Saturday, November 4, 2023

ಹಣೆಯ ವಿಭೂತಿ ಅಳಿಸಬಹುದು ಬರಹ ಸಾಧ್ಯವೇ .. ಚಂದ್ರಕುಮಾರ (1963) (ಅಣ್ಣಾವ್ರ ಚಿತ್ರ ೪೬/೨೦೭)

ಒಂದು ಕಡೆ ಸೋಲುತ್ತಿದ್ದೇನೆ ಎನ್ನುವ ಹಪಾಹಪಿ.. ಇನ್ನೊಂದು ಕಡೆ ಗೆಲ್ಲಬೇಕು ಎನ್ನುವ ಛಲ.. ಈ ದ್ವಂದವನ್ನು ಅದ್ಭುತವಾಗಿ ಅಭಿನಯಿಸಿದ್ದಾರೆ ರಾಜಕುಮಾರ್ ಅವರು.. ಹಣೆಯಲ್ಲಿರುವ ವಿಭೂತಿಯನ್ನೋ. ಕುಂಕುಮವನ್ನೋ, ನಾಮವನ್ನೋ ಅಳಿಸಿಕೊಂಡು ಹೊಸತಾಗಿ ಹಾಕಿಕೊಳ್ಳಬಹುದು.. ಆದರೆ ಬ್ರಹ್ಮ ಬರೆದ ವಿಧಿಬರಹ.. ಅನುಭವಿಸಲೇ ಬೇಕು.. ಇದು ಅಳಿಸಲಾರದ ವಿಧಿ ಲಿಖಿತ ಎನ್ನುವ ತಳಹದಿಯ ಮೇಲೆ ಇರುವ ಈ ಚಿತ್ರ.. ರಾಜಕುಮಾರ್ ಅವರ ಶ್ರದ್ಧೆ ಚಿತ್ರದುದ್ದಕ್ಕೂ ಕಾಣುತ್ತದೆ.. ಕಟ್ಟು ಮಸ್ತಾದ ಶರೀರ.. ಆ ಧ್ವನಿ.. ಸೋಲುತ್ತಿದ್ದೇನೆ ಅಂತ ಗೊತ್ತಾಗುತ್ತಿದ್ದರೂ, ಅದನ್ನು ಮೀರಿ ನಿಲ್ಲುತ್ತೇನೆ ಎಂದು ತನ್ನ ಸಹಪಾಠಿಗೆ ಹಾಕಿದ ಸವಾಲು ಪದೇ ಪದೇ ನೆನಪಿಗೆ ಬಂದು ವಿಚಲಿತರನ್ನಾಗಿ ಮಾಡುತ್ತಿರುತ್ತದೆ. 

ಆ ತೊಳಲಾಟವನ್ನು ಒಂದು ಚೂರು ಮೀರದಂತೆ .. ಹದವಾಗಿ ಅಭಿನಯಿಸಿ ತೋರಿಸಿದ್ದಾರೆ ರಾಜಕುಮಾರ್ ಅವರು..  

ಇದೊಂದು ಟಿ  ಮಾದರ್ ಸಂಜೀವನಿ ಅವರ ಪುಟ್ಟ ಕಥೆಯನ್ನು ಸಿನೆಮವನ್ನಾಗಿ ಮೂಡಿಸಿದ್ದಾರೆ ನಿರ್ದೇಶಕ ಕಂ ಛಾಯಾಗ್ರಾಹಕ ಎನ್ ಎಸ್ ವರ್ಮಾ. ಸಂಗೀತ ಆಯೋಜನೆ ಟಿ ಚಲಪತಿ ರಾವ್ ಮತ್ತು ಎಂ ವೆಂಕಟರಾಜು.  ಇದಕ್ಕೆ ಹೊಂದುವಂಥ ಸಂಭಾಷಣೆ ಎಸ್ ಕೆ ಕರೀಂ ಖಾನ್ ಅವರದ್ದು. ಎಚ್ ಎಂ ಬಾಬಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ೧೯೬೩ರಲ್ಲಿ ತೆರೆಗೆ ಬಂತು. 

ಪ್ರಚಂಡ ಎನ್ನುವ ಪಾತ್ರದಲ್ಲಿ ರಾಜಕುಮಾರ್ ವಿಜೃಂಭಿಸಿದ್ದಾರೆ, ಅವರ ಮುಖಭಾವ,  ಅಭಿನಯ ನೋಡೋದೇ ಒಂದು ಖುಷಿ. ಚಂದ್ರಕುಮಾರನ ಪಾತ್ರದಲ್ಲಿ ಉದಯಕುಮಾರ್ ಹದವಾಗಿ ಅಭಿನಯಿಸಿದ್ದಾರೆ. ಆತನ ನಾಯಕಿಯಾಗಿ ಕಪ್ಪು ಬಿಳುಪಿನ ಚಿತ್ರಗಳ ಚೆಲುವೆ ಕೃಷ್ಣಕುಮಾರಿ. ಒಂದಷ್ಟು ಹಾಸ್ಯಬೇಕು ಅಲ್ಲವೇ.. ನರಸಿಂಹರಾಜು ಅದಕ್ಕೆ ನಿಂತಿದ್ದಾರೆ.. ಇವರು ನಾಲ್ಕು ಪಾತ್ರಗಳ ಸುತ್ತಲೇ ಸುತ್ತುವ ಚಿತ್ರದಲ್ಲಿ ಉಳಿದ ಪಾತ್ರಗಳಾದ ಗುರುಗಳು, ಶಿಷ್ಯ ಗಣಿತಜ್ಞ ಮಾರ್ತಾಂಡ .. ಬಾಲಣ್ಣ ಒಂದು ಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.. ಉಳಿದಂತೆ ಇತರ ಕಲಾವಿದರ ಅಭಿನಯ ಚಿತ್ರಕ್ಕೆ ಅಗತ್ಯವಿದ್ದಷ್ಟು ಇದೆ.. 

ಚಿತ್ರದ ಆರಂಭದಲ್ಲಿ ರಾಜ್ ಕುಮಾರ್ ಅವರ ಮಾತುಗಳು ಇಷ್ಟವಾಗುತ್ತದೆ. ಪ್ರಾರಬ್ಧ ಕರ್ಮಗಳು ಅನುಭವಿಸಲೆ ಬೇಕು ಅಂತ ಗುರುಗಳು ಹೇಳುವ ಮಾತಿಗೆ.. ಪ್ರಚಂಡನ ಪಾತ್ರ ಸ್ವಯಂ ಶಕ್ತಿಯಿಂದ ವಿಧಿ ಲಿಖಿತವನ್ನು ಅಳಿಸಬಹುದು. ಇದನ್ನು ಉದಾಹರಣೆ ಸಹಿತ ರುಜುವಾತು ಮಾಡುತ್ತೇನೆ ಎಂದು ಸವಾಲು ಹಾಕುವ ಪ್ರಚಂಡನಿಗೆ ಎದುರಾಗಿ ಮಾರ್ತಾಂಡ ಗಣಿತಜ್ಞ ಇದು ಸಾಧ್ಯವಿಲ್ಲ.. ಎಂದು ಸವಾಲೆಸುಯುತ್ತಾರೆ,,

ಆತ್ಮಶಕ್ತಿಯಿಂದಲೇ ಅಸಾಧ್ಯವನ್ನು ಸಾಧ್ಯವಾಗಿಸಬಹುದು ಎಂದಾಗ.. ಗುರುಗಳು ತೀರ್ಥಯಾತ್ರೆಗೆ ಮಹಾರಾಜರು ಹೊರಟಿದ್ದಾರೆ ಹಾಗಾಗಿ ನಾನು ಸ್ವಲ್ಪ ಕಾಲ ಆಶ್ರಮದಲ್ಲಿರುವುದಿಲ್ಲ.. ಎಂದು ಹೇಳಿ.. ಇಬ್ಬರು ಮಕ್ಕಳನ್ನು ಗಮನಿಸಬೇಕು ಎಂದು ಆಶ್ರಮದಲ್ಲಿ ಬಿಟ್ಟು ಹೊರಡುವಾಗ.. ಪ್ರಚಂಡ.. ಈ ಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಒಪ್ಪಿಕೊಳ್ಳುತ್ತಾರೆ.. ಆಗ ಒಂದು ಸಣ್ಣ ನಗೆ ಕೊಡುವ ಮಾರ್ತಾಂಡ... ಗಂಡು ಮಗು ಬೇಡರ ಬಳಿ ಬೆಳೆಯುತ್ತದೆ.. ಹೆಣ್ಣು ಮಗು ರಾಜನರ್ತಕಿಯಾಗುತ್ತದೆ ಇದು ಗಣಿತ ಸಿದ್ಧಾಂತ ಎಂದಾಗ.. ಪ್ರಚಂಡ.. ಇಲ್ಲ ಈ ಮಕ್ಕಳನ್ನು ವಿಧಿ ಬರಹಕ್ಕೆ ವಿರುದ್ಧವಾಗಿ ಇವುಗಳ ಭವಿಷ್ಯ ರೂಪಿಸುತ್ತೇನೆ ಎಂದು ಎರಡು ಮಕ್ಕಳನ್ನು ಜನರೇ ಇಲ್ಲದೆ  ಕರೆದೊಯ್ಯುವಾಗ.. ಗಂಡು ಮಗು ತಪ್ಪಿಸಿಕೊಳ್ಳುತ್ತದೆ.. ಅದು ಬೇಡರ ಕುಟುಂಬಕ್ಕೆ ಸೇರಿಕೊಳ್ಳುತ್ತದೆ.. 

ಹೆಣ್ಣು ಮಗುವನ್ನಾದರೂ, ಜೋಪಾನಮಾಡಬೇಕು ಎಂದು ಒಂದು ಆಶ್ರಮ ಕಟ್ಟಿ ಅಲ್ಲಿ ಹೆಣ್ಣು ಮಗುವನ್ನು ಬೆಳೆಸುತ್ತಾನೆ..ಸೌಂದರ್ಯವತಿಯಾಗಿ ಬೆಳೆಯುವ ಆ ಮಗು.. ಒಂದು ದಿನ ರಾಜಕುಮಾರ ಚಂದ್ರಕುಮಾರನಿಗೆ ಕಾಣಿಸಿಕೊಂಡು ಮೋಹಪರವಶಳಾಗುತ್ತಾಳೆ.. ಆತನು ಕೂಡ ಈಕೆಯನ್ನು ಇಷ್ಟಪಡುತ್ತಾನೆ.. 

ಇದರಿಂದ ಕೋಪಗೊಂಡ ಪ್ರಚಂಡ.. ಏನೇ ಪ್ರಯತ್ನ ಮಾಡಿದರೂ ಆಕೆಯ ನಿಗದಿತ ಭವಿಷ್ಯವನ್ನು ಬದಲಿಸಲಾಗದೆ, ಕಡೆಯಲ್ಲಿ ಒಪ್ಪಿಕೊಳ್ಳುತ್ತಾನೆ. 

ಚಿತ್ರ ನೋಡಿಸಿಕೊಂಡು ಹೋಗುವುದಕ್ಕೆ ಕಾರಣ.. ರಾಜಕುಮಾರ್ ಅವರ ಅಭಿನಯ, ಕಥೆಯನ್ನು ಎಳೆಯದೆ ಅಚ್ಚುಕಟ್ಟಾಗಿ ಹೆಣೆದಿರುವ ಚಿತ್ರಕಥೆ.. ಹಾಡುಗಳನ್ನು ಪಿಬಿ ಶ್ರೀನಿವಾಸ್, ಎಸ ಜಾನಕಿಪಿ ಸುಶೀಲ, ನಾಗೇಶ್ವರರಾವ್ ಹಾಡಿದ್ದಾರೆ. 

ದೈವದ ಲಿಖಿತ ಮುಂದೆ ಮಾನವನ ಪ್ರಯತ್ನ ಏನೂ ಸಾಗದು ಎನ್ನುವ ಸಾರಾಂಶ ಹೊಂದಿದ ಈ ಚಿತ್ರ ಆರಾಮಾಗಿ ನೋಡಿಸಿಕೊಂಡು ಹೋಗುತ್ತದೆ. 

ಈ ಚಿತ್ರದ ಕೆಲವು ದೃಶ್ಯಗಳು ನಿಮಗಾಗಿ.. 

ಬಾಲಣ್ಣ 


ವಾದ ಹುಟ್ಟು ಹಾಕಿದ ದೃಶ್ಯ 

ಮಾರ್ತಾಂಡ ... ಪ್ರಚಂಡನಾಗಿ ರಾಜಕುಮಾರ್ 

ಕೃಷ್ಣ ಕುಮಾರಿ 

ನರಸಿಂಹರಾಜು 

ರಾಜಾಶಂಕರ್ 

ರಾಜಾಶಂಕರ್ 

ಒಂದೇ ದೃಶ್ಯದಲ್ಲಿ ನರಸಿಂಹರಾಜು ಮತ್ತು ಬಾಲಣ್ಣ 

ಉದಯ ಕುಮಾರ್ 

ಜೋಡಿ 


2 comments:

  1. ಚೆಂದದ ವಿಶ್ಲೇಷಣೆ ಶ್ರೀ 👍👍👌👌🥰

    ReplyDelete