Saturday, June 16, 2012

12 Angry Men (1957)

This is one of the rare movie where there is no show bazzy to the heights!!!!  

The movie counts on the human emotion. The movie is a court room drama all the way for about 1.30 Hours.  For Indian audience this movies sounds different, as there is no jury system in our judiciary, but it closely reflects our village panchayat, where elders of the village usually decides guilty or not guilty after examination of the facts and the truths.

This movies clearly shows the prejudice is the word which can act more on human psyche.  The movie depicts any decisions, or judging on anything should never be suicidal, churn the facts, situation to come out with a clear words than judging something without knowing the facts.

We can not think something..and ink something that is the essence of the whole movie!!!

This movie shows various shades of human mentality, worth watching, nice dialogues, tight screenplay, and wonderful portraying of each character according to the shades.

Saturday, May 5, 2012

Seven Samurai - Akira Kurosawa (1954)

This movie was always in my wish list.  After watching Rashoman, and Dreams..my great friend Vikram suggested me to watch this.  The grand marathon movie is of about 3 Hours 26 Minutes classic released in 1954.  Some how the day came in.

This movie is all about the farmers guts to get rid of the bandits who used to torment the villagers at their will. 

As always happens, there were indifference among the villagers to get rid of bandits or feed them on regular basis and plead them not to end the lives.

The grand-dad of the village of the opinion to hire good samurai's who help us only for the meals villagers would provide, and nothing extra.  So few volunteers who were effected by the bandits one or the other way decides to hire the samurai's.  

The movie ticks off from here, the alignment of seven samurai for the task was hillarious, and at the same time..shows the emotional side of the humans as well.  

The finding of the last samurai was the most hilarious one, and from then on he carries the movie on his shoulder.  The favorite actor of Akira Kurosawa steals the show from there on.  He histrionics, body language, dialogue delivery, expression, punch line all worth mentioning.

Breeze camera work, sleek editing, awesome dialogues, and few one liners, and Kurosawa's trade mark rainy shot just takes the breath away. There is not even a single dull moment in the entire length of the movie.


Every character in this movie doesn't act, instead they become the characters itself. 

The plan to stop the bandits, its prepartion, and execution everything had been shot very well.

This movie has some of the best dialogues to ponder over long time

  • Danger always strikes when everything seems fine


  • So. Again we are defeated. The farmers have won. Not us.


  • This is the nature of war. By protecting others, you save yourself. If you only think of yourself, you’ll only destroy yourself.

  • Bandits are coming, you fool. Why worry about the beard, when the head is about to fall?

  • A good fort needs a gap. The enemy must be lured in. So we can attack them. If we only defend, we lose the war.

  • Well — it's impossible to kill 'em all, so I usually run away

  • As a matter of fact, I'm preparing for a tough war. It will bring us neither money nor fame. Want to join?.....may be we die this time!!!!

The last scene, where in two surviving samurai talks to each other saying "we have survived again"...and with a pause "Villagers won...we were defeated again" signifies how the moods of the human changes....

This movie inspired making many movies like The Magnificent Seven,  The Guns of Navarone,  and many more..and our own Sholay...

This movie is about different shades of human beings...A great salute to the master craftsman AKIRA KUROSAWA.

Monday, April 23, 2012

ಅಣ್ಣಾವ್ರೆ ನಿಮಗೆ ಜನುಮ ದಿನದ ಶುಭಾಶಯಗಳು (2012)

ಕರುನಾಡು ಕನ್ನಡಮ್ಮನ ದೇವಾಲಯ
ಆ ದೇವಾಲಯದ ಅರ್ಚಕರು ಅನೇಕ
ಪ್ರತಿ ಅರ್ಚಕರು ತಮ್ಮ ತನು ಮನಗಳಿಂದ ಆ ದೇವಿಯನ್ನು ಅರ್ಚಿಸಿ
ಕೆಲವರು ನಟವರರಾದರು..!!!!!
ಕೆಲವರು ನಟಿಯರಿಗೆ ವರರಾದರು!!!
ಆದರೆ ನಮ್ಮ ಅಣ್ಣ ರಾಜಣ್ಣ ವರ ಪಡೆದ ನಟರಾಗಿ ವರನಟರಾದರು!!!
ಎಲ್ಲಕಡೆ ಕೂಗು..ಅಣ್ಣ ಮತ್ತೊಮ್ಮೆ ಹುಟ್ಟಿ ಬನ್ನಿ ಅಂತ ಹೇಳುತ್ತಾರೆ..
ಆದ್ರೆ ನನ್ನ ಕೂಗು..ಅಣ್ಣ ಹೋಗಿದ್ದರಲ್ಲವೇ ಮತ್ತೊಮ್ಮೆ ಹುಟ್ಟಿ ಬನ್ನಿ ಎಂದು ಹೇಳುವುದು 
ಅವರು ನಮ್ಮ ಹೃದಯ ಸಿಂಹಾಸನಧೀಶರಾಗಿ ಅಜರಾಮರ
ಆವರ ಪಾತ್ರಗಳು, ಸಂಭಾಷಣೆ, ಅಭಿನಯ, ಹಾಡುಗಾರಿಕೆ ಇವನ್ನು ನಾವು ನೂರು ಜನ್ಮ ಎತ್ತಿದರು ಮರೆಯಲು ಸಾಧ್ಯವಿಲ್ಲ..ಅಂಥಹ ಪಾತ್ರಗಳ ಪಿತಾಮಹ ನಮ್ಮ ರಾಜಣ್ಣ
ಕೆಲವರು ಇರುವಾಗಲೇ ಮರೆಯಾಗುತ್ತಾರೆ...ಕೆಲವರು ಮರೆಯಾದಮೇಲೆ ಇರುತ್ತಾರೆ ಆದರೆ ನಮ್ಮ ಅಣ್ಣ..ಸದಾ ಕಣ್ಣ ಮುಂದೆಯೇ ಇರುತ್ತಾರೆ ನಮ್ಮ ದಿನ ನಿತ್ಯದ ಜೀವನದ ಹಾದಿಯಲ್ಲಿ..
ನಿಮ್ಮ ಪಾತ್ರದ ಹರವು ನಮ್ಮ ಕಾವೇರಿ ನದಿಯ ಹರವಿಗಿಂತ ಮಿಗಿಲು..
ಅಣ್ಣಾವ್ರೆ ನಿಮಗೆ ಜನುಮ ದಿನದ ಶುಭಾಶಯಗಳು..

Saturday, April 14, 2012

ದಶಮುಖ ಒಂದು ವಿಭಿನ್ನ ಚಿತ್ರ (2012)

 ದಶಮುಖ ಸಿನಿಮಾದ ಜಾಹಿರಾತು, ಕೆಲವು ತುಣುಕುಗಳನ್ನ ನೋಡಿದಾಗ..ಮನಸು ಯಾಕೋ ಈ ಸಿನೆಮಾನಾ ನೋಡ್ಬೇಕು ಅಂತ ಅನ್ನಿಸ್ತು...ಶನಿವಾರ ಸಂಜೆ ಹೀಗೆ ಟಿ.ವಿ. ನೋಡುತ್ತಾ ಕುಳಿತ್ತಿದ್ದಾಗ..ದಿಗ್ಗನೆ ಎದ್ದು ಮನೆಯ ಹತ್ತಿರ ಇರುವ ವೀರೇಶ್ ಸಿನೆಮಾಸ್ ಗೆ ನನ್ನ ಪತ್ನಿಯ ಜೊತೆಗೆ ಹೋದೆ...
ಜನ ಗಣ ಮನದಿಂದ ಶುರುವಾಯಿತು...


ನಂತರ ಚಿತ್ರ ಶುರುವಾಯಿತು...


ಏನೋ ಗೊಂದಲ ಮೊದಲ ದೃಶ್ಯದಲ್ಲೇ..ಅದೇ ಗೊಂದಲ ನ್ಯಾಯಾಧೀಶ ಕೂಡ ತೋರುತ್ತಾರೆ...ಸರಿ ಮುಂದೆ ಶುರುವಾಗುತ್ತೆ ನಿಜಾವಾದ ಸಿನಿಮಾ...


ಇದು ನಿಜಕ್ಕೂ ಒಂದು ಭಿನ್ನ ಪ್ರಯತ್ನ..ಮಾಡಿದ ಎಲ್ಲ ಕಲಾವಿದರಿಗೂ ಒಂದು ತರಹ ಹೊಸ ತರಹದ ಪಾತ್ರಗಳು..
ಆದ್ರೆ ನಿಜವಾದ ಹೀರೋ...ಕೆ.ವಿ.ರಾಜು ಅವರ ಚಿತ್ರಕಥೆ...ನೀರಿನಷ್ಟೇ ಸುಲಭ...ಆದ್ರೆ ಅಷ್ಟೇ ಸುಲಲಿತ ಸಂಭಾಷಣೆ...
ನಂತರದ ನಾಯಕ...ನಮ್ಮ ರವಿ ಮಾಮ..(ರವಿಚಂದ್ರನ್)...ನಿಜಕ್ಕೋ ಅವರಿಗೆ ಒಪ್ಪುವ ಪಾತ್ರ...ಈ ಚಿತ್ರ ನೋಡಿದ ಮೇಲೆ ನಿಜಕ್ಕೋ ಕಾಡುವುದು ಮೂರು...

ಒಂದು ರವಿ, ಎರಡು ಮುದ್ದಾದ  ಮಾಳವಿಕ, ಮೂರು ಅನಂತ್ ನಾಗ್ ಅವರ ಕೊನೆಯ ದೃಶ್ಯದ ಅದ್ಭುತ ಅಭಿನಯ..

ಈ ತರಹದ ಚಿತ್ರಕತೆಯನ್ನ ಸುಮಾರು ಎರಡು ವರೆ ತಾಸು ಹಿಡಿದಿಡುವುದು ಸುಲಭದ ಮಾತಲ್ಲ..ಇದಕ್ಕೆ ಒಳ್ಳೆ ನಟರು, ಸಂಭಾಷಣೆ...ಚೌಕಟ್ಟು ಎಲ್ಲವು ಬೇಕು...ಅದು ಈ ಚಿತ್ರಕ್ಕೆ ಇದೆ...ಪಾತ್ರ ಮಾಡಿದ ಎಲ್ಲ ಕಲಾವಿದರು ನ್ಯಾಯ ಒದಗಿಸಿದ್ದಾರೆ...


ಮಾನವನಿಗೆ  ಹತ್ತು ಹಲವು ಭಾವನೆಗಳು ಇರುತ್ತವೆ..ಆದ್ರೆ ಅದನ್ನು ಒರೆ ಹಚ್ಚಿ ನೋಡುವ ಸಾಮರ್ಥ್ಯ, ತಾಳ್ಮೆ ಇರಬೇಕು ಇದು ಚಿತ್ರದ ಮೂಲ ಆಶಯ..


ಕೆಲವು ಪಾತ್ರಗಳು ಇನ್ನಷ್ಟು ಪೋಷಿಸಬೇಕಿತ್ತು ಅನ್ನಿಸುತ್ತೆ..ಮತ್ತು ಅಂತ್ಯಕ್ಕೆ ಇನ್ನಷ್ಟು ತಾರ್ಕಿಕತೆ ಬೇಕಿತ್ತು ಅನ್ನಿಸುತ್ತೆ..ಆದ್ರೆ ಹೊಡಿ ಬಡಿ, ಹುಚ್ಚು ಪ್ರೇಮದ ಅಮಲಿನ ಚಿತ್ರಗಳಿಗಿಂತ ತುಂಬಾ ಭಿನ್ನವಾಗಿ ನಿಲ್ಲುತ್ತೆ..

ಕಥೆ ಬಹಳ ಸರಳ, ಅದಕ್ಕೆ ಸಿಕ್ಕಿರುವ ಪ್ರಯತ್ನ ಚಪ್ಪಾಳೆ ಗಿಟ್ಟಿಸುತ್ತೆ
.
ರವಿಯಾ ನಟನೆ...ಎಲ್ಲವನ್ನು ಕೂಲಂಕುಶವಾಗಿ ನೋಡುವ ರೀತಿ 


ಅನಂತ್ ಅಭಿನಯ, ತಮ್ಮ ಜೀವನದ ಕಹಿ ಪ್ರಪಂಚದಲ್ಲಿ ಎಲ್ಲ ಕಡೆ ಎಂದು ಹೇಳುವ  ಪಾತ್ರ 


ಅವಿನಾಶ್ ಶ್ರೀಮಂತನ ಸೋಗಲಾಡಿ ಪಾತ್ರದಲ್ಲಿ ಸಂಭಾಷಣೆ ಹೇಳುವ ಶೈಲಿ..ತನ್ನ ನಿರ್ಧಾರವೇ ಸರಿ..ಬೇರೆಲ್ಲರೂ ಉಪಯೋಗವಿಲ್ಲ..ಅಂತ ನಿಲ್ಲುವ ತಪ್ಪು ನಿರ್ಧಾರಗಳು..ಚೆನ್ನಾಗಿ ಅಭಿನಯಿಸಿದ್ದಾರೆ..


ಮಾಳವಿಕಾ..ತನ್ನ ಮುದ್ದಾದ ಮೊಗವನ್ನು ತೋರುತ್ತ..ನಿರ್ಧಾರಗಳು ಭಾವನೆಗಳಿಗೆ ತಕ್ಕಂತೆ ಹೇಗೆ ಏರು-ಪೇರಾಗುತ್ತದೆ ಎಂದು ತೋರಿಸುವ ತವಕ


ಸರಿತಾ (ಬಹಳ ವರುಷಗಳ ನಂತರ ಮತ್ತೆ ಕನ್ನಡ ಚಿತ್ರದಲ್ಲಿ ಕಾಣಿಸಿದ್ದಾರೆ...ಅವರು ಮಾಗಿದ್ದಾರೆ ಆದ್ರೆ ಅವರ ಅಭಿನಯ ಒಂಚೂರು ಬದಲಾಗಿಲ್ಲ..ಅದ್ಭುತ ಕಲಾವಿದೆ) ಮನವೊಂದು ಕಡೆ, ದೇಹವೊಂದು ಕಡೆ, ಒಳಗೆ ಒಂದು ಕಸಿವಿಸಿ..ಹೊರಗೆ ಹೇಗೋ ಕೆಲಸ ಮುಗಿಸೋಣ ಅನ್ನುವ ಅನ್ಯಮನಸ್ಕ ಜೀವನ ..


ದತ್ತಣ್ಣ ಹಿರಿಯರು ತಮ್ಮ ಪೂರ್ವಗ್ರಹ ಪೀಡಿತ ದೃಷ್ಟಿ ಕೋನ ತಪ್ಪು ಎಂದು ತೋರಿಸುವ ಪರಿ..


ದೇವರಾಜ್ ನಾನೇ ಸರಿ ಎಲ್ಲರು ತಪ್ಪು ಎಂದು ತೋರಲು ಒದ್ದಾಡುವುದು 


ರವಿ ಕಾಳೆ (ಇನ್ನಷ್ಟು ಪೋಷಣೆ ಬೇಕಿತ್ತು)...ಎರಡು ಕಡೆ ವಾದ ವಿವಾದಗಳನ್ನು ತೂಗುತ್ತ ..ಕಡೆಗೆ ತನ್ನ ನಿರ್ಧಾರ ತಪ್ಪು ಎಂದು ತೋರುವುದು..


ಅಚ್ಯುತ ಕುಮಾರ್ ಧಾರಾವಾಹಿಗಳಲ್ಲಿನ ನಟನೆ ಬರಿ ಆಕಸ್ಮಿಕವಲ್ಲ ನಾನು ಉತ್ತಮ ನಟ ಅಂತ ತೋರಿಸಿದ್ದಾರೆ..ಸಂಭಾಷಣೆ ಪರಿ ಇಷ್ಟವಾಗುತ್ತೆ..ಬೇರೆಯವರು ತುಳಿಯಲು ಪ್ರಯತ್ನ ಮಾಡುತ್ತಾರೆ..ಆದ್ರೆ ಗಟ್ಟಿ ನೆಲ ಹಾಗು ನೆಲೆ ಸಿಕ್ಕಾಗ ಹೇಗೆ ಅದನ್ನು ಉಪಯೋಗಿಸಿಕೊಂಡು ಮೇಲೆ ಬರಬೇಕು ಎಂದು ಸೊಗಸಾಗಿ ತೋರಿದ್ದಾರೆ..


ಹೊಸ ನಟ (ನನ್ನ ಪ್ರಕಾರ - ಇನ್ನಷ್ಟು ಪೋಷಣೆ ಬೇಕಿತ್ತು)...ಉತ್ತಮ ಅಭಿನಯ ಮಾಡಿದ್ದಾರೆ..ತನ್ನ ಪೂರ್ವಾಶ್ರಮದ ಪಲುಕುಗಳು..ನಿರ್ಧಾರಗಳಿಗೆ ಹೇಗೆ ಸಹಾಯ ಮಾಡುತ್ತದೆ ಎಂದು ಚೆನ್ನಾಗಿ ವಿವರಿಸಿದ್ದಾರೆ..


ನಮ್ಮ ನಿರ್ಧಾರಗಳು ಪೂರ್ವಗ್ರಹ ಪೀಡಿತವಾದಾಗ ನಮ್ಮ ನಮ್ಭಿಕೆಗಳು ನಮ್ಮನ್ನ ದಾರಿ ತಪ್ಪಿಸುತ್ತವೆ..ಯೋಚನಾಲಹರಿಯನ್ನ ತುಂಡು ಮಾಡುತ್ತವೆ..ನಾವು ಕೇಳಿದ್ದೆ ಸತ್ಯ, ನೋಡಿದ್ದೇ ಸತ್ಯ, ಆಡಿದ್ದೆ ಸತ್ಯ ಅನ್ನ್ನುವ ಒಂದು ಭ್ರಮಾಲೋಕವನ್ನ ಸೃಷ್ಟಿ ಮಾಡುತ್ತದೆ..


ನಾವು ನಮ್ಮ ಪರಿಧಿಯಿಂದ ಹೊರಗೆ ಬಂದು ನಿಂತಾಗ, ಯೋಚನೆ ಮಾಡಿದಾಗ, ಹಾಗು ತಾರ್ಕಿಕ ಲಹರಿಯನ್ನ ಮುಂದಿಟ್ಟಾಗ ಮಾತ್ರ ನಿಜ ಅರಿಯುವ ಜಾಣ್ಮೆ, ತಾಳ್ಮೆ ಬರುತ್ತದೆ..


ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡು ಅನ್ನುವ ಗಾದೆ ಆಧಾರಿತ ಕತೆ ಚೆನ್ನಾಗಿ ಮೂಡಿ ಬಂದಿದೆ...


ಚಿತ್ರ ಮುಗಿದಾಗ ಇನ್ನೂ ಏನು ಬೇಕು ಅನ್ನಿಸುತ್ತದೆ..ಅದಕ್ಕೆ ಕಾರಣ ಕಥೆ ಹಾಗು ಚಿತ್ರಕಥೆ ಒಂದು ನಿರ್ಧಿಷ್ಟ ಚೌಕಟ್ಟಿನಲ್ಲಿ ಮಾತ್ರ ಸಾಗುತ್ತದೆ...ಇನ್ನು ಉತ್ತಮ ಪಡಿಸಬಹುದಿತ್ತು ಅನ್ನುವುದು ಸರಿ ಅಂತ ನನ್ನ ಭಾವನೆ..ಆದ್ರೆ ಇದು ಒಂದು ಉತ್ತಮ ಪ್ರಯತ್ನ ಹಾಗು ಉತ್ತಮ ಚಿತ್ರ ಎನ್ನುವುದು ಮಾತ್ರ ಸೂರ್ಯ ಚಂದ್ರ ಇರುವಷ್ಟೇ ಸತ್ಯ...


ದಯವಿಟ್ಟು ಒಳ್ಳೆಯ ಕನ್ನಡ ಚಿತ್ರಗಳನ್ನ ಬೆಂಬಲಿಸಿ, ನೋಡಿ ಒಂದು ಉತ್ತಮ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿ..

ಕಡೆ ಮಾತು : ರವಿಚಂದ್ರನ್ ಈ ರೀತಿಯ ಪಾತ್ರಗಳು ಜೀವಂತಿಕೆ ಕೂಡಿರುತ್ತದೆ..ಸ್ವಲ್ಪ ಸಣ್ಣ ಆಗಿ, ಈ ರೀತಿ ತೀಕ್ಷ್ನ ಪಾತ್ರಗಳನ್ನೂ ಮಾಡಿದರೆ..ಅವರು ಮತ್ತೆ ಕನಸುಗಾರನ ಹಾದಿಯಲ್ಲಿ ಕನ್ನಡ ಪ್ರೇಮಿಗಳಿಗೆ ಕನಸುಗಳನ್ನು ಉಣಬಡಿಸಬಹುದು...

Wednesday, April 11, 2012

ಅಣ್ಣಾವ್ರನ್ನ ಬರವಣಿಗೆಯಲ್ಲಿ ನೆನಪಿಸಿಕೊಳ್ಳುವ ಪ್ರಯತ್ನ (2012)

ಅಣ್ಣಾ ನೀವು ನಮಗಾಗಿ...
ಇನ್ನೂರು ಚಿಲ್ರೆ ಸಿನೆಮಗಾಗಿ
ಇಲ್ಲೇ ಇರ್ತೀರಾ ಕರುನಾಡ ಹಸಿರಾಗಿ...

ರಾಜಕುಮಾರ್ ಅವರು ನಿರ್ವಹಿಸದ ಪಾತ್ರ ಬಹುಶಃ ಈ ಪ್ರಪಂಚದಲ್ಲಿ ಯಾವುದು ಇಲ್ಲ!!!!!


ನಮ್ಮ ಕರುನಾಡಿನಲ್ಲಿ ಯಾವುದೇ ದೇವರ ಪಾತ್ರ ಇರಬಹುದು, ಐತಿಹಾಸಿಕ ಅರಸರ ಪಾತ್ರ ಇರಬಹುದು, ಪತ್ತೆದಾರ ಇರಬಹುದು, ಸಂತ-ಭಕ್ತ ಇರಬಹುದು...ರಾಜ್ ಮುಖವೇ ನಮ್ಮ ಕಣ್ಣ ಮುಂದೆ ಬರುತ್ತದೆ...

ಈ ಪಾತ್ರಗಳಲ್ಲಿ ಎಷ್ಟು ಘನ-ಗಂಭೀರ ಚರ್ಯೆ, ಹಾವ-ಭಾವಗಳಲ್ಲಿ ಇರುತಿದ್ದರೂ..ಅಷ್ಟೇ ಮಿಂಚಿನ, ತುಂಟ ಪಾತ್ರಗಳಲ್ಲೂ ತನ್ಮಯತೆಯಿಂದ ಪಾತ್ರವಹಿಸುತ್ತಿದ್ದರು..

ಕೆಲವು ಪಾತ್ರಗಳು...
ಶಂಕರ್ ಗುರು : ಈ ಚಿತ್ರದಲ್ಲಿ ಗುರುವಿನ ಪಾತ್ರ ಕೇವಲ ಅಣ್ಣಾವ್ರು ಮಾತ್ರ ಮಾಡಲು ಸಾಧ್ಯ...ಆ ತರಲೆ, ತುಂಟತನ, ಹಾಸ್ಯ, ರೇಗಿಸುವ ಭಂಗಿ, ಆ ಉಡುಪು ವಯ್ಯಾರಗಳು ಕೇವಲ ಅಣ್ಣಾ ಅವರಿಂದ ಮಾತ್ರ ಸಾಧ್ಯ
ಗುರು ಪಾತ್ರದ ಮೊದಲ ದೃಶ್ಯದಲ್ಲಿ ಬಾಲಣ್ಣನನ್ನು ಗೋಳು ಹುಯ್ಕೊಳೋ ದೃಶ್ಯ ಸೊಗಸು 
"ಈ ಹುಡುಗಿಯ ಕೊಬ್ಬನ್ನು ಇಳಿಸಿ...ಕಾಶ್ಮೀರದಿಂದ ಕರ್ನಾಟಕಕ್ಕೆ ಕರೆದುಕೊಂಡು ಬರದಿದ್ದರೆ ನಾನು ಗುರುವೇ ಅಲ್ಲ" ಎಂದು ಹೇಳುತ್ತಾ ಎದೆ ತಟ್ಟಿಕೊಳ್ಳುವ ಶೈಲಿ ಸೀಟಿ ಹೊಡೆಸುತ್ತ್ತೆ..ಇ ಸಿನೆಮಾವನ್ನು ಬೆಂಗಳೂರಿನಲ್ಲಿ ಬಿಡುಗಡೆ ಯಾದಗೆಲ್ಲ ನೋಡಿದ್ದೇನೆ..ಪ್ರತಿ ಭಾರಿಯೂ ಅದೇ ಶೀಟಿ, ಚಪ್ಪಾಳೆ ಗಿಟ್ಟಿಸುತ್ತೆ ಈ ಸನ್ನಿವೇಶ 

"ಡ್ಯಾಡಿ ಕೀಪ್ ಟು ಲ್ಯಾಕ್ಸ್ ರೆಡಿ"  ಇನ್ನೊಂದು ಸೊಗಸಾದ ಸಂಭಾಷಣೆ..



ತ್ರಿಮೂರ್ತಿ: ಈ ಸಿನಿಮಾ...ಮೂರು ಭಿನ್ನ ಪಾತ್ರಗಳಿಂದ ಕೂಡಿದೆ..ಇದರಲ್ಲಿ ಎರಡನೇ ಪಾತ್ರ "ಶೇಖರ್" ಎಂಬ ಹಿಪ್ಪಿ ಪಾತ್ರದಲ್ಲಿ ಬಾಲಣ್ಣನ ಕಾಡುವ ದೃಶ್ಯಗಳು ನಗೆ ಬುಗ್ಗೆ ಉಕ್ಕಿಸುತ್ತದೆ.."ಬಿಸಾಕೋ ದುಡ್ಡನ್ನ..ನಿನ್ನ ಹೆಂಡತಿ ಮಕ್ಕಳಿಗೆ ನಾನು ಕೊಟ್ಯಾದೀಶ ಅಂತ ತೋರಿಸ್ಕೊಬೇಕು ಕಣೋ" ಅಂತ ಬಾಲಣ್ಣ ಅವರಿಗೆ ಹೇಳುವ ಭಾವಾಭಿನಯ ಸುಂದರ...

ಹೀಗೆ ಅನೇಕ ಚಿತ್ರಗಳಲ್ಲಿ ತೂಗುದೀಪ ಶ್ರೀನಿವಾಸ್, ವಜ್ರಮುನಿ, ಬಾಲಣ್ಣ, ದ್ವಾರಕೀಶ್ ಮುಂತಾದ ಅನೇಕ ಕಲಾವಿದರ ಜೊತೆ ಹಾಸ್ಯ ದೃಶ್ಯಗಳು, ಸಂಭಾಷಣೆ ನಿಜಕ್ಕೂ  ಇದೆ ಅಣ್ಣಾವ್ರ ಅನೇಕ ಗಂಭೀರ ಪಾತ್ರಗಳನ್ನ ಮಾಡಿದ್ದು ಅನ್ನುವ ಸಂದೇಹ ಕಾಡುತ್ತದೆ..

ಸಂಪತ್ತಿಗೆ ಸವಾಲ್ ನಲ್ಲಿ ಬಾಲಣ್ಣನ, ಮಂಜುಳಾ ಜೊತೆ, 
ಮಯೂರದಲ್ಲಿ ವಜ್ರಮುನಿ, 
ಭಾಗ್ಯದ ಲಕ್ಷ್ಮಿ ಬಾರಮ್ಮ - ವಜ್ರಮುನಿ
ಕಣ್ತೆರೆದು ನೋಡು - ಬಾಲಣ್ಣ
ಮೇಯರ್ ಮುತ್ತಣ್ಣ - ದ್ವಾರಕೀಶ್
ಶ್ರುತಿ ಸೇರಿದಾಗ - ಎಂ. ಎಸ್. ಉಮೇಶ್
ಶಂಕರ್ ಗುರು - ತೂಗುದೀಪ ಶ್ರೀನಿವಾಸ್, ವಜ್ರಮುನಿ
ಅನೇಕ ಚಿತ್ರಗಳಲ್ಲಿ - ನರಸಿಂಹ ರಾಜು
ಇನ್ನೂ ಅನೇಕ ಚಿತ್ರಗಳಲ್ಲಿ..ಅವರ ಹಾಸ್ಯ ಪ್ರಜ್ಞೆ ಅನಾವರಣಗೊಂಡಿದೆ 


ಅವರ ಹಾಸ್ಯ ಪ್ರಜ್ಞೆ, ಸಮಯೋಚಿತ ಸಂಭಾಷಣೆ ಹೇಳುವ ಶೈಲಿ ಬಹಳ ಸೊಗಸು..

ಅಣ್ಣಾವ್ರು ತುಂಟ ಪಾತ್ರಗಳನ್ನೂ ಕೂಡ ಲೀಲಾಜಾಲಾವಾಗಿ ಮಾಡುತಿದ್ದರು..ನಡಿಗೆ, ನಾಟ್ಯ, ವೇಷ ಭೂಷಣ..ಎಲ್ಲವು ಸೊಗಸು...ಮಗುವಿನ ಹಾಗೆ...


ಅದಕ್ಕೆ ಅಲ್ಲವೇ ಅವರು ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಹಾಡಿದ್ದು..



ಎಂಥ ಸೊಗಸು ಮಗುವಿನ ಮನಸು...

Sunday, February 26, 2012

ಶಂಖನಾದ - ತಮಾಷೆ ಮಾಡುತ್ತಾ ಗಬ್ಬು ರಾಜಕೀಯ ಹೂರಣವನ್ನ ಹೊರಗಿಡುವ ಚಿತ್ರ (1986)

ಅತ್ಯಂತ ಕಡಿಮೆ ಖರ್ಚಿನಲ್ಲಿ ಸರಿಯಾದ ತಲೆ ಉಪಯೋಗಿಸಿ ಒಳ್ಳೆಯ ಕತೆಯನ್ನ ಅಷ್ಟೇ ಚೊಕ್ಕವಾಗಿ ಮಾಡಿದರೆ ಒಂದು ಉತ್ತಮ ಕಲಾಕೃತಿ ಬರುತ್ತೆ..ಈ ಮಾತಿಗೆ ಸಾಕ್ಷಿ "ಶಂಖನಾದ"  ಕನ್ನಡ ಚಲನ ಚಿತ್ರ..


ಉಮೇಶ್ ಕುಲಕರ್ಣಿಯವರ ಸರಳ ನಿರೂಪಣೆ, ಎ.ಎಸ. ಮೂರ್ತಿಯವರ ಸುಲಲಿತ ಸಂಭಾಷಣೆ (ಕೆಲವು ಕಡೆ ಅತಿ ಎನ್ನಿಸಿದರೂ) ಸಂದರ್ಭಕ್ಕೆ ಸರಿ ಹೊಂದುತ್ತೆ..


ಹಳ್ಳಿ ರಾಜಕೀಯ ಬೆಳವಣಿಗೆಯನ್ನ ಯಾವ ರೀತಿ ತುಳಿಯುತ್ತದೆ, ಒಳ್ಳೆ ಮನಸಿರುವ ಕೈಗಳನ್ನ ಹೇಗೆ ಕಾಡುತ್ತದೆ ಎನ್ನುವುದನ್ನ ಹಾಸ್ಯ ಮಿಶ್ರಿತ ದೃಶ್ಯಗಳಲ್ಲಿ ತೂಗಿಸಿಕೊಂಡು ಹೋಗುತ್ತದೆ..


೧೯೮೬ರಲ್ಲಿ ತೆರೆಕಂಡ ಈ ಚಿತ್ರದ ನಿಜವಾದ ನಾಯಕ ಕಥೆ ಹಾಗು ಸಂಭಾಷಣೆ.  ನಂತರದ ನಾಯಕ ಅರವಿಂದ್. ಇವರು ಅನುಭವ ಅರವಿಂದ್ ಅಂತಾನೆ ಪ್ರಸಿದ್ದಿ. ಅವರ ವೃತ್ತಿ ಬದುಕಿನಲ್ಲಿ  ಒಂದು ಅಪರೂಪದ ಚಿತ್ರ. ಅವರ ಪ್ರತಿಯೊಂದು ಮುಖಾಭಿನಯ, ಸಂಭಾಷಣೆ ಹೇಳುವ ಶ್ಯಲಿ ನಿಜಕ್ಕೂ ನಗೆ ಬುಗ್ಗೆ ಸುರಿಯುತ್ತೆ..


ಹಳ್ಳಿ ಪ್ರಮುಖ ಇಬ್ಬರು ಗೌಡರ ಪಾತ್ರದಲ್ಲಿ ವಜ್ರಪ್ಪ, ಹಾಗು ಆಂಜನಪ್ಪ ಕ್ರೌರ್ಯದ ಮುಖ ತೋರಿಸುತ್ತಲೇ, ಅವರ ಸಂಭಾಷಣೆಗಳು ನಗೆ ಹುಟ್ಟಿಸುತ್ತದೆ.


ಅಭಿನಯ ಅವರ ಅಭಿನಯ ಹಳ್ಳಿತನವನ್ನು, ಮುಗ್ದತೆಯನ್ನ ತೋರಿಸುತ್ತದೆ..


ಇನ್ನು ಬಸಕ್ಕನ ಪಾತ್ರಧಾರಿ ಮಹಿಮಾ ಪಟೇಲ್ ಮಹಾ ಮಹಿಮೆಯನ್ನೇ ತೋರಿಸುತ್ತಾರೆ..ಅವರ ಪಾತ್ರ ಸಿನಿಮಾದ ಕೊನೆ ಅಂಚಿನಲ್ಲಿ ಬರುತ್ತದೆ..ಆದ್ರೆ ನೆನಪಿನಲ್ಲಿ ಉಳಿಯುತ್ತೆ..


ಕತೆಗೆ ಮುಖ್ಯ ತಿರುವು ಕೊಡುವ ಪಾತ್ರದಲ್ಲಿ ರಮೇಶ್ ಭಟ್ ಗಮನ ಸೆಳೆಯುತ್ತಾರೆ.


ಕತೆಯ ತಿರುಳು ಇಷ್ಟೇ..ಹಳ್ಳಿ ಪಂಚಾಯತಿ ಕಛೇರಿಗೆ ಅಧ್ಯಕ್ಷ ಸ್ಥಾನಕ್ಕೆ ೧೧ ಸ್ಥಾನಗಳಿಗೆ ಚುನಾವಣೆ ನಡೆಯುತ್ತೆ..ಇಬ್ಬರು ಗೌಡರ ಎರಡು ಪಕ್ಷಗಳು ತಲಾ ಐದು ಸ್ಥಾನಗಳು ಸಿಗುತ್ತದೆ, ಉಳಿದ ಒಂದು ಸ್ಥಾನವನ್ನ ಹಿಂದುಳಿದ ಜಾತಿಗೆ ಸೇರಿದ ದಾಸಯ್ಯ (ಅರವಿಂದ್) ಗಳಿಸುತ್ತಾರೆ.  ಚುನಾವಣಾಧಿಕಾರಿ ಯಾರಿಗೂ ಸ್ಪಷ್ಟ ಬಹುಮತ ಇಲ್ಲದ ಕಾರಣ ದಾಸಯ್ಯ ಯಾರ ಪಕ್ಷಕ್ಕೆ ಸೇರುತ್ತಾನೋ ಅವರ ಪಕ್ಷವೇ ಅಧಿಕಾರಕ್ಕೆ ಬರುತ್ತೆ ಅಂತ ಹೇಳುತ್ತಾರೆ.  ಅವಾಗ ಶುರುವಾಗುತ್ತೆ ದಾಸಯ್ಯನ ಗೋಳು.


ಕೆಲವು ಸಂಭಾಷಣೆಗಳು :
೧. ಒಬ್ಬ ಕೆಲಸ ಮಾಡಿದರೆ ಬಾಯಿ ಬಡ್ಕೊತಾನೆ, ಇನ್ನೊಬ್ಬ ಮಾಡದಿದ್ದರೆ ಅಂಡು    ಬಡ್ಕೊತಾನೆ
2. ದಾಸಯ್ಯ, ಬಸಕ್ಕ ಚುನಾವಣೆಗೆ ನಿಲ್ಲುತ್ತಾರೆ ಅನ್ನುವ ಸುದ್ದಿ ಬಿದ್ದಾಗ ಒಬ್ಬ ಗೌಡ ಹೇಳುವ ಮಾತು "ತುಪ್ಪದ ಕೊಡದ ಮೇಲೆ ಕೂತಿರೋ ಇಲಿ, ಬಿಡೊಂಗೂ ಇಲ್ಲ, ಬಡಿಯೊಂಗೂ ಇಲ್ಲ.."
೩. ದಾಸಯ್ಯ ಮತ್ತು ಬಸಕ್ಕನ ಬಗ್ಗೆ ಗೌಡರು ಹೇಳುವ ಮಾತು "ಇವನು ಉಪ್ಪಿಲ್ಲದೇ ಹುರಿತಾನೆ, ಅವಳು ಎಣ್ಣೆ ಇಲ್ಲದೆ ಮೆರಿತಾಳೆ 
೪. ಇವಳು ದುಡ್ಡು ಕೊಟ್ಟರೆ ಧೂಪ ಹಾಕ್ತಾಳೆ, ಕಾಸು ಕೊಟ್ಟರೆ ಕೈಲಾಸ ತೋರಿಸ್ತಾಳೆ
೫. ದಾಸಯ್ಯ ಬಸಕ್ಕನಿಗೆ ನೀನು ಜನ ಸೇವೆ ಮಾಡು ಅಂತ ಹೇಳಿದಾಗ "ದಾಸಯ್ಯ, ಹತ್ತು ವರ್ಷದಿಂದ ಈ ಇಬ್ಬರ ಗೌಡರ ಸೇವೆ ಮಾಡಿ ಸಾಕಾಗಿ ಹೋಗಿದೆ,  ಇನ್ನು ಜನಗಳ ಸೇವೆ ನನಗೊಬ್ಬಳಿಗೆ ಆಗೋಲ್ಲ :-)
೬. ದೀಪ ನುಂಗೋ ದಾಸಯ್ಯ, ದೀವಟಿಗೆ ನುಂಗೋ ಬಸಕ್ಕ
೭. ಚುನಾವಣಾಧಿಕಾರಿ  ಹಳ್ಳಿಯಲ್ಲಿ ಹೆಣ್ಣು ಮಗಳನ್ನು ಚುನಾವಣೆಗೆ ನಿಲ್ಲಸಬೇಕು ಯಾಕೆ ಅಂದ್ರೆ ಅವಳು ವೀಕರ್  ಸೆಕ್ಸ್ ಅಂದ್ರೆ ದುರ್ಬಲ ಲಿಂಗ ಅಂತ ಹೇಳ್ತಾನೆ ಅದಕ್ಕೆ ಗೌಡ ಹೇಳುವ ಮಾತು..."ಅವಳು ಎಂಥ ಸ್ವಾಮಿ ದುರ್ಬಲ ಲಿಂಗ!!, ನಮ್ಮೂರಲ್ಲಿ ಇರುವ ಶಕ್ತಿಶಾಲಿ ಲಿಂಗ ಅವಳು"
೮. ಒಬ್ಬ ಗೌಡ ಬಂದು ಬಸಕ್ಕನಿಗೆ ನೀನು ನಿಂತ್ಕೋಬೇಕು  (ಚುನಾವಣೆಗೆ) ಅಂತ ಹೇಳಿದಾಗ ಅವಳು "ಏನಾತು ಗೌಡ್ರೆ..ದಿನಾಲು ಮಲಕ್ಕೋ,. ಮಗ್ಗಾಲಾಗು ಅಂತ ಹೇಳ್ತಾ ಇದ್ದೋರು .ಇವತ್ತೇನೋ ನಿಂತ್ಕೋ ಅಂತ ಹೇಳ್ತಾ ಇದ್ದೀರಾ?!"
೯. ಇನ್ನೊಬ್ಬ ಗೌಡ ನಿನಗೆ ಚೇರ್-ಮ್ಯಾನ್ ಖುರ್ಚಿ ಬೇಡ ಅಂತ ಬಸಕ್ಕನಿಗೆ  ಹೇಳಿದಾಗ ಅವಳು "ಏನಿದು ಗೌಡ್ರೆ, ಕಳೆದ ಹತ್ತು ವರ್ಷದಿಂದ ನೀವು ಕೇಳಿದಾಗೆಲ್ಲ ಕಾಲು ಕೊಡ್ತಾ ಇದ್ದೆ...ನೀವು ಆ ನಾಲ್ಕು ಕಾಲಿನ ಖುರ್ಚಿ ಕೊಡೋಲ್ಲ ಅಂತ ಹೇಳ್ತ್ಹಿರಲ್ಲ"


ಇವೆಲ್ಲ ಕೆಲವು ತುಣುಕುಗಳು...ಇಡಿ ಸಿನಿಮಾದಲ್ಲಿ ಇಂತಹ ಅನೇಕ ಸಂಭಾಷಣೆಗಳು ಇದ್ದಾವೆ...ನೋಡಿ ಖುಷಿ ಪಡಿ.

Sunday, February 12, 2012

ಲೋಕನಾಥ್ ಸಿನಿ ನಟ - ಅರವತ್ತೆರಡು ವಿವಾಹ ಮಹೋತ್ಸವ (2012)

http://www.prajavani.net/web/include/story.php?news=6528&section=54&menuid=13

ಲೋಕನಾಥ್ ಸಿನಿ ನಟ ಒಬ್ಬ ಕಲಾವಿದರು ...ಅವರಲ್ಲಿ ತುಂಬಿರುವ ಪ್ರತಿಭೆ ಅವರ ಎತ್ತರಕಿಂತಲೂ ಎತ್ತರ...
ಅರವತ್ತೆರಡು ವಿವಾಹ ಮಹೋತ್ಸವ ಆಚರಿಸುತ್ತಿರುವ ಈ ದಂಪತಿಗಳಿಗೆ ಕನ್ನಡ ಚಲನಚಿತ್ರ ವೀಕ್ಷಕರ ಪರವಾಗಿ ಒಂದು ಲೇಖನ..

ಲೋಕನಾಥ್ ಅಂದ ಕೂಡಲೇ ಕಣ್ಣ ಮುಂದೆ ಬರುವುದು ಉಪ್ಪಿನಕಾಯಿ ದೃಶ್ಯ - ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ...ದೃಶ್ಯಗಳು ಎರಡು ಮೂರೇ ಇದ್ದರು ಪರಿಣಾಮಕಾರಿಯಾಗಿ ಮನದಲ್ಲಿ ಛಾಪು ಒತ್ತಿದೆ.. ಅದರಲ್ಲೂ ಕಡೆ ದೃಶ್ಯದಲ್ಲಿ ಹೇಳುವ ಸಂಭಾಷಣೆ "ಅಯ್ಯನೋರ ಎಲ್ಲರು ನಿಮ್ಮ ಮನೆಯಿಂದ ಕದ್ದು ಕೊಂಡು ಹೋಗಿದ್ದನ್ನ ತಿರುಗಿ ಕೊಟ್ಟರು..ಆದ್ರೆ ನಾನು ಕೊಡೋಕೆ ಆಗೋಲ್ಲ...ಯಾಕೆ ಅಂದ್ರೆ ನಿಮ್ಮ ಮನೆ ಉಪ್ಪಿನಕಾಯಿ ಬಹಳ ರುಚಿ..ಅದಕ್ಕೆ ಸಾರು ಕುಡಿದ ಹಾಗೆ ಕುಡಿದು ಬಿಟ್ಟೆ..ಕ್ಷಮಿಸಿ ಅಯ್ಯನೋರ".ಈ ಸಂಭಾಷಣೆ ಹೇಳುವಾಗ ಅವರ ಮುಖದಲ್ಲಿ, ಹಾಗು ಧ್ವನಿಯಲ್ಲಿ ಸಿಗುವ ಮುಗ್ದತೆ ನಿಜಕ್ಕೂ ಅವರ್ಣನೀಯ ..

ದ್ವಾರ್ಕಿ-ವಿಷ್ಣು  ಜೋಡಿಯಲ್ಲಿ ಬಂದ ಅನೇಕ ಚಿತ್ರಗಳಲ್ಲಿ ಇವರ ಅಭಿನಯ ನಗೆ ಬುಗ್ಗೆ ಉಕ್ಕಿಸುತ್ತದೆ...ಕಿಟ್ಟು-ಪುಟ್ಟು, ಸಿಂಗಪೂರನಲ್ಲಿ ರಾಜ ಕುಳ್ಳ, ಮನೆ ಮನೆ ಕಥೆ, ಗುರು ಶಿಷ್ಯರು,  ಹೀಗೆ ಹಲವಾರು ಸಿನೆಮಾದಲ್ಲೂ ಅಭಿನಯ ಗಮನ ಸೆಳೆಯುತ್ತದೆ..

ನಾಗರಹಾವು, ಒಲವಿನ ಕಾಣಿಕೆ, ಅರುಣ ರಾಗ, ಬಂಗಾರದ ಪಂಜರ, ಮುಂತಾದ ಅನೇಕ ಚಿತ್ರಗಳಲ್ಲಿ ಅವರ ಕಂಚಿನ ಕಂಠದ ಮಾತುಗಳು, ಅಭಿನಯ ಬಲು ಸೊಗಸು

ಅವರ ಇನ್ನೊಂದು ಸುಂದರ ಅಭಿನಯದ ಸಿನಿಮಾ "ಮಿಂಚಿನ ಓಟ" ಶಂಕರ ನಾಗ್ ಅದ್ಭುತ ಚಿತ್ರ.  ಅದರಲ್ಲಿ ಕಳ್ಳರ ಪಾತ್ರದಲ್ಲಿ ಶಂಕರ್, ಅನಂತ್ ಜೊತೆಗೆ ಇವರು ಸೊಗಸಾಗಿ ಅಭಿನಯಿಸಿದ್ದಾರೆ..

ಇಂತಹ ಅಪರೂಪದ ಕಲಾವಿದ ಎಂಬತ್ತೆರಡು ವಸಂತಗಳನ್ನು ಪೂರೈಸಿ ಮುನ್ನೆಡೆಯುತ್ತಿದ್ದಾರೆ ..ಅವರಿಗೆ ಆ ಭಗವಂತ ಅರೋಗ್ಯ, ನೆಮ್ಮದಿ, ಸುಖ, ಶಾಂತಿ ಹಾಗು ಬಹುಕಾಲ ದಾಂಪತ್ಯ ಜೊತೆ ನೀಡಲಿ ಅನ್ನುವ ಆಶಯದೊಂದಿಗೆ ಈ ಲೇಖನ ಮುಗಿಸುತ್ತಿದ್ದೇನೆ..

Monday, January 9, 2012

ದೇವರ ದುಡ್ಡು - ಭಗವದ್ಗೀತೆ ಕೊಡುವ ಭಾವ ಎರಡು ಘಂಟೆಗಳ ಕಾಲದಲ್ಲಿ (1976)

ದೇವರ  ದುಡ್ಡು 



ಒಂದು ಸುಂದರವಾದ ಕಥೆಯನ್ನು  ಎಷ್ಟು ಚೆನ್ನಾಗಿ ಯಾವ ಭಾಷೆಯಲ್ಲಾದರು  ಸರಿ ಚಿತ್ರಿಸಬಹುದು ಎನ್ನುವದಕ್ಕೆ ಅತ್ಯುತ್ತಮ ಉದಾಹರಣೆ ಈ ಸಿನಿಮಾ...


ಮೊದಲ ಪುಟದಲ್ಲೇ ಈ ಸಿನಿಮಾ ಗಮನ ಸೆಳೆಯುತ್ತದೆ. ಎಲ್ಲರ ಕಲಾವಿದರ, ತಂತ್ರಜ್ಞರ ಹೆಸರು ತೋರಿಸುವದರ ಬದಲು ಇದು ಕೆ.ಎಸ.ಎಲ್. ಸ್ವಾಮಿ ಚಿತ್ರತಂಡದಿಂದ ಎನ್ನುವುದು ಖುಷಿಕೊಡುತ್ತದೆ.


ಎಲ್ಲರು ಒಂದೇ ಅನ್ನುವ ಭಾವ ಬಂದ್ರೆ ಅದರ ಚೌಕಟ್ಟು ಕೂಡ ಸುಂದರವಾಗಿ ಇರುತ್ತದೆ.


ಈ ಸಿನಿಮಾ ಆಹಾ ಓಹೋ ಅನ್ನುವ ಮಟ್ಟಕ್ಕಿಂತ ಮೇಲೆ ನಿಲ್ಲುತ್ತದೆ. ಸಮಗ್ರ ಭಗವದ್ಗೀತೆ ಕೊಡುವ ಭಾವವನ್ನು ಸುಮಾರು ಎರಡು ಘಂಟೆಗಳ ಕಾಲದಲ್ಲಿ ಕೊಡುವ ಶಕ್ತಿ ಈ ಚಿತ್ರದಲ್ಲಿದೆ ಎನ್ನುವುದು ಇದರ ಹೆಗ್ಗಳಿಕೆ.


ಉತ್ತಮ ಸಂಭಾಷಣೆ, ಉತ್ತಮ ಹಾಡುಗಳು, ಸಂಗೀತ ಮನಸು ಸೆಳೆಯುತ್ತದೆ.

  • ರಾಜೇಶ್ ಅವರ ವೃತ್ತಿ ಜೀವನದ ಒಂದು ಮೈಲಿಗಲ್ಲು ಎನ್ನಬಹುದು. ಸುಲಲಿತವಾದ ನಟನೆ, ಸಂಭಾಷಣೆ ಹೇಳುವ ಧಾಟಿ, ಆಂಗಿಕ ಅಭಿನಯ ಎಲ್ಲವು ಅತಿ ಸುಂದರ.
  • ಶ್ರೀನಾಥ್ ಕೃಷ್ಣನಾಗಿ ಉತ್ತಮ ಅಭಿನಯ, ತಾಳಬದ್ದವಾದ ಸಂಭಾಷಣೆ, ಏರಿಳಿತ, ಹದವಾದ ಧಾಟಿಯಲ್ಲಿ ಮುಟ್ಟಿಸಬೇಕಾದ ವಿಷಯವನ್ನು ಹೇಳುವ ಚತುರತೆ ಎಲ್ಲವು ಅಭಿನಯದಲ್ಲಿ ಮೇಳೈಸಿದೆ.
  • ರಾಜೇಶ್ ಮತ್ತು ಶ್ರೀನಾಥ್ ಇಬ್ಬರು ನಡೆಸುವ ಜುಗಲ್-ಬಂದಿ ಇಡಿ ಚಿತ್ರದ ಅತ್ಯುತ್ತಮ ದೃಶ್ಯಗಳು
  • ಜಯಂತಿಯ  ಪ್ರೌಡ ಅಭಿನಯ, ಆ ವಯಸ್ಸಿನಲ್ಲೂ ಮುದ್ದಾಗಿ, ಅಮ್ಮನಾಗಿ ತೋರುವ ಅಭಿನಯ ಮನಸನ್ನು ಸೂರೆಗೊಳ್ಳುತ್ತದೆ
  • ಎಡಕಲ್ಲು ಗುಡ್ಡದ ಚಂದ್ರಶೇಖರ್ ಆ ಸಿನಿಮಾದಲ್ಲಿ ಎಷ್ಟು ತುಂಟ, ಪುಂಡನಾಗಿ ಅಭಿನಯಿಸಿದ್ದರೋ ಇಲ್ಲಿ ಅಷ್ಟೇ ಸಂಯಮ ಅಭಿನಯ, ಅದರಲ್ಲೋ ಕಡೆಗೆ ಅವರ ತಾಯಿ ಪಾತ್ರದಾರಿ ಜಯಂತಿಗೆ ಹೇಳುವ "ಅಮ್ಮ, ದೇವರು ನನಗೆ ಸಿಕ್ಕರೆ"  ಜಯಂತಿ ಹೇಳುತ್ತಾರೆ "ಅಪ್ಪನಿಗೆ ಬೇಗ ಕಾಯಿಲೆ ವಾಸಿ ಮಾಡು ಅಂತ ಕೆಳ್ಕೊತೀಯೇನೋ" ಅಂದಾಗ ಚಂದ್ರು ಹೇಳುವ ಮಾತು "ಅಮ್ಮ ಅದಕ್ಕೆ ನೀನು ಇದ್ದೀಯ...ಪ್ರತಿ ಜನುಮದಲ್ಲೋ ನೀನೆ ನನ್ನ ತಾಯಿಯಾಗಿರು ಅಂತ ಕೆಳ್ಕೊತೀನಿ" ಅಂತ ಹೇಳಿದಾಗ ಕಣ್ಣಂಚಲಿ ಭಾಷ್ಪ ಜಿನುಗತ್ತದೆ 
  • ಬಾಲಣ್ಣ ಗಮನಸೆಳೆಯುತ್ತಾರೆ. ಬಾಲಣ್ಣ-ರಾಜೇಶ್ ಇಬ್ಬರು ಇರುವ ದೃಶ್ಯಗಳು ಖುಷಿಕೊಡುತ್ತದೆ
  • ಪಿ. ಬಿ.ಎಸ. "ನಾನೇ ಎಂಬ ಭಾವ" ಹಾಡಿನಲ್ಲಿ ಒಳಗಿನ ಕಣ್ಣು ತೆರೆಸಿದರೆ, ಎಸ.ಪಿ.ಬಿ. "ತರಿ ಕೆರೆ ಏರಿ ಮೇಲೆ " ಹಾಡಿನಲ್ಲಿ  ನಮ್ಮ ದೇಹವನ್ನು ಕುಣಿಸುತ್ತಾರೆ.  http://www.youtube.com/watch?v=T3fsV5yUeVg
  • ರಾಜನ್-ನಾಗೇಂದ್ರ ಅವರ ಸಂಗೀತ ಪ್ರತಿ ದೃಶ್ಯವನ್ನು ಕಾವ್ಯವನ್ನಾಗಿ ಮಾಡಿದ್ದಾರೆ
ನನ್ನ ಅಪ್ಪನಿಗೆ ತುಂಬಾ ಪ್ರಿಯಾವಾದ ಸಿನಿಮಾ. ನಾನು ಎಷ್ಟು ಬಾರಿ ನೋಡಿದ್ದೇನೋ ನನಗೆ ಗೊತ್ತಿಲ್ಲ..ಪ್ರತಿ ಬಾರಿ ನೋಡಿದಾಗಲು ಹೊಸ ಅನುಭವ ಕೊಡುವಂತ ಉತ್ತಮ ಚಿತ್ರಕೊಟ್ಟ ಕೆ.ಎಸ.ಎಲ್ ಸ್ವಾಮಿ ತಂಡಕ್ಕೆ ನನ್ನ ನಮನಗಳು

Saturday, December 17, 2011

ವಿಷ್ಣುವರ್ಧನ - ಕನ್ನಡ ಸಿನಿಮಾ - ಒಂದು ಒಳ್ಳೆಯ ಪ್ರಯತ್ನ (2011)

ಜನಪ್ರಿಯ ಸಿನಿಮಾ ನಟರ ಹೆಸರು ಹೇಳಿಕೊಂಡು...ಕಳಪೆ ಗಿಮ್ಮಿಕ್ ಮಾಡುತ್ತಾ...ದುಡ್ಡು ಮಾಡೋರ ಮಧ್ಯೆ ನಮ್ಮ ಸಾಹಸಿ ದ್ವಾರಕೀಶ್ ಭಿನ್ನವಾಗಿ ನಿಲ್ತಾರೆ...

ಹೆಸರು ಉಪಯೋಗಿಸಿಕೊಂಡಿರುವುದು ಬರಿ ತನ್ನ ಆಪ್ತಮಿತ್ರನಿಗೆ ಒಂದು ನಮನ ಸಲ್ಲಿಸುವುದಕ್ಕೆ ಮಾತ್ರ ಎಂದು ಸಿನಿಮಾ ಶುರುವಾದ ಕೆಲವೇ ಕ್ಷಣಗಳಲ್ಲಿ ತಿಳಿಯುತ್ತೆ..
ಹಂಗಾಗಿ ಹೆಸರಿನ ಸುತ್ತ ಸುತ್ತಿಕೊಂಡಿದ್ದ ಅರ್ಥವಿಲ್ಲದ ವಿವಾದಗಳು ಕೇವಲ ವಿವಾದಗಳು...ಅಷ್ಟೇ...
ಒಂದು ಮಾತೆಂದರೆ..ಹೆಸರಿಡುವದಕ್ಕೆ ಮುನ್ನ ವಿವಾದ ಬಗೆಹರಿಸಿ ಕೊಂಡಿರಬಹುದಿತ್ತು ಆದ್ರೆ ದ್ವಾರಕೀಶ್ ರವರಿಗೆ ಕಥೆ, ಮತ್ತು ಚಿತ್ರಕಥೆಯ ಬಗ್ಗೆ ಹಾಗು ತಾನು ಮಾಡಬೇಕಾಗಿರುವ ಕೆಲಸದ ಬಗ್ಗೆ ನಂಬಿಕೆ ಬಲವಾಗಿತ್ತು ಅಂತ ಅನ್ನಿಸುತ್ತೆ ಹಾಗಾಗಿ ಅವರು ತನ್ನ ಕೆಲಸದ ಬಗ್ಗೆ ಮಾತ್ರ ಗಮನಿಸಿದ್ದಾರೆ..ಅದು ಶ್ಲಾಘನೀಯ 

ಚಿತ್ರದ ಬಗ್ಗೆ ಧನಾತ್ಮಕ ಮಾತುಗಳು..
  • ಸುಮಾರು ಐದು ದಶಕ ಸಿನಿಮಾರಂಗದಲ್ಲಿ ತ್ರಿವಿಕ್ರಮ ಸಾಧಿಸಿರುವ ನಟ, ತನ್ನ ಆಪ್ತಮಿತ್ರನಿಗೆ ಎರಡು ಸಾಲು ಶ್ರದ್ದಾಂಜಲಿ ಗಮನ ಸೆಳೆಯುತ್ತೆ..
  • ತಾಂತ್ರಿಕವಾಗಿ ದ್ವಾರಕೀಶ್ ರವರ ಉತ್ತಮ ಚಿತ್ರ
  • ಕಥೆ, ಚಿತ್ರಕಥೆ ಮೊನಚಾಗಿದೆ..ಹೇಳಬೇಕಾದಷ್ಟು ಮಾತ್ರ ಸೂಚ್ಯವಾಗಿ ಹೇಳಿದ್ದಾರೆ
  • ಹೊಡೆದಾಟದ ದೃಶ್ಯಗಳು ಚೆನ್ನಾಗಿವೆ
  • ನೃತ್ಯ ಸಂಯೋಜನೆ ಚೆನ್ನಾಗಿ ಮೂಡಿ ಬಂದಿದೆ
  • ಸುದೀಪ್ ಮುದ್ದಾಗಿ ಕಾಣುತ್ತಾರೆ..ವಸ್ತ್ರವಿನ್ಯಾಸ ಸೊಗಸಾಗಿದೆ..ಮೊದಲ ಬಾರಿಗೆ ಸುದೀಪ್ ನನಗೆ ಈ ಚಿತ್ರದಲ್ಲಿ ಇಷ್ಟವಾಗಿದ್ದಾರೆ
  • ಪ್ರಿಯಾಮಣಿ ತನ್ನ ಸ್ನಿಗ್ಧ ಸೌಂದರ್ಯದಿಂದ ಗಮನ ಸೆಳೆಯುತ್ತಾರೆ
  • ಸೋನು ಸೂದ್ ಖಳನಟನಾಗಿ ಉತ್ತಮ ಸಾಮರ್ಥ್ಯ ತೋರಿದ್ದಾರೆ
  • ಆಪ್ತಮಿತ್ರ ಸಿನಿಮಾದ ಮೊದಲ ಹೊಡೆದಾಟದ ದೃಶ್ಯದ ನಕಲು ನಿಜವಾದ ಸಾಹಸಸಿಂಹ ಯಾರು ಅನ್ನುವ ಪ್ರಶ್ನೆಗೆ ಸೊಗಸಾದ ಉತ್ತರ



ಇನ್ನು ಉತ್ತಮ ಪಡಿಸಬಹುದಾಗಿದ್ದ ಸಾಧ್ಯತೆಗಳು
  • ಅರುಣ್ ಸಾಗರ್ ಪಾತ್ರ ಪೋಷಣೆ ಪೇಲವ
  • ಭಾವನ ಪಾತ್ರ ಗಟ್ಟಿತನ ಇಲ್ಲದಿರುವುದು 
  • ಸಂಗೀತ ನಿರಾಸೆ ಮೂಡಿಸುತ್ತದೆ...ದ್ವಾರಕೀಶರವರ ಚಿತ್ರ ಎಂದರೆ ಸಂಗೀತ ಸಂಯೋಜಕರಿಗೆ ಹಬ್ಬ..ಆದ್ರೆ ಹರಿಕೃಷ್ಣ ನಿರಾಸೆ ಮೂಡಿಸಿದ್ದಾರೆ
  • ಕ್ಲೈಮಕ್ಷ್ ಅವಸರವಾಯಿತೆನೂ ಅನ್ನುವ ಭಾವ ಕಾಡುತ್ತದೆ..ಇನ್ನು ಒಂಚೂರು ಪ್ರಯತ್ನ ಪಟ್ಟು ಉತ್ತಮ ಪಡಿಸಬಹುದಿತ್ತು
  • ದ್ವಾರಕೀಶ್ ಪಾತ್ರ ಸಿನಿಮಾದ ಕತೆ ಒಳಗೆ ಪ್ರವೇಶ ಪಡೆಯದೇ ಇರುವುದು
  • ಹಾಡಿನ ಚಿತ್ರೀಕರಣದಲ್ಲಿ ಕನಿಷ್ಠ ಉಡುಪು ಧರಿಸಿ ಕುಣಿಯುವ ಸುಂದರಿಯರು - ಒಳ್ಳೆ ಸದಭಿರುಚಿ ಅನ್ನಿಸುವುದಿಲ್ಲ
ಒಟ್ಟಾರೆ ಕನ್ನಡದ ಹಿರಿಯ ನಟ (ಬದುಕಿರುವವರಲ್ಲಿ) ನಿರ್ಮಾಪಕ ಒಂದು ಒಳ್ಳೆಯ ಚಿತ್ರ ನೀಡಲು ಪಟ್ಟ ಶ್ರಮ ಪ್ರತಿಯೊಂದು ಅಂಕಣದಲ್ಲೂ ಕಾಣುತ್ತದೆ..ಇಂತಹ ಕನ್ನಡಪರ, ನಾಡಿನಪರ ಕಾಳಜಿ ಇರುವ, ಕರುನಾಡಿನಲ್ಲಿ ಸಾಹಸಗಳನ್ನು ಮಾಡಿರುವ ದ್ವಾರಕೀಶ್  ಅವರಿಗೆ ನಮ್ಮ ಸಣ್ಣ ಬೆಂಬಲ ಎಂದರೆ ಒಂದು ಬಾರಿ ಸಿನಿಮಾ ನೋಡುವುದು...ಖಂಡಿತ ನಿರಾಸೆ ಮೂಡಿಸುವುದಿಲ್ಲ...ಇದರಿಂದ ಅವರಿಗೆ ಇನ್ನೂ ಹೆಚ್ಚಿನ ಸಾಧನೆ ಮಾಡುವ ಶಕ್ತಿ, ಹುಮ್ಮಸ್ಸು ಬರುತ್ತೆ...

ದ್ವಾರಕೀಶ್ ರವರಿಗೆ (ಅವರೇ ಹೇಳಿದಂತೆ) ಮರುಜನ್ಮ ನೀಡಿದ ಆಪ್ತಮಿತ್ರ ವಿಷ್ಣು ನೆನಪು ದ್ವಾರಕೀಶ ಅವರು ಹೇಳುವ ಒಂದು ಸಂಭಾಷಣೆ ಕಣ್ಣಾಲಿಗಳನ್ನು ಒದ್ದೆ ಮಾಡುತ್ತದೆ...

ಜೈ ದ್ವಾರಕೀಶ್ ನಿಮ್ಮ ಸಾಧನೆಯ ಸ್ಪೂರ್ತಿ ಫೀನಿಕ್ಷ್ ಪಕ್ಷಿಯನ್ನೋ ಮೀರಿಸುತ್ತೆ...ನಿಮ್ಮಿಂದ ಇನ್ನೂ ಹೆಚ್ಚಿನ ಚಿತ್ರಗಳನ್ನ ನಿರೀಕ್ಷಿಸುವ ಕರುನಾಡಿನ ಜನತೆಯಲ್ಲ್ಲಿ ಒಬ್ಬ!!!!!!!!!!!!!!

Sunday, December 4, 2011

Dev evergreen Anand 1923 - 2011

Three movies of Dev Saab stands tall in my favorite list.

The first suspense thriller of that kind "JEWEL THIEF"
The suspense thriller which kept guessing till last, had a great music, excellent dialogues, super choreography, and above all stylish Dev, and villain role played by Ashok Kumar.

The scene where the Dev's double will get revealed just sends the chill down the spine.

Hoto me aisi baath dance by Vyjanthimala anyway steals the show, but Dev looks awesome in those costume, and his mannerism of head shaking, and playing the doll mesmarises.

"Once upon a time there was a Jewel Thief" the final dialogue still echos in my ears. 


"Gambler"

The Teen patte khel between Dev, and the Shatrugnah Sinha is just awesome. 

The court scene where Dev argues, and proves his innocence, I haven't seen so far in any movies.  The court scene very neatly, and cleverly shot in the climax.

Jeevan as villain steals the show, but Dev maintain his stature in this action thriller.  When he is in resurrection mode, he steals the money from the Temple Hundi, and a old lady sees this, and drops all the coins, and finally one coin tucked to his trousers when he was thinking what the stupidity he did to steal the money, and when he find the coin he says "Kya mein samjoo..too ne muje maaf kiya bhagavaan"

The songs were lilting at its best. Dil Aaj shayar hei..just makes you walk in your dream.  The lyrics, the music, and wonderful singing by Kishore takes you to different world altogether.

The final dialogue "Kya aapko mein bhabhi bula saktha hoon" by Dev's brother role keep your grin on your cheek.

Johny Mera Naam

Superb Screen play, wonderful acting by all the crew make this action thriller its own kind.  Dev police officer disguised as rouge, thief is simply awesome.

He could able to match steps with the dream girl Hema Malini, and for lilting music, and lyrics.  His fights, mannerisms, the tweaky smile all makes this movie an ever green.  

Every one played their part beautifully in this movie, Pran, Jeevan, Prem Naath, Johar to name few.

His dialogue wielding pistol in his hand, with little bent body, and uttering those words in high decibel "Naam yaad rakhna Johny mera naam" is unmatched down the years.

He had etched his name permanently in the hearts of cinema goers of all generation.  Many duplicates simply made a tamasha of him, but nevertheless he will be untouched.  

He will live for ever in the hearts of millions of cinema crazy people.

Hatts off Dev Saab for your marathon innings in which you mesmarised billions of people around the globe.

Tuesday, November 1, 2011

ನಮ್ಮ ಅಣ್ಣ ಬಾಲಣ್ಣ ಜನ್ಮ ಶತಮಾನೋತ್ಸವ (2011)

ಹೆಮ್ಮೆಯ ಬಾಲಣ್ಣ
ಬಾಲಣ್ಣ ನಮ್ಮ ಜೊತೆ ಇದ್ದರು.....ಛೆ ಎಂಥ ಮಾತು...ನಮ್ಮ ಜೊತೆ ಸದಾ ಇರುವ ಅಪರೂಪದ ವ್ಯಕ್ತಿತ್ವ...


ಜೀವನದಲ್ಲಿ ಅನೇಕ ಪುಸ್ತಕಗಳನ್ನು ಓದುವುದಕ್ಕಿಂತ...ಬಾಲಣ್ಣನ ಸಿನಿಮಾಗಳು ಕೊಡುವ ಜ್ಞಾನ ಅದಕ್ಕಿಂತ ಅಧಿಕ...
ಇಂದಿಗೆ ಬಾಲಣ್ಣ ನಮ್ಮ ಕರುನಾಡ ಭೂಮಿಯನ್ನು ಬೆಳಗುವುದಕ್ಕೆ ಬಂದು ನೂರು ವರ್ಷಗಳಾದವು..
ನೂರು ಸಂಖ್ಯೆ ಬರಿ ಸಂಖ್ಯೆ ಮಾತ್ರ...ಆದ್ರೆ ಬಾಲಣ್ಣ ನಮ್ಮ ಬಾಳಿನ ಮೇಲೆ ಮಾಡಿರುವ ಹೆಗ್ಗುರುತು ಅಪಾರ..ಅವರ ಬಾಲ್ಯದ ಬಗ್ಗೆ, ಕಿವುಡುತನದ ಬಗ್ಗೆ, ಅಭಿಮಾನ್ ಸ್ಟುಡಿಯೋ ಕಟ್ಟಲು ಸಾಹಸ ಮಾಡಿದರ ಬಗ್ಗೆ ಸಾವಿರಾರು ಪುಟಗಳು ಸಿಗುತ್ತವೆ...

ಆದ್ರೆ ಅವರ ಚಿತ್ರ ಬದುಕಿನಲ್ಲಿ ಸಾಧಿಸಿದ ಪಟ್ಟ, ಸಣ್ಣ ಪಾತ್ರದಿಂದ ತ್ರಿವಿಕ್ರಮನಂತೆ ಬೆಳೆದ ಪರಿ ಎಂಥವರನ್ನು ಮಂತ್ರ ಮುಗ್ಧರನ್ನಾಗಿಸುತ್ತೆ 
ಅವರ ಪ್ರತಿ ಸಂಭಾಷಣೆಯಲ್ಲೂ ಇರುತಿದ್ದ ಶ್ರದ್ಧೆ, ಅನುಭವಿಸಿ ಮಾತಾಡುತ್ತಿದ್ದ ರೀತಿ, ರಾಗವಾಗಿ ಹೇಳುತಿದ್ದ ರೀತಿ...ಅವರಿಗೆ ಅವ್ರೆ ಸಾಟಿ...

ಬಂಗಾರದ ಮನುಷ್ಯ ಚಿತ್ರದ ರಾಚೂಟಪ್ಪ ಅಣ್ಣಾವ್ರ ರಾಜೀವನ ಪಾತ್ರದಷ್ಟೇ ಪರಿಣಾಮಕಾರಿ..ಈ ಚಿತ್ರ ಬಿಡುಗಡೆ ಆದ ಮೇಲೆ ಅನೇಕ ಧನವಂತರು ದಾನಶೀಲ  ಗುಣಗಳನ್ನೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು ಅನ್ನುವ ಮಾತಿದೆ..
ಗಂಧದಗುಡಿ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಅಭಿನಯ ತಣ್ಣಗಿನ ಕ್ರೌರ್ಯ ತೋರಿಸುತ್ತೆ..
ಕಣ್ತೆರೆದು ನೋಡು ಚಿತ್ರದಲ್ಲಿ ಖಳನಾಯಕನಾಗಿ ಅಭಿನಯ ಬೆಣ್ಣೆ ಮೇಲಿನ ಕೂದಲು ತೆಗೆಯುವಷ್ಟೇ ಸಲಿಸಾಗಿ ಮೋಸ ಮಾಡುತ್ತ ಹೋಗುತ್ತೆ..
ಚಂದವಳ್ಳಿಯ ತೋಟದಲ್ಲಿ ಅಣ್ಣ ತಮ್ಮನ ಮಧ್ಯೆ ತಂದು ಹಾಕಿ ಮನೆ ಮುರುಕನ  ಪಾತ್ರ ಕಣ್ಣಲ್ಲಿ ಕೋಪ ತರಿಸುತ್ತೆ..
ಗಾಂಧಿನಗರದ ಚಿತ್ರದಲ್ಲಿ ಬೇಜವಬ್ಧಾರಿ ತಂದೆಯ ಪಾತ್ರ..
ಭೂತಯ್ಯನ ಮಗ ಅಯ್ಯು ಚಿತ್ರದ ಸಂಸಾರದಲ್ಲಿ ಇದ್ದುಕೊಂಡು ಅವರಿಗೆ ಒಂದು ಗತಿ ತೋರಿಸುವ ಶಕುನಿ ಪಾತ್ರ..
ಒಂದೇ ಎರಡೇ..ಪ್ರತಿ ಪಾತ್ರದಲ್ಲೂ ಅವರ ಪಾತ್ರ ಜೀವನಕ್ಕೆ ಒಂದು ಪಾಠ...

ಕನ್ನಡಕ್ಕೆ ಇಬ್ಬರೇ ಅಣ್ಣ ಒಂದು ರಾಜಣ್ಣ ..ಇನ್ನೊದು ಬಾಲಣ್ಣ...
ಬಾಲಣ್ಣ ರಾಜಣ್ಣನಿಗೆ ಸಂಭಾಷಣೆ ತಿದ್ದುವ ಮೇಷ್ಟ್ರು ಆಗಿದ್ದರೆನ್ನುವುದು ಅತಿಶಯ ಅಲ್ಲ...ರಾಜಣ್ಣ ಅವ್ರೆ ಇದನ್ನು ಹಂಚಿಕೊಂಡಿದ್ದರು..

ಇಂತಹ ಮಹಾನ್ ಕಲಾವಿದ ನಮ್ಮ ನಾಡಿನಲ್ಲಿ ಇದ್ದರು ಎನ್ನುವುದೇ ನಮಗೆ ಹೆಮ್ಮೆ...
ನಾವು ಅವರ ಬದುಕಿಗೆ ಏನು ಮಾಡಲಿಲ್ಲ...ಆದ್ರೆ ಅದಕ್ಕಾಗಿ ಕೊರಗುವ ಬದಲು ....ಅವರ ಅಭಿನಯದ ಚಿತ್ರಗಳಿಂದ ನಮ್ಮ ಜೀವನ ಸುಧಾರಿಸಿಕೊಂಡರೆ...ನಾವು ಅವರ ಈ ಶತಮಾನೋತ್ಸವಕ್ಕೆ ಕೊಡುವ ದೊಡ್ಡ ಸನ್ಮಾನ ಅನ್ನುವ ಮಾತು ಹಾಗು ಇಂಗಿತ ನನ್ನದು...

Sunday, April 24, 2011

ಅಭಿಮಾನಿ ದೇವರುಗಳ ದೇವರು - ರಾಜಕುಮಾರಾ - Abhimani Devarugala Devaru - Rajkumar (2011)

ಅಭಿಮಾನಿ ದೇವರುಗಳ ದೇವರು

ದೇವರು ಯಾವಾಗಲು ಅಭೂತಪೂರ್ವ ಜೀವವನ್ನು ಒಮ್ಮೆ ಮಾತ್ರ ಸೃಷ್ಟಿ ಮಾಡುತ್ತಾನೆ..ಅಂತಹ ಒಂದು ಮುತ್ತು ನಮ್ಮ ರಾಜ್


ಚಿತ್ರ - ನನ್ನ ಸ್ನೇಹಿತ ವಿಕ್ರಂ ಕೃಪೆ

ರಾಜಕುಮಾರ್ ಒಂದು ದಂತಕಥೆ ಅನ್ನುವದಕ್ಕಿಂತ ಕಥೆಗಳ ದಾದಾ ಆಗಿ ಬಿಟ್ರು.  ಅವರಲ್ಲಿನ ಪ್ರತಿಭೆಯನ್ನು ಹೊರಗೆ ತೆಗೆಯಲು ಶ್ರಮಿಸಿದ ಎಲ್ಲ ತೆರೆಯ ಹಿಂದಿನ ದಾದಗಳಿಗೆ ಒಂದು ನಮಿಸುವ ಒಂದು ಸಣ್ಣ ಪ್ರಯತ್ನ. ಇದು ನನ್ನ ಆಯ್ಕೆ, ಇದರಲ್ಲಿ ಯಾವ ಭೇದ-ಭಾವ ಇಲ್ಲ, ನನ್ನ ಅನಿಸಿಕೆ, ನನ್ನ ಅಭಿಪ್ರಾಯ ಮಾತ್ರ ಅಷ್ಟೇ

ನಿರ್ದೇಶಕರು
೧. ಎಚ್. ಎಲ್. ಏನ್. ಸಿಂಹ - ಕನ್ನಡಾಂಬೆಯಾ ಸಾಗರದಲ್ಲಿ  ಹೆಕ್ಕಿ ತೆಗೆದ ಅನರ್ಘ್ಯ ರತ್ನವನ್ನು ಪರಿಚಯಿಸಿದ ಮಹನೀಯ 
ಬೇಡರಕಣ್ಣಪ್ಪ, ಅಬ್ಬಾ ಆ ಹುಡುಗಿ, ತೇಜಸ್ವಿನಿ

೨. ಹುಣುಸೂರು ಕೃಷ್ಣಮೂರ್ತಿ : ಇವರು ರಾಜನ ಎಲ್ಲ ಮುಖಗಳನ್ನು ಪರಿಚಯಿಸಿದ ಪುಣ್ಯಾತ್ಮ. ಸಾಮಾಜಿಕ, ಪೌರಾಣಿಕ, ಐತಿಹಾಸಿಕ, ಭಕ್ತಿಪ್ರಧಾನ, ಸಾಹಸಮಯ ಎಲ್ಲಾ ಪಾತ್ರಗಳಲ್ಲಿ ರಾಜನ ಪ್ರತಿಭೆಯನ್ನ ಅನಾವರಣ ಮಾಡಿದರು
ಕೃಷ್ಣ ಗಾರುಡಿ,ಆಶಾಸುಂದರಿ,ಸತ್ಯ ಹರಿಶ್ಚಂದ್ರ,ಶ್ರೀ ಕನ್ನಿಕಾಪರಮೇಶ್ವರಿ ಕಥೆ,ದೇವರ ಗೆದ್ದ ಮಾನವ,ಭಕ್ತ ಕುಂಬಾರ,ಬಬ್ರುವಾಹನ

೩.ಬಿ. ಆರ್. ಪಂತುಲು: ರಾಜನ ಅಭಿನಯಕ್ಕೆ ಒರೆ ಹಚ್ಚುವ ಪಾತ್ರಗಳಿಗೆ ಶ್ರುತಿ ಹಿಡಿದ ನಿರ್ದೇಶಕ 
ಕಿತ್ತೂರು ಚೆನ್ನಮ್ಮ,ಗಾಳಿ ಗೋಪುರ,ಎಮ್ಮೆ ತಮ್ಮಣ್ಣ,ಗಂಗೆ ಗೌರಿ,ಬೀದಿ ಬಸವಣ್ಣ,ಅಮ್ಮ,ಗಂಡೊಂದು ಹೆಣ್ಣಾರು,ಶ್ರೀ ಕೃಷ್ಣದೇವರಾಯ

೪. ದೊರೈ ಭಗವಾನ್ ಬಾಂಡ್ ಮಾದರಿ ಪತ್ರಗಳು, ತ್ಯಾಗಮಯ ಪತ್ರಗಳು, ಸಂಗೀತ ಪ್ರಧಾನ ಪಾತ್ರಗಳು ಮೂಡಿಸಿರುವ ಛಾಪನ್ನು ನೋಡಿಯೇ ತೀರಬೇಕು
ಜೇಡರ ಬಲೆ,ಗೋವಾದಲ್ಲಿ ಸಿ.ಐ.ಡಿ. ೯೯೯,ಆಪರೇಷನ್ ಜ್ಯಾಕ್ಪಾಟ್ ಸಿ.ಐ.ಡಿ. ೯೯೯,ಕಸ್ತೂರಿ ನಿವಾಸ,ಪ್ರತಿಧ್ವನಿ,ಎರಡು ಕನಸು,ಗಿರಿಕನ್ಯೆ,ಆಪರೇಷನ್ ಡೈಮಂಡ್ ರಾಕೆಟ್,ನಾನೊಬ್ಬ ಕಳ್ಳ,ವಸಂತ ಗೀತ,ಹೊಸ ಬೆಳಕು,ಸಮಯದ ಗೊಂಬೆ,ಯಾರಿವನು?,ಜೀವನ ಚೈತ್ರ,ಒಡ ಹುಟ್ಟಿದವರು  

೫. ವಿಜಯ್ : ಈ ಮಹನೀಯ ೧೦೦% ಯಶಸ್ಸು ಕಂಡ ನಿರ್ದೇಶಕ. ಅವರ ಚಿತ್ರಗಳು ಎಲ್ಲ ಆಯಾಮಗಳನ್ನು ಹೊಂದಿತ್ತು.
ಗಂಧದ ಗುಡಿ,ಶ್ರೀನಿವಾಸ ಕಲ್ಯಾಣ,ಮಯೂರ,ನಾ ನಿನ್ನ ಮರೆಯಲಾರೆ,ಬಡವರ ಬಂಧು,ಸನಾದಿ ಅಪ್ಪಣ್ಣ,ಹುಲಿಯ ಹಾಲಿನ ಮೇವು,ನೀ ನನ್ನ ಗೆಲ್ಲಲಾರೆ,ಭಕ್ತ ಪ್ರಹ್ಲಾದ

೬. ಸಿದ್ದಲಿಂಗಯ್ಯ : ಬಂಗಾರ ಛಾಪನ್ನು ಮೂಡಿಸಿದ ಮಹಾನ್ ನಿರ್ದೇಶಕ 
ಮೇಯರ್ ಮುತ್ತಣ್ಣ,ಬಾಳು ಬೆಳಗಿತು,ನಮ್ಮ ಸಂಸಾರ,ತಾಯಿ ದೇವರು,ನ್ಯಾಯವೇ ದೇವರು,ಬಂಗಾರದ ಮನುಷ್ಯ,ದೂರದ ಬೆಟ್ಟ

ಇವರ ಜೊತೆ ವೈ.ಆರ್. ಸ್ವಾಮಿ, ಸೋಮಶೇಕರ್, ಸಿಂಗೀತಂ ಶ್ರೀನಿವಾಸರಾವ್, ಪುಟ್ಟಣ್ಣ ಮುಂತಾದ ಹಲವಾರು ಮಹಾನ್ ಜೀವಗಳು ಇದ್ದಾರೆ

ಖಳನಾಯಕರು
೧. ವಜ್ರಮುನಿ 
ಮಯೂರ, ದಾರಿ ತಪ್ಪಿದ ಮಗ, ಪ್ರೇಮದ ಕಾಣಿಕೆ, ಶಂಕರ್ ಗುರು, ರವಿ ಚಂದ್ರ, ಸಂಪತ್ತಿಗೆ ಸವಾಲ್, ಬಹಾದ್ದೂರ್ ಗಂಡು, ಮುಂತಾದ ಅನೇಕ ಸಿನೆಮಾಗಳಲ್ಲಿ ರಾಜಣ್ಣ-ಮತ್ತು-ವಜರಮುನಿ ಜುಗಲ್ ಬಂಡಿ ನೋಡಿಯೇ ಆನಂದಿಸಬೇಕು

೨. ತೂಗುದೀಪ  ಶ್ರೀನಿವಾಸ್ - ರಾಜಣ್ಣ ಮತ್ತು ತೂಗುದೀಪ ಜೀವದ ಗೆಳೆಯರು ತೂಗುದೀಪ ಸಿನೆಮಾದಿಂದ ಶ್ರೀನಿವಾಸ್ ಕೊನೆ ಉಸಿರು ಎಳೆಯುವ ತನಕ ರಾಜಣ್ಣ ಮಾಡಿದ ಎಲ್ಲ ಚಿತ್ರಗಳಲ್ಲೂ ಇದ್ದರು, ರಾಜಣ್ಣ ಮಾಡಿದ ಸಹಾಯಕ್ಕೆ ಶ್ರೀನಿವಾಸ್ ಅವರ ಮನೆಗೆ ಮು. ಪ. ನಿಲಯ ಅಂತ ಇತ್ತಿದ್ದ್ದರೆ ಅಂದ್ರೆ ಮುತ್ತುರಾಜ್-ಪಾರ್ವತೀ ನಿಲಯ ಅಂತ.
ಶಂಕರ್ ಗುರು, ತಾಯಿಗೆ ತಕ್ಕ ಮಗ, ಜೀವನ ಚೈತ್ರ, ಕಾಮನಬಿಲ್ಲು ಮುಂತಾದ ಚಿತ್ರಗಳು

ಸಹನಟರು
೧. ದ್ವಾರಕೀಶ್  - ಮೆಯೇರ್ ಮುತ್ತಣ್ಣ, ಬಂಗಾರದಮನುಷ್ಯ, ಗಾಂಧಿನಗರ ಮುಂತಾದ ಚಿತ್ರಗಳು
೨. ನರಸಿಂಹರಾಜು - ಲೆಕ್ಕವಿಲ್ಲದಷ್ಟು ಚಿತ್ರಗಳು ಇಬ್ಬರ ನಟನೆ ಅಮೋಘ

ಚಾರಿತ್ರಿಕ ಸಹನಟರು
೧. ಬಾಲಣ್ಣ - ಬಂಗಾರದ ಮನುಷ್ಯ, ಶಂಕರ್ ಗುರು, ಕಾಮನ ಬಿಲ್ಲು, ಭಾಗ್ಯದ ಲಕ್ಷ್ಮಿ ಬಾರಮ್ಮ, ಕಣ್ತೆರೆದು ನೋಡು, ಅಪೂರ್ವ ಸಂಗಮ, ತ್ರಿಮೂರ್ತಿ, ಭಕ್ತ ಕುಂಬಾರ, ನಾ ನಿನ್ನ ಮರೆಯಲಾರೆ ಅನೇಕ ಚಿತ್ರಗಳು
೨. ಅಶ್ವಥ್ ಕೆ. ಎಸ ಕಸ್ತೂರಿ ನಿವಾಸ, ಎರಡು ಕನಸು, ಬಡವರ ಬಂಧು, ಕಾಮನಬಿಲ್ಲು, ಹೊಸಬೆಳಕು, ಬಂಗಾರದ ಪಂಜರ, ಗಾಂಧಿನಗರ, ಚಲಿಸುವ ಮೋಡಗಳು, ಮುಂತಾದ ಚಿತಗಳು

ಅಮ್ಮನ ಹಾಗು ಅಕ್ಕನ ಪಾತ್ರದಲ್ಲಿ 
೧. ಪಂಡರಿ ಬಾಯಿ - ಇದರ ಬಗ್ಗೆ ಮತ್ತೆ ಬೇಡ, ರಾಜಣ್ಣ ನಾಯಕಿ ಯಾಗಿ, ಅಮ್ಮನಾಗಿ, ಅಜ್ಜಿ ಯಾಗಿ, ಆವರ ನಟನೆ...ಅದು ಮಾತೃ ಹೃದಯದವರಿಗೆ ಮಾತ್ರ ಸಾಧ್ಯ. ಕನ್ನಡ ಸಿನಿಮಾ ಜಗತ್ತಿನ ಅಮ್ಮ ಈ ಮಹಾ ತಾಯಿ.
೨. ಆದವಾನಿ ಲಕ್ಷ್ಮಿ ದೇವಿ : ಬಂಗಾರದ ಮನುಷ್ಯ, ಎರಡು ಕನಸು, ಚಲಿಸುವ ಮೋಡಗಳು, ಮಲ್ಲಮನ ಪವಾಡ, ಜ್ವಾಲಾಮುಖಿ ಮುಂತಾದ ಚಿತ್ರಗಳು

ನಾಯಕಿಯರು
೧. ಅಂಬಿಕ - ಸುಮಾರು ಅಣ್ಣಾವ್ರಿಗೆ ೫೦ ವರ್ಷ ಆದಾಗ ಅಂಬಿಕ ನಾಯಕಿಯಗಿದ್ದು, ಆಗ ಆಕೆಗೆ ಸುಮಾರಿ ೨೩-೨೫ ವರ್ಷ, ಆ ವ್ಯತ್ಯಾಸ ಕಾಣುವುದಿಲ್ಲ..ಸ್ನಿಗ್ದ ಸೌಂದರ್ಯ, ಅಭಿನಯ ಕಣ್ಣಿಗೆ ಹಬ್ಬ - ಚಲಿಸುವ ಮೋಡಗಳು, ಭಕ್ತ ಪ್ರಹ್ಲಾದ,ಎರಡು ನಕ್ಷತ್ರಗಳು, ಅಪೂರ್ವ ಸಂಗಮ

೨. ಗೀತ : ಸುಂದರ ನಗು, ಸುಂದರ ಅಭಿನಯ ಸರಿ ಸಮವಾಗಿತ್ತು 
ಧೃವತಾರೆ, ಅನುರಾಗ ಅರಳಿತು,ಶೃತಿ ಸೇರಿದಾಗ, ದೇವತಾ ಮನುಷ್ಯ,ಆಕಸ್ಮಿಕ

೩. ಮಾಧವಿ : ಬೊಗಸೆ ಕಂಗಳ ಚೆಲುವೆ, ಅಣ್ಣಾವ್ರ ಎತ್ತರಕ್ಕೂ ಇರುತ್ತಿದ್ದ ಅಭಿನಯ ಒಳ್ಳೆಯ ಜೋಡಿ agittu 
ಹಾಲು ಜೇನು,ಭಾಗ್ಯದ ಲಕ್ಷ್ಮಿ ಬಾರಮ್ಮ,ಅನುರಾಗ ಅರಳಿತು,ಶೃತಿ ಸೇರಿದಾಗ,ಜೀವನ ಚೈತ್ರ,ಆಕಸ್ಮಿಕ,ಒಡ ಹುಟ್ಟಿದವರು

೪. ಸರಿತಾ: ಭಾವನೆಗಳು ತುಂಬಿರುವ ಕಣ್ಣಗಳು, ಸೊಗಸಾದ ಅಭಿನಯ, ಭಾವಬಿನಯದಲ್ಲಿ ಅಣ್ಣವರಿಗೆ ಸೆಡ್ಡು ಹೊಡೆದು ನಿಲ್ಲುತ್ತಿದ ರೀತಿ - ಕೆರಳಿದ ಸಿಂಹ,ಹೊಸ ಬೆಳಕು,ಚಲಿಸುವ ಮೋಡಗಳು,ಕಾಮನ ಬಿಲ್ಲು,ಭಕ್ತ ಪ್ರಹ್ಲಾದ

೫. ಭಾರತೀ, ಜಯಂತಿ, ಲೀಲಾವತಿ, ಆರತಿ 
ಇವರೆಲ್ಲ ರಾಜಣ್ಣನ ಅಭಿನಯಕ್ಕೆ ಸರಿ ಸಾಟಿಯಾಗಿ ನಿಲ್ಲುತ್ತಿದ ಕಲಾ ಕುಸುಮಗಳು  
ಹಾಡುಗಳು, ಸಂಭಾಷಣೆ : ಚಿ. ಉದಯಶಂಕರ್, ಹುಣುಸೂರು ಕೃಷ್ಣಮೂರ್ತಿ

ಸಂಗೀತ : 
ರಾಜನ-ನಾಗೇಂದ್ರ - ಸುಮುಧುರ ಹಾಡುಗಳು - ಗಂಧದ ಗುಡಿ, ನಾ ನಿನ್ನ ಮರೆಯಲಾರೆ, ನಾನೊಬ್ಬ ಕಳ್ಳ, ಶ್ರೀನಿವಾಸ ಕಲ್ಯಾಣ, ಗಿರಿ ಕನ್ಯೆ, ಎರಡು ಕನಸು ಅನೇಕ ಚಿತ್ರಗಳು

ಉಪೇಂದ್ರ ಕುಮಾರ - ಸಿನಿಮಾಕ್ಕೆ ಜೀವ ತುಂಬುತ್ತಿದ್ದ ಸಂಗೀತ, ಪ್ರಯೋಗವಿಲ್ಲದೆ, ಇತಿ ಮಿತಿಯಲ್ಲೇ ಹಾಡುಗಳನ್ನು ನೀಡಿದ ಮಹನೀಯ - ಶಂಕರ್ ಗುರು, ಅನುರಾಗ ಅರಳಿತು, ಕಟಾರಿವೀರ,. ಮುಂತಾದ ಚಿತ್ರಗಳು

ಜಿ. ಕೆ. ವೆಂಕಟೇಶ್ - ಇಡಿ ಚಿತ್ರ ಜಗತ್ತು ಅಣ್ಣವರು ಅಂತ ಇದ್ರೆ ಈ ಮಹಾತ್ಮಾ ಒಬ್ಬರೇ, ತಮ್ಮಯ್ಯ ಅಂತ ಕರಿತ ಇದ್ದದ್ದು.  ಅವರ ಗಾನ ಸುಧೆಯನ್ನು ಹೊರಗೆ ತಂದವರು.  ಓಹಿಲೇಶ್ವರ, ಮಹಿಷಾಸುರ ಮರ್ಧಿನಿ ಯಲ್ಲಿ ಹಾಡಿಸಿದ ಇವರು ಸಂಪತ್ತಿಗೆ ಸವಾಲ್ ಚಿತ್ರದಿಂದ ಮಹಾನ್ ಗಾಯನ ಪ್ರತಿಬೆಯನ್ನು ಹೊರಗೆ ಹಾಕಿದರು.  ಸನಾಧಿ ಅಪ್ಪಣ್ಣನ ಸಂಗೀತದ ಬಗ್ಗೆ ಮಾತಾಡಲು ತಿಂಗಳು ಸಾಲದು.


ಎಲ್ಲದಕ್ಕೂ ಬೆಂಬಲವಾಗಿದ್ದ ಹಾಗೂ ಅವರ ಸಿನಿಮಾ ಇಮೇಜ್ ಅನ್ನು ಕಾಪಾಡಿದ ಇಬ್ಬರು ಮಹನೀಯರಿಗೆ ಇದು ಒಂದು ನಮನ...ಅವರುಗಳು ಯಾರು ಎಂದರೆ

ವರದರಾಜ್ - ರಾಜಣ್ಣ ಅವರ ತಮ್ಮ, ಪ್ರತಿ ಪಾತ್ರದ ಆಯ್ಕೆ, ಸಂಭಾಷಣೆಯಲ್ಲಿ, ಕಥೆಗಳ ಆಯ್ಕೆಯಲ್ಲಿ ಇವರ ಮಾತಿಲ್ಲದೆ ರಾಜಣ್ಣ ಏನು ಮಾಡುತ್ತಿರಲಿಲ್ಲ





ಚಿ. ಉದಯಶಂಕರ್ : ರಾಜಣ್ಣ ಇಮೇಜ್ ತಕ್ಕ ಹಾಗೆ ಸಂಭಾಷಣೆ, ಹಾಡುಗಳು, ಕಥೆಗಳು ಹೆಣೆಯುತ್ತಿದ ರಾಜಣ್ಣನ ಆಸ್ಥಾನದ ಕವಿ, ಕಥೆಗಾರ


ಎಷ್ಟು ಬರೆದರೂ ಸಮಾಧಾನ  ಆಗೋಲ್ಲ    - ಕಂಗಳು ತುಂಬಿ ಬಂತು, ಇಲ್ಲಿಗೆ ನಿಲ್ಲಿಸ್ತಾ ಇದ್ದೀನಿ...