ವರ್ಣಮಯವಾಗಿ ಕಂಡ ಶ್ರೀ ಕೃಷ್ಣದೇವರಾಯರು .. ಮುಂದಿನ ಚಿತ್ರಗಳಲ್ಲಿ ವರ್ಣವಾಗಬಹುದು ಅಂತ ನಿರೀಕ್ಷೆಯಿದ್ದಾಗ ಬಂದ ಚಿತ್ರ ಮಿ. ರಾಜಕುಮಾರ್..
ಬಹುಶಃ ನಟನ ಹೆಸರಲ್ಲಿ ಚಿತ್ರವಾಗಿದ್ದು ನನ್ನ ಜ್ಞಾನದಲ್ಲಿ ಇದೆ ಮೊದಲಿರಬಹುದು.. ಕನ್ನಡದಲ್ಲಿ. ಇತರ ಭಾಷಾ ಚಿತ್ರರಂಗದಲ್ಲಿ ಆಗಿರಬಹುದು..
ಇರಲಿ ಮತ್ತೆ ಈ ಚಿತ್ರದ ವಿಷಯಕ್ಕೆ ಬಂದರೆ.. ಯು ಟ್ಯೂಬ್ ಇಲ್ಲ ಮಾರಾಯ ಅಂತ .. ನನ್ನ ವಿಸಿಡಿ ಭಂಡಾರದಲ್ಲಿ ಈ ಚಿತ್ರ ಏಕೆ ಇಲ್ಲ ಅಂತ ಖಡ್ಗ ಹಿರಿದು ನಿಂತಿತ್ತು... ಜಾಲತಾಣದಲ್ಲಿ ಜಾಲಾಡಿದರೂ ಅದು ಅರಣ್ಯ ರೋದನವಾಯಿತು .. .
ಏನು ಮಾಡಲಿ ನಾನು ಏನು ಹೇಳಲಿ ಅಂತ ಸುಮ್ಮನೆ ಕೂತು ವಾರಗಳೇ ಕಳೆದವು.. ಅರೆ ಏಪ್ರಿಲ್ ೧೨ ಬರುತ್ತಿದೆ.. ಅಷ್ಟರ ಹೊತ್ತಿಗೆ ಒಂದೂವರೆ ಶತಕ ಅಂತ ಇದ್ದ ಗುರಿ ಮಠ ಸೇರುವ ಪರಿಸ್ಥಿತಿ ಬಂದಿದೆ..
ಸರಿ.. ಊಟಕ್ಕೆ ಕರೆದವರು ಬರುವ ನಿರೀಕ್ಷೆಯಿದ್ದಾಗ ಅವರಿಗಾಗಿ ಒಂದು ಎಲೆ ಹಾಕಿ.. ಕಾಯುತ್ತಾ ಮಿಕ್ಕ ಪಂಕ್ತಿಯ ಊಟಕ್ಕೆ ಚಾಲನೆ ಕೊಡುವುದು ಸರಿ ಎನ್ನಿಸಿ.. ಈ ಚಿತ್ರದ ಬಗ್ಗೆ ಜಾಲತಾಣದಲ್ಲಿ ಸಿಕ್ಕ ಕೆಲವು ಮಾಹಿತಿಗಳನ್ನು ಹಂಚಿಕೊಂಡು ಮುಂದಿನ ಚಿತ್ರದ ಕಡೆಗೆ ಹೆಜ್ಜೆ ಹಾಕುತ್ತೇನೆ.. ನಿಮ್ಮೆಲ್ಲರ ಕ್ಷಮೆ ಕೋರಿ, ರಾಜಕುಮಾರ್ ಅವರ ಕ್ಷಮೆ ಕೋರಿ ಮುಂದುವರೆಯುತ್ತೇನೆ..
ಮತ್ತೆ ಶಪಥ ಕೂಡ ಮಾಡುತ್ತೀನಿ. ಈ ಚಿತ್ರದ ವಿಸಿಡಿಯನ್ನು ಹುಡುಕಿ.. ಚಿತ್ರ ನೋಡಿ.. ಇದರ ಮುಂದೆ ಬರೆಯುತ್ತೇನೆ.. ಓಕೇ ನಾ..
ಇದು ರಾಜಕುಮಾರ್ ಅವರ ಎರಡನೇ ವರ್ಣ ಚಿತ್ರ... ಮೊದಲನೆಯದು ಐತಿಹಾಸಿಕವಾಗಿತ್ತು.. ಎರಡನೆಯದು ಸಾಮಾಜಿಕ.. ಹಾಗಾಗಿ ರಾಜಕುಮಾರ್ ಅವರ ಸಾಮಾಜಿಕ ಚಿತ್ರಗಳಲ್ಲಿ ಇದೆ ಮೊದಲನೇ ವರ್ಣ ಚಿತ್ರ..
ಪ್ರಸಿದ್ಧ ನಿರ್ಮಾಪಕ ನಿರ್ದೇಶಕ ಬಿ ಎಸ್ ರಂಗ ಅವರ ವಿಕ್ರಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾಗಿದ್ದು ಈ ಚಿತ್ರ..
ಕಥೆ ಚಿತ್ರಕತೆ ಜಿ ಬಿ ಬಾಲಸುಬ್ರಮಣ್ಯಂ ಅವರದ್ದು
ಸಂಭಾಷಣೆ ಮತ್ತು ಹಾಡುಗಳು ಚಿ ಉದಯಶಂಕರ್
ಸಂಗೀತ ಎಸ್ ರಾಜೇಶ್ವರರಾವ್
ಛಾಯಾಗ್ರಹಣ ಬಿ ಎನ್ ಹರಿದಾಸ್ ಅವರದ್ದು
ರಾಜಕುಮಾರ್ ಅವರ ಜೊತೆ ರಾಜಶ್ರೀ ನಾಯಕಿ
ಉಳಿದಂತೆ ನಾಗಪ್ಪ, ದ್ವಾರಕೀಶ್, ರಾಘವೇಂದ್ರರಾವ್, ರಮಾದೇವಿ, ಬೆಂಗಳೂರು ನಾಗೇಶ್ ಮುಂತಾದವರಿದ್ದಾರೆ.
ಹಾಡುಗಳು ಜನಪ್ರಿಯವಾಗಿದೆ ಗಂಗಿ ನಿನ್ ಮ್ಯಾಲೆ ನಂಗೆ ಮನಸೈತೆ ಇಂದಿಗೂ ಜನಪ್ರಿಯ..

























