ ನಾನು ಏನು ಬರೆಯಲಿ" ಬರೆದಷ್ಟು..  ಮುಗಿಯದಷ್ಟು.. ಸಾಗರದಲ್ಲಿನ ಅಲೆಗಳು, . ನಕ್ಷತ್ರ ಎಣಿಸುವುದು.. ಅಣ್ಣಾವ್ರ ಬಗೆಗಿನ ವಿಷಯಗಳು ಇವೆಲ್ಲಾ ಅಕ್ಷಯ ಬತ್ತಳಿಕೆ... 

ನಾ ಗಮನಿಸಿದಂತೆ.. ಅಣ್ಣಾವ್ರಿಗೆ ತಂದೆಯ ಮೇಲೆ ಅಪಾರ ಭಕ್ತಿ ಪ್ರೀತಿ.. ಅಮ್ಮನನ್ನು ಕಂಡರೂ ಹಾಗೆಯೇ.. ಆದರೆ ಅವರು ಅಪ್ಪನ ಬಗ್ಗೆ ತುಂಬಾ ತುಂಬಾ ಹೇಳಿದ್ದರು.  

ವಿಚಿತ್ರ ಆದರೂ ಸತ್ಯ ಅವರ ಚಿತ್ರಗಳಲ್ಲಿ ಅಮ್ಮ ಎನ್ನುವ ಪಾತ್ರ ಆವರಿಕೊಳ್ಳುತ್ತಿತ್ತು.  ಅಣ್ಣಾವ್ರ ಚಿತ್ರ ಅಂದ್ರೆ ಅಲ್ಲಿ ಅಮ್ಮ ಎನ್ನುವ ಪಾತ್ರ ಮುಂಚೂಣಿಯಲ್ಲಿ ಇದ್ದು ಬಿಡುತ್ತಿತ್ತು. ಪಂಡರಿಬಾಯಿ, ಆದವಾನಿ ಲಕ್ಷಿದೇವಿ, ಎಂ ರಾಜಮ್ಮ, ಜಯಶ್ರೀ, ಪಾಪಮ್ಮ, ಶಾಂತಮ್ಮ, ಕಾಂಚನ, ಇವರೆಲ್ಲ ಅಣ್ಣಾವ್ರಿಗೆ ತಾಯಿ ಪ್ರೀತಿಯನ್ನು ಬೆಳ್ಳಿ ತೆರೆಯ ಮೇಲೆ ಬಂಗಾರದ ಬಟ್ಟಲಿನಲ್ಲಿ ಉಣಬಡಿಸಿದವರು. 

ಮನಸ್ಸು ಯೋಚಿಸುತ್ತಿತ್ತು.. ಅಣ್ಣಾವ್ರ ೨೦೦ ಚಿಲ್ಲರೆ ಚಿತ್ರಗಳಲ್ಲಿ ತಾಯಿ ಪಾತ್ರ ಪ್ರಾಮುಖ್ಯತೆ ಪಡೆದುಕೊಂಡಿದ್ದರು.. ಕೆಲವು ಚಿತ್ರಗಳಲ್ಲಿ ಅಪ್ಪನ ಪಾತ್ರಕೂಡ ವಿಜೃಂಭಿಸಿದ್ದು ಸುಳ್ಳಲ್ಲ.  ಅಂಥಹ ಕೆಲವು ಪಾತ್ರಗಳ ಬಗ್ಗೆ ನನ್ನ ಒಂದು ವಿಹಾರ ಪದಗಳಲ್ಲಿ. 

೧. ಬಡವರ ಬಂಧು: 
ಅಂಗವೈಕಲ್ಯ ಹೊಂದಿದ್ದ ಅಪ್ಪನ ಪಾತ್ರದಲ್ಲಿ ಸಂಪತ್ ಅಮೋಘ ಅಭಿನಯ. ಅವರಿಗೆ ಸದಾ ಸೇವೆ ಮಾಡುತ್ತಾ.. ಎಣ್ಣೆ ಹಚ್ಚಿ ಮೈಯೆಲ್ಲಾ ತಿಕ್ಕಿ... ದೈಹಿಕ ನೋವನ್ನು ಕಡಿಮೆ ಮಾಡುವ ದೃಶ್ಯಗಳು ಸುಂದರವಾಗಿ ಮೂಡಿಬಂದಿವೆ. 
ಅಪ್ಪ ಮಗನ ಪ್ರತಿ ದೃಶ್ಯದಲ್ಲೂ ಅಣ್ಣಾವ್ರ ಕಣ್ಣುಗಳು ಸದಾ ತುಂಬಿರುತ್ತಿದ್ದವು. ಬಡತನದ ಬೇಗೆಯಲ್ಲಿ ಬಳಲಿ ಅಣ್ಣಾವ್ರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಬರುವಷ್ಟರಲ್ಲಿ ಅವರ ಅಪ್ಪ ಇಲ್ಲವಾಗಿದ್ದರು..   ಆ ನೋವಿನ ನಿರ್ವಾತ ತುಂಬಲೋ ಎನ್ನುವಂತೆ ಈ ಚಿತ್ರದಲ್ಲಿನ ದೃಶ್ಯಗಳು ಅಪರೂಪವಾಗಿ ಮೂಡಿಬಂದಿವೆ. 


೨. ಧೃವತಾರೆ 
ಈ ಚಿತ್ರದಲ್ಲಿ..  ಹುಟ್ಟಿದಾಗಿನಿಂದ ಅಪ್ಪನ ಪ್ರೀತಿ ಪಡೆಯದ ಅಣ್ಣಾವ್ರು.. ಅದಕ್ಕೆ ತಕ್ಕಂತೆ ಎರಡನೇ ಹೆಂಡತಿಯ ಕೈಗೊಂಬೆಯಾಗಿ ಮಗನನ್ನು ಹೊರಗೆ ಕಳಿಸಿ.. ಅಪ್ಪ ಎನ್ನುವ ಪಾತ್ರ ಕಂಡರೆ ಬೇಸರಗೊಳ್ಳುವ ಕೆಲವು ದೃಶ್ಯಗಳು. 
ಅಪ್ಪನೇ ತನ್ನ ಕಲೆಗೆ ಬೆಳಕು ತುಂಬುವುದರ ಬದಲು ಬೆಂಕಿ ಹಚ್ಚಿದ್ದು ಎಂದು ಗೊತ್ತಾದಾಗ.. ನಂತರ ನಿಜ ಸಂಗತಿ ತಿಳಿದು  ಅಪ್ಪನನ್ನು ಮಾತಾಡಿಸಲು ಬಂದಾಗ.. ಅಪ್ಪನ ಪಾತ್ರಧಾರಿ ರಾಜಾನಂದ್ ಮತ್ತು ಅಣ್ಣಾವ್ರ ನಡುವಿನ ಮಾತುಗಳು... ಬಾಂಧ್ಯವ.. ಆಹಾ ನೋಡಿ ಸವಿಯಬೇಕು 



೩. ಎರಡು ಕನಸು 
ಈ ಚಿತ್ರದಲ್ಲಿ ಹಾಡುಗಳೇ ಜೀವಾಳ.. ಅಭಿನಯ ಸೂಪರ್.. ಮೊದಲ ಪ್ರೀತಿಯ ಗುಂಗು ಇಡಿ ಚಿತ್ರದಲ್ಲಿ ಆವರಿಸಿರುತ್ತೆ  ಆರಂಭಿಕ ದೃಶ್ಯಗಳಲ್ಲಿ ತಂದೆಯ ಪಾತ್ರಧಾರಿ ಅಶ್ವಥ್ ಮತ್ತು ಅಣ್ಣಾವ್ರ ನಡುವೆ ಒಂದು ಚಿಕ್ಕ ಸಂಭಾಷಣೆ ಮನಸ್ಸೆಳೆಯುತ್ತದೆ. 

ಮನೆತನದ ಹಗೆಯಿಂದಾಗಿ ನಡೆಯಬೇಕಾಗಿದ್ದ ಮದುವೇ ನಿಂತು ಹೋಗುತ್ತದೆ.  ಆಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರುತ್ತಾಳೆ. ವೈದ್ಯರು ಮಾತ್ರೆ., ಚಿಕಿತ್ಸೆ ಇಂದ ಗುಣವಾಗೋಲ್ಲ.. ನಿಮ್ಮ ತಾಯಿಯನ್ನು ಉಳಿಸಿಕೊಳ್ಳುವ ಶಕ್ತಿ ನಿಮ್ಮ ಮಾತಲ್ಲಿ ಇದೆ.. ನೀವು ಅವರ ಇಚ್ಛೆಗೆ ವಿರುದ್ಧವಾದ ಕೆಲಸ ಮಾಡೋಲ್ಲ ಎನ್ನುವ ಭರವಸೆ ಕೊಟ್ಟರೆ ಸುಧಾರಿಸುತ್ತಾರೆ.. ಎಂದು ಹೇಳಿದಾಗ.. ಅಣ್ಣಾವ್ರು ತಮ್ಮ ಪ್ರೀತಿಯನ್ನು ಬಿಡಲಾರದೆ  ತಾಯಿಯನ್ನು ಕಳೆದುಕೊಳ್ಳಲಾರದೆ  ತೊಳಲಾಡುತ್ತಾರೆ.. ಆಗ ಅವರ ತಂದೆಯ ಪಾತ್ರಧಾರಿ ಕನ್ನಡ ಸಿನಿಮಾ ಜಗತ್ತಿನ ಅಪ್ಪಾ "ಅಶ್ವತ್" ಹೇಳುವುದು ಎರಡೇ ಮಾತು.. 

"ರಾಮು ಇದು ನಿನ್ನ ಕೈಯಲ್ಲ.. ಕಾಲು"  ಇದೊಂದು ಅಪ್ಪ ಮಗನ ಮಧ್ಯೆ ನಡೆಯುವ ಸುಮಾರು ಹತ್ತು ಸೆಕೆಂಡುಗಳ ಪರಿಣಾಮಕಾರಿ ದೃಶ್ಯ.  ಅಪ್ಪ ತನ್ನ ಹೆಂಡತಿಯನ್ನು ಬದುಕಿಸಿಕೊಳ್ಳಲು ಮಗನ ಮುಂದೆ ಬೇಡುವ ದೃಶ್ಯ.. ಅಣ್ಣಾವ್ರು ಹಾಗು ಅಶ್ವತ್ ಇಬ್ಬರೂ ಸೂಪರ್ ಈ ದೃಶ್ಯದಲ್ಲಿ.. 

೪. ಬಿಡುಗಡೆ
 ಮಾಡದ ತಪ್ಪಿಗೆ ಗಲ್ಲು ಶಿಕ್ಷೆಗೆ ಗುರಿಯಾಗುವ ಅಪ್ಪನ ಪಾತ್ರದಲ್ಲಿ ಅಶ್ವತ್.. ಅವರನ್ನು ಉಳಿಸಿಕೊಳ್ಳುವ ಪಾತ್ರದಲ್ಲಿ ಅಣ್ಣಾವ್ರು.  ಇಡಿ ಚಿತ್ರದಲ್ಲಿ ಅಪ್ಪ ಮಗನ ಸಂಭಾಷಣೆ, ಭಾವಾಭಿನಯ ಸೂಪರ್. ಪ್ರಾಯಶಃ ಅಣ್ಣಾವ್ರ ಚಿತ್ರದಲ್ಲಿ ಅಪ್ಪನ ಪಾತ್ರಕ್ಕೆ ಅತೀವ ಪ್ರಾಮುಖ್ಯತೆ ಕೊಟ್ಟು ಚಿತ್ರದುದ್ದಕ್ಕೂ ಚಿತ್ರಗಳಲ್ಲಿ ಮೊದಲನೆಯದು ಅನ್ನಿಸುತ್ತದೆ. ಇಡಿ ಚಿತ್ರವನ್ನು ನೋಡಬೇಕು ಸುಂದರ ಅನುಭವ.

ಆ ಕಾಲದಲ್ಲಿಯೇ ಬಿಡುಗಡೆಗೊಂದು ಯಶ್ವಸಿಯಾದ ಮೇಲೂ.. ಚಿತ್ರದ ಸಂದೇಶದ ಸ್ಪೂರ್ತಿಯ ಮೇಲೆ ಚಿತ್ರದ ಅಂತ್ಯ ಬದಲಾಯಿಸಿ ಮತ್ತೆ ಬಿಡುಗಡೆಗೊಂಡ ಚಿತ್ರ ಇದು. 



ಹೀಗೆ ಅಣ್ಣಾವ್ರ ಚಿತ್ರಗಳು ಒಂದು ರೀತಿಯಲ್ಲಿ ವಿಶ್ವವಿದ್ಯಾಲಯ ವಿದ್ದಂತೆ ಪ್ರತಿಚಿತ್ರಗಳಲ್ಲೂ ಸಂದೇಶ, ಸಾಮಾಜಿಕ ಕಳಕಳಿ, ಸುಂದರ ಅಭಿನಯ.. ಕಲಾವಿದರೆಲ್ಲರೂ ಮನೆಯೊಳಗಿನ ನೆಂಟರಂತೆ ಅಭಿನಯ ನೀಡುತ್ತಿದ್ದದು.. ಹಾಡುಗಳು, ಸಂಭಾಷಣೆ.. 
೨೦೭ ಚಿತ್ರಗಳು ೨೦೭ ಯುಗಗಳಂತೆ.. 

ಅಣ್ಣಾವ್ರ ಪುಣ್ಯ ತಿಥಿಯ ಸಂದರ್ಭದಲ್ಲಿ ನನಗೆ ಅನ್ನಿಸಿದ ಕೆಲವು ಮಾತುಗಳು ಲೇಖನವಾಗಿ ಮೂಡಿ ಬಂದಿದೆ.. 

ಅವರ ಚಿತ್ರಗಳೇ ಸಾಕು.. ಸುವರ್ಣ ಬದುಕನ್ನು ಬಂಗಾರವಾಗಿಸಲು....!!!!