Wednesday, July 18, 2012

ರಾಜೇಶ್ ಖನ್ನ...ಒಂದು ಸುಂದರ ಹೊಂಗನಸು (2012)

जिन्दगी बादी होनी चाहिहे लम्बी नही।..


ಅದ್ಧುತವಾದ ಸಂಭಾಷಣೆ.ಆನಂದ್ ಚಿತ್ರದಿಂದ.


ತನ್ನ ನಗು ಮುಖ, ರಾಗವಾಗಿ ಸಂಭಾಷಣೆ ಹೇಳುವ ಪರಿ, ಸುಂದರ ನಡಿಗೆ..ಆಗಿನ, ಈಗಿನ ಯುವಕ, ಯುವತಿಯರೆಲ್ಲರ ಮನವನ್ನು ಕದ್ದ ನಾಯಕ..


ಸಿನಿಮಾ ನಾಯಕನಾಗಲು ಕಟ್ಟು ಮಸ್ತಾದ ದೇಹವಿರಲೇ ಬೇಕು ಎನ್ನುವ ಅಲಿಖಿತ ನಿಯಮವನ್ನು ಕಿತ್ತು ಹಾಕಿದ ಅನೇಕ ನಾಯಕರಲ್ಲಿ ಮೊದಲಿಗೆ ನಿಲ್ಲುವಾತ ಈತ...ಆಗಿನ ಎಲ್ಲ ನಾಯಕರು ಒಂದಲ್ಲ ಒಂದು ಸ್ಟೈಲ್ ಗೆ ಹೆಸರಾಗಿದ್ದರು.  ರಾಜ್ ಕಪೂರ್ ದೇವಾನಂದ್, ದಿಲೀಪ್ ಕುಮಾರ್, ಶಮ್ಮಿ ಕಪೂರ್, ಮನೋಜ್ ಕುಮಾರ್, ಜಾಯ್ ಮುಖರ್ಜೀ,ಸುನಿಲ್ ದತ್, ಹೀಗೆ...ಅವರ ಮಧ್ಯೆ ತನ್ನ ತನವನ್ನು ಕಾಪಾಡಿಕೊಂಡು ಹಾಗೆಯೇ ಹೊಸದೊಂದು ಶಖೆಯನ್ನು  ಹುಟ್ಟು ಹಾಕಿದ ಕಲಾವಿದ...


ಶಕ್ತಿ ಸಾಮಂತ ನೀಡಿದ ಅದ್ಭುತ ಚಿತ್ರ ಆರಾಧನಾ..ಇಲ್ಲಿಂದ ಶುರುವಾಯಿತು ಕಿಶೋರ್-ರಾಜೇಶ್ ಜುಗಲ್ ಬಂಧಿ...
ಸುಲಲಿತ ಸಂಭಾಷಣೆ, ಹಾಡುಗಳು..ನಾಯಕಿಯರ ಜೊತೆ ಪ್ರೀತಿ, ಪ್ರೇಮ ಎಲ್ಲದರಲ್ಲೂ ಒಂದು ತರಹ ಹೊಸತನ ತಂದ ನಟ..


ನನಗೆ ಅತ್ಯಂತ ಪ್ರೀತಿಯ ಚಿತ್ರ ಆನಂದ್ ಹಾಗು ನಮಕ್ ಹರಾಮ್...ಇಬ್ಬರು ಸೂಪರ್ ಸ್ಟಾರ್ ಗಳು ಒಂದೇ ಚಿತ್ರದಲ್ಲಿ ಅಭಿನಯಿಸಿದ ಅತ್ಯುತ್ತಮ ಚಿತ್ರಗಳು.


ಆನಂದ್ ಸಿನಿಮಾದಲ್ಲಿ ರಾಜೇಶ್ ಬಿಟ್ಟರೆ ಬೇರೆ ಇನ್ಯಾರು ಆ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲರು ಎನ್ನುವ ಸಂದೇಹ ಇವತ್ತಿಗೂ ನನ್ನ ಕಾಡುತ್ತದೆ..


ಆನಂದ್, ನಮಕ್ ಹರಾಮ್, ಬಾವರ್ಚಿ, ಕಟಿ ಪತಂಗ್, ಅನುರೋದ್, ಆಪ್ ಕಿ ಕಸಂ ನನ್ನ ಮೆಚ್ಚಿನ ಚಿತ್ರಗಳು..


ಆನಂದ್ ಸಿನಿಮಾದ ಕಡೆ ಸಂಭಾಷಣೆ...


आनंद मरा नही...आनंद मरेते नही।.. 


राजेश खन्न मरा नही...... राजेश खन्न मरते नही।..
ಯಾವಾಗಲೂ  ಹಸಿರಾಗಿ, ಉಸಿರಾಗಿ ತಮ್ಮ ಚಿತ್ರಗಳ ಮೂಲಕ ನಮ್ಮ ಮನದಲ್ಲಿ ಸದಾ ಇರುತ್ತಾರೆ ರಾಜೇಶ್ ಖನ್ನ...

4 comments:

  1. ಮನಸ್ಸು ಯಾಕೋ ವಿಹ್ವಲವಾಯಿತು ಸಾರ್,

    ಉಜ್ವಲವಾಗಿ ಬೆಳಗಿದ ತಾರೆಯೊಂದು ಕಾಲಾಂತರದಲ್ಲಿ ಸಿನಿಮಾ ಮಂದಿಯ ಅವಗಣನೆಗೆ ಗುರಿಯಾಗಿ ನಶಿಸಿಹೋಗುವಾಗ ಅದರ ಒಡಲ ನೋವು ಕೇಳುವವರೇ ಇರುವುದಿಲ್ಲ.

    ಒಬ್ಬ ಸೂಪರ್ ಸ್ಟಾರ್ ತಾನು ಕೊಟ್ಟ ಯಶಸ್ಸುಗಳ ಸರ ಮಾಲೆಯನ್ನು ಚಿತ್ರರಂಗ ಕೆಲವೇ ಸೋಲುಗಳಿಂದ ತೊಳೆದು ಹಾಕುತ್ತದೆ.

    ReplyDelete
  2. ರಾಜೇಶ್ ಖನ್ನಾ ಬಗೆಗೆ ಬಹಳ ಚಂದವಾಗಿ ಬರೆದಿದ್ದೀರಿ ಶ್ರೀಕಾಂತ್.....
    ಆತನ ನೆನಪು ಅಜರಾಮರ....

    ReplyDelete
  3. ಧನ್ಯವಾದಗಳು ಬದರಿ ಸರ್...ಹೌದು ಕೆಲವು ನಕ್ಷತ್ರಗಳಿಗೆ ಸದಾ ಕಾಲ ತನ್ನದೇ ಬೆಳಕಲ್ಲಿ ಮಿನುಗುವ ಶಕ್ತಿ ಇರುತ್ತೆ..ಅಂತಹ ನಕ್ಷತ್ರ...ರಾಜೇಶ್ ಖನ್ನ

    ReplyDelete
  4. ಆನಂದ್ ಸಿನಿಮಾ ಒಂದೇ ಸಾಕು ಆತನ ನಟನ ಕೌಶಲ್ಯ ಅಳೆಯೋಕೆ..ಸುಂದರ, ಅದ್ಭುತ ನಟ..ತನ್ನ ಮಿತಿಯಲ್ಲೇ ಜಾಡು ಮಾಡಿದ ತಾರೆ..ಧನ್ಯವಾದಗಳು ಪ್ರಕಾಶಣ್ಣ

    ReplyDelete