Monday, March 25, 2013

ಹಾಲಿನ ಸಮುದ್ರದಲ್ಲಿ ಹಾರಾಡಿದ "ಮೈನಾ" (2010)

ಬಹಳ ತಿಂಗಳುಗಳ ನಂತರ ಒಂದು ಸಿನೆಮಾಕ್ಕೆ ಹೋಗಬೇಕು ಅನ್ನಿಸಿತು. ಮಗಳಿಗೆ ಇವತ್ತು ಪರೀಕ್ಷೆ ಮುಗಿದಿತ್ತು. ಎಲ್ಲಿಗಾದರೂ ಕರೆದುಕೊಂಡು ಹೋಗೋಣ ಅನ್ನಿಸಿ ಸರಿ ದೂದ್ ಸಾಗರ್ ತೋರಿಸುವ ಎಂದು "ಮೈನಾ" ಚಿತ್ರಕ್ಕೆ "ಶ್ರೀವಿತಲ್" ಹೋದೆವು.

ಚಿತ್ರ ಕೃಪೆ - ಅಂತರ್ಜಾಲ 
ಇನ್ನು ಚಿತ್ರದ ಬಗ್ಗೆ ಆಗಲೇ ನೂರಾರು ವಿಮರ್ಶೆಗಳು, ಹೊಗಳಿಕೆಗಳು, ಗಲ್ಲಾಪೆಟ್ಟಿಗೆಯಲ್ಲೂ ಸದ್ದು ಮಾಡಿದ ಚಿತ್ರ ಎಂದು ಬಣ್ಣಿಸಿ ಬರೆದ ಲೇಖನಗಳು ಮೈನಾ ಹಕ್ಕಿಯಂತೆಯೇ ಹಾರಾಡುತ್ತಿದೆ. ನನಗೆ ಅನ್ನಿಸಿದ ಒಂದೆರಡು ಮಾತುಗಳನ್ನ ಬರೆಯೋಣ ಎನ್ನಿಸಿತು. ಹಾಗಾಗಿ ಈ ಬ್ಲಾಗ್ ಲೇಖನ!
ಚಿತ್ರ ಕೃಪೆ - ಅಂತರ್ಜಾಲ 
ಮೈ ನವಿರೇಳಿಸುವಂತಹ ಆರಂಭಿಕ ಸಾಹಸ ದೃಶ್ಯಗಳಿಂದ ಶುರುವಾಗುತ್ತದೆ ಚಿತ್ರ. ನಂತರ ನಿಧಾನಗತಿಯಲ್ಲಿ  ಕಾವೇರಿಸುತ್ತಾ ಸಾಗುತ್ತದೆ. ಈ ರಿಯಾಲಿಟಿ ಶೋಗಳು ಮನುಷ್ಯರನ್ನು ಮಾನವೀಯ ಕಂಪನಗಳಿಂದ ಹೇಗೆ ದೂರ ಒಯ್ಯಬಲ್ಲದು ಎಂದು ಸೂಕ್ಷ್ಮವಾಗಿ ಪರಿಚಯಿಸುತ್ತಾ ಹೋಗುತ್ತದೆ.

ನಂತರ ಶುರುವಾಗುತ್ತದೆ ರಿಯಲ್ ಸಿನಿಮಾ. ದೃಶ್ಯ ಕಾವ್ಯವಾಗಿ ಹರಿದಾಡುತ್ತದೆ. ಪ್ರತಿಯೊಂದು ಸನ್ನಿವೇಶವನ್ನು ಕುಸುರಿಗಾರನ ಕೈಚಳಕದಲ್ಲಿ ಅರಳಿದ ಕಲೆಯಂತೆ ಸಾಗುತ್ತದೆ. ಪಾತ್ರಧಾರಿಗಳು ಕೂಡ ಆ ಪಾತ್ರಗಳಿಗೆ ಎಷ್ಟು ಬೇಕೋ ಅಷ್ಟು ಅಭಿನಯವನ್ನು ಮುದ್ದಾಗಿ ಅಭಿನಯಿಸಿದ್ದಾರೆ.

ಮನಸೆಳೆಯುವ ಅಂಶಗಳು :
  •  ಚೇತನ್ ಅವರ ಆಕರ್ಷಕ ಮೈಕಟ್ಟು, ಓಡುವ ಶೈಲಿ, ಸುಂದರ ನಗು ಚೆಲ್ಲುವ ಕಣ್ಣುಗಳು, ಜಲಪಾತದಂತೆಯೇ ಹರಿದಾಡುವ ತಲೆಗೂದಲು
  • ಬೇಸರವೆನಿಸುವ ತಬಲಾ ನಾಣಿಯ ಅದೇ ಕುಡುಕನ ಶೈಲಿಯ ಮಾತುಗಳು, ಆದರೆ ಬರು ಬರುತ್ತಾ ನಾಯಕನಿಗೆ ಅವನ ಪ್ರೇಮಕ್ಕೆ  ಸಹಾಯ ಮಾಡುವ ಹೃದಯ ಸಿರಿವಂತಿಕೆ (ಬಹುಶಃ ಸಿನಿಮಾದಲ್ಲಿ ಮಾತ್ರ ಸಿಗುತ್ತೆ)
  •  ಸಾಧು ಕೋಕಿಲ ಅವರ ಹಾಸ್ಯ ನಟನೆಗಿಂತ ಹಿನ್ನೆಲೆ ಸಂಗೀತದಲ್ಲಿ ಗಮನ ಸೆಳೆಯುತ್ತಾರೆ (ಕನ್ನಡ ಚಿತ್ರರಂಗದಲ್ಲಿ ಅವರಂತೆ ಪರಿಣಾಮಕಾರಿಯಾಗಿ ಹಿನ್ನೆಲೆ ಸಂಗೀತ ಕೊಡುವರು ಇನ್ನೊಬ್ಬರಿಲ್ಲಾ ಎನ್ನಿಸುತ್ತದೆ)
  • ಪೋಲಿಸ್ ಸಮವಸ್ತ್ರದಲ್ಲಿ (ಮೊದಲಬಾರಿಗೆ) ಮೈ ತುಂಬಾ ಬಟ್ಟೆ ಹಾಕಿಕೊಂಡು ಮುದ್ದಾಗಿ ಕಾಣುವ  ಸುಮನ್ ರಂಗನಾಥ್
  • ಸಾಹಸ ದೃಶ್ಯಗಳು ಗಮನ ಸೆಳೆಯುತ್ತವೆ. 
  • ಚಿತದ ೯೮ % ಭಾಗ ಅತ್ಯುತ್ತಮ ನಿರ್ದೇಶನ ಮಾಡಿರುವ ನಾಗ್ ಶೇಖರ್! (ಇನ್ನುಳಿದ ೨% ಮಾಹಿತಿಗೆ ಲೇಖನದ ಕೊನೆಯಲ್ಲಿ ನೋಡಿ) 

ಹುಚ್ಚೆಬ್ಬಿಸುವ ಅಂಶಗಳು:
ಚಿತ್ರ ಕೃಪೆ - ಅಂತರ್ಜಾಲ
  • ಹಿರಿಯ ತಾರೆ "ಸರಿತಾ" ನಂತರ ಕಣ್ಣುಗಳಲ್ಲೇ ಅಭಿನಯಿಸುವ ನಾಯಕಿ ನಿತ್ಯಾ ಮೆನನ್. ಅವರ ಪಾತ್ರಕ್ಕೆ ಮಾತುಗಳೇ ಬೇಡವಾಗಿತ್ತು ಅನ್ನಿಸುವಷ್ಟು ಅದ್ಭುತವಾಗಿವೆ ಕಣ್ಣಿನ ಅಭಿನಯ 
  • ಕಲರಫುಲ್ ಎನ್ನುವಾಗ ಕಣ್ಣಲ್ಲಿ ಕಾಣುವ ಕಾಂತಿ 
  • ಚಿಕ್ಕ ವಯಸ್ಸಿನಲ್ಲಿ ತೆವಳಲು ಮಜಾ ಎನ್ನಿಸುತ್ತಿತ್ತು.. ತೆವಳುವುದೇ ಜೀವನದ ಅಂತಿಮ ಎನ್ನುವ  ದೃಶ್ಯದಲ್ಲಿ ಕಣ್ಣುಗಳು ಕಾರುವ ಭಾವ 
  • ನನಗೆ ಗಂಡ ಬೇಕು ಎನ್ನುವಾಗ ಕಣ್ಣಲ್ಲಿ ಕಾಣುವ ದೂದ್ ಸಾಗರ!
  • ನಿತ್ಯಾ ಮೆನನ್ ಅವರದು "ಮೈನಾ"ದಲ್ಲಿ "ಮೈ"ನಾ  ತೋರಿಸದೆ ಮನಸನ್ನು ಬಿಚ್ಚಿಟ್ಟ ಒಂದು ಸುಂದರ ಪಾತ್ರ 
ಕುರ್ಚಿಯ ಮೇಲೆ ನಿಲ್ಲಬೇಕು ಎನ್ನಿಸುವ ಅಂಶಗಳು:


ಜಾದುಗಾರ ಸತ್ಯ ಹೆಗಡೆ (ಚಿತ್ರ ಕೃಪೆ - ಅಂತರ್ಜಾಲ )
  • ಈ ಚಿತ್ರದ ನಿಜವಾದ ನಾಯಕ ಛಾಯಾಗ್ರಾಹಕ ಸತ್ಯ ಹೆಗಡೆ. ಕ್ಯಾಮೆರಾಗಳನ್ನು ಎಲ್ಲೆಲ್ಲಿ ಇಟ್ಟಿದ್ದಾರೆ ಎನ್ನುವ ಅನುಮಾನ ಹುಟ್ಟಿಸುವಷ್ಟು ದೃಶ್ಯಗಳು ಶ್ರೀಮಂತವಾಗಿವೆ. 
  • ಸಮುದ್ರ ತೀರದ ದೃಶ್ಯಗಳು, ಕ್ಯಾಮೆರಾಗಳು ಹರಿದಾಡುವ ಸೊಗಸು ನೋಡಿಯೇ ಅನುಭವಿಸಬೇಕು 
  • ಮಳೆ ದೃಶ್ಯಗಳನ್ನು ಬೊಂಬಾಟ್ ಆಗಿ ಚಿತ್ರೀಕರಿಸಿದ್ದಾರೆ
  • ದೂದ್ ಸಾಗರ ಜಲಪಾತದ ಕಣಿವೆ ದೃಶ್ಯಗಳು, ಕ್ಯಾಸಲ್ ರಾಕ್, ಬ್ರಿಗಾಂಜ್ ಘಾಟ್, ರೈಲು ಪಟ್ಟಿಯ ಮಧ್ಯೆ ಬರುವ ಸುರಂಗಗಳು, ಪ್ರತಿಯೊಂದು ದೃಶ್ಯಕಾವ್ಯ. ಇನ್ನೊಮ್ಮೆ ಈ ಚಿತ್ರವನ್ನು ನೋಡಬೇಕೆನಿಸಿದರೆ ಅದು ಸತ್ಯ ಅವರ ಅದ್ಭುತ ಕೆಲಸಕ್ಕೆ. ಜಲಪಾತಗಳನ್ನು ಇಷ್ಟು ಸುಂದರವಾಗಿ ಸೆರೆಹಿಡಿಯಬಹುದು ಎಂದು ತೋರಿಸಿದ್ದಾರೆ. ಅವರ ಶ್ರಮಕ್ಕೆ ಶಿರಬಾಗಿ ನಮಿಸುವೆ 
ತಲೆಕೂದಲು ಕಿತ್ತು ಕೊಳ್ಳಬೇಕು ಅನ್ನಿಸುವ ಅಂಶಗಳು:
  • ಚಿತ್ರದುದ್ದಕ್ಕೂ ಮೈ ಮುಚ್ಚುವ ಪೋಲಿಸ್ ಧಿರುಸಿನಲ್ಲಿ ಸುಂದರವಾಗಿ ಕಾಣುವ ಸುಮನ್ ರಂಗನಾಥ್ ಕಡೆ ದೃಶ್ಯದಲ್ಲಿ ಒಂದು ಸುಂದರ ಹಾಡನ್ನು ಗಬ್ಬೆಬ್ಬಿಸಿ ರಿಮಿಕ್ಸ್ ಅನ್ನುವ ಕೆಟ್ಟ ತಂತ್ರ ಮಾಡಿ ವಯೋವೃದ್ಧರಾದ ಕೆಲ ನಟರನ್ನ ಬಾಯಿ ಬಾಯಿ ಬಿಡುತ್ತಾ ಚಿತ್ರೀಕರಿಸಿರುವ ಹಾಡು. ಅದಕ್ಕೆ  ಹಿರಿಯ ನಟರನ್ನು ಬಳಸಿಕೊಂಡ ರೀತಿ (ಲೋಕನಾಥ್, ಪಾರ್ಥಸಾರಥಿ, ಉಮೇಶ್)... ದೇವರೇ ಕಾಪಾಡಪ್ಪ! 
  • ರಾತಿ ಪೂರ್ತ ಸಂಕಟ ಅನುಭವಿಸಿ ಹೆತ್ತ ಮಗುವನ್ನು ನಾಯಿ ಕಚ್ಚಿಕೊಂಡು ಹೋಯಿತು ಎನ್ನುವ ಹಾಗೆ... ಒಳ್ಳೆ ಅಂತ್ಯ ಕೊಡಬೇಕಾದ ಜಾಗದಲ್ಲಿ @#$@#$@#$!
  • ಈ ಕಡೆ ಪ್ರೇಮ ಕಾವ್ಯವೂ ಆಗದೆ, ಸೇಡಿನ ರಾಜಕಾರಣವೂ ಆಗದ ಎಡಬಿಡಂಗಿಯಂತಹ ಅಂತ್ಯ
  • ಸಂಜು ಮತ್ತು ಗೀತ ದುಖಾಂತ್ಯವಾಯಿತು ಗಲ್ಲಾ  ಪೆಟ್ಟಿಗೆ ತುಂಬಿತ್ತು ಅಂತ   ಈ ಚಿತ್ರದಲ್ಲಿಯೂ  ಬೇಡದ ಅದೇ ದೋರಣೆಯನ್ನು ತೋರಿರುವುದು. 
  • ಒಳ್ಳೆಯ ನಟರನ್ನು ಪಾತ್ರ ಪೋಷಣೆ ಇಲ್ಲದೆ ವ್ಯರ್ಥ ಮಾಡಿರುವುದು (ಸುಹಾಸಿನಿ, ಅನಂತನಾಗ್, ಜೈ ಜಗದೀಶ್)
  • ಶರತ್ ಕುಮಾರ್ ಈ ಪಾತ್ರಕ್ಕೆ ಬೇಕಿತ್ತೆ ಎನ್ನುವ ಗೊಂದಲ ಕಾಡುತ್ತದೆ

ಹೊಡಿ ಬಡಿ ಚಚ್ಚು ಎನ್ನುವ ಸಿದ್ಧ ಸೂತ್ರಗಳ ಮಧ್ಯೆ ನಿಜಕ್ಕೂ ಉಸಿರಾಡಿಸುವ ಸುಂದರ ಚಿತ್ರ. ನೋಡಿ ಅಪರೂಪಕ್ಕೆ ಎಂಬಂತೆ ಬಂದಿರುವ ಒಂದು ಸುಂದರ ಕನ್ನಡ ಚಿತ್ರವನ್ನು ಬೆಂಬಲಿಸಿ. 

Thursday, March 14, 2013

Bangaradha Manushya (1972)

The first in the list features evergreen movie in Kannada movie land “Bangarada Manushya”.  It ran successfully for two years with out a break, a record in Kannada cini industry.  The re-release after a gap of 20 years also ran in to 100 days.

Part I
It was based on a novel by T K Ramarao, directed by Siddalingaiah, Starring Rajkumar, Bharathi, Balakrishna, Vajramuni in the leads.

Rajkumar returns from the city to visit his Sister’s house in the village, he comes to know his brother in law finished duty on the earth, and is on the way to heavenly abode. The moment his sister (played beautifully by Character Artist “Aadhavani Lakshmidevi”), and her children (Two sons played by Srinath, and Vajramuni), and a daughter sees Rajkumar they ran and hug him.  They all knew, he is the one who can bail them out. 

In this scene, she will be having a rich elder Brother (Lokanath), but still her hearts beats for the younger brother who was still studying, but she will have more faith on her younger brother(Rajkumar) than  on elder brother. 

This shows money is not the criteria for love and affection, always the relationship is between heart to heart, but not from wallet to heart.

Part II

When Rajkumar, retrieves the land from the mortgage, he decides to plough on his own.  After the basic rituals, instead of starting to plough, he gently massages the bulls, and then he lifts soil from the land, and prays to the goddess earth to support his noble gesture to save his sister’s family from the troubled waters.

You will fail to choose the winner who is the most innocent, the bulls, the earth, or the Hero.  It brings tears down the cheeks any time I visit this scene.

This teaches, never neglect the hands which lend you the support in the crisis, and also, never forget to seek the divine intervention, which helps you to clear all the path strewn with thorns.

The character of Rajeeva played by Rajkumar was a gem in its own respect.  Sometimes after reading the novel, and watching the movie, you will tempted to debate whether novel was written by keeping Rajkumar in the mind, or Rajkumar was born to portray the character of Rajeeva.  It is like debating whether egg came first or the hen.