Wednesday, April 24, 2013

ರಾಜ್ ಆಸ್ತಾನದಲ್ಲಿ ಅವರು ಅನಭಿಷಿಕ್ತ ಮಹಾರಾಜರೇ! (2013)

ರಾಜ್ ಕಲಾವಿದರಾಗಿ ಯಾಕೆ ಎಲ್ಲರಿಗೂ ಇಷ್ಟವಾಗುತ್ತಾರೆ. ಉತ್ತರ ಹುಡುಕುತ್ತ ಹೊರಟರೆ ಪ್ರಾಯಶಃ ಈ ಭೂಮಿ.... ಮಂಗಳ ಗ್ರಹವಾಗಿಬಿಡುತ್ತೆ ಅನ್ನಿಸುತ್ತೆ. ಯಾಕೆಂದರೆ ಈ ಪ್ರಶ್ನೆಯನ್ನು ಕೇಳುತ್ತಾ ಹೊರಟರೆ ಎಲ್ಲರೂ ಮುಖ ಕೆಂಪಗೆ ಮಾಡಿಕೊಳ್ತಾರೆ. ಇಡಿ ಭೂಮಂಡಲವೇ ಕೆಂಪಾಗಿ.. ಮಂಗಳ ಗ್ರಹದಂತೆ ಆಗುತ್ತದೆ. 

ಇಂದು ಅವರ ಜನುಮ ದಿನ.. ವರ್ಷವೆಲ್ಲಾ ನೆನಪಲ್ಲಿ ಇದ್ದರೂ ಇಂದು ಇನ್ನೊಮ್ಮೆ ಅವರನ್ನು ನೆನೆಸಿಕೊಂಡು ಮೈ ಮನ ಪುಳಕಗೊಳ್ಳುವ ತವಕ ಎಲ್ಲರಲ್ಲೂ ಇರುತ್ತದೆ. ಮಗುವನ್ನು ಎಷ್ಟೇ ಬಾರಿ ಮುದ್ದಿಸಿದರೂ....  ಇನ್ನೊಮ್ಮೆ ಮುದ್ದಿಸೋಣ ಅನ್ನುವ ಬಯಕೆಯಂತೆ ಅಲ್ಲವೇ!

ರಾಜ್ ಆಸ್ತಾನದಲ್ಲಿ ಅವರು ಅನಭಿಷಿಕ್ತ ಮಹಾರಾಜರೇ. 



ಅವರು ಮಹಾರಾಜರಾಗಿ ದರ್ಬಾರ್ ನಲ್ಲಿ ಕೂತಿದ್ದಾಗ ಅವರ ಆಸ್ಥಾನದಲ್ಲಿ ಯಾರು ಯಾರು ಇರಬಹುದು. ಹೀಗೊಂದು ಕಲ್ಪನೆ ನನ್ನ ಕಾಡುತಿತ್ತು. ಆ ಒಂದು ಕಲ್ಪನೆಗೆ ರೆಕ್ಕೆ ಪುಕ್ಕ ಸಿಕ್ಕ ಈ ಕ್ಷಣದಲ್ಲಿ ಮೂಡಿಬಂದ ಲೇಖನ ಇದು. 

ಮಹಾರಾಜ : ಶ್ರೀ ಶ್ರೀ ಮುತ್ತು ರಾಜಕುಮಾರ್ 

ರಾಜ ಮಾತೆ : ಪಂಡರಿಬಾಯಿ 

ರಾಜ ಗುರು : ಕೆ ಎಸ್ ಅಶ್ವತ್ 

ಸಲಹೆ : ಆದ್ವಾನಿ ಲಕ್ಷ್ಮೀದೇವಿ 

ಮಹಾಮಂತ್ರಿಗಳು  : ವರದರಾಜ್ (ತಮ್ಮ) ಹಾಗೂ ಚಿ. ಉದಯಶಂಕರ್ 


ದರ್ಬಾರಿನ ನಿರ್ದೇಶಕರು : ಎಚ್ ಎಲ್ ಎನ್ ಸಿಂಹ 
                                    ಬಿ ಆರ್ ಪಂತುಲು 
                                    ದೊರೈ ಭಗವಾನ್ 
                                    ವಿಜಯ್ 
                                    ಹುಣಸೂರ್ ಕೃಷ್ಣಮೂರ್ತಿ 
                                    ಟಿ ವಿ ಸಿಂಗ್ ಠಾಕೂರ್ 
                                    ಕು ರಾ ಸೀತಾರಾಮ ಶಾಸ್ತ್ರಿ ಇನ್ನೂ ಅನೇಕ 
                                    ಮಹನೀಯರು 

ದೃಶ್ಯಸೆರೆ ಹಿಡಿದವರು  : ಆರ್ ಮಧುಸೂದನ್ 
                                 ಶ್ರೀಕಾಂತ್ 
                                 ಚಿಟ್ಟಿಬಾಬು 
                                 ಡಿ ವಿ ರಾಜಾರಾಮ್ 
                                 ಗೌರಿಶಂಕರ್ ಇನ್ನೂ ಮುಂತಾದವರು     

ಗರಡಿ ಗುರು : ಎಂಪಿ ಶಂಕರ್ 

ಸಂಗೀತ ವಿದ್ವಾಂಸರು : ಉಸ್ತಾದ್ ಬಿಸ್ಮಿಲ್ಲಾ ಖಾನ್ 
                                ಜಿ ಕೆ ವೆಂಕಟೇಶ್ 
                                ರಾಜನ್ ನಾಗೇಂದ್ರ 
                                ಎಂ ರಂಗರಾವ್ 
                                ಉಪೇಂದ್ರ ಕುಮಾರ್ 
                                ಟಿ ಜಿ ಲಿಂಗಪ್ಪ 
                                ವಿಜಯಭಾಸ್ಕರ್ 
                                ಮತ್ತಿತರರು 

ಸೇನಾಪತಿಗಳು : ನಟ ಭೈರವ ವಜ್ರಮುನಿ ಹಾಗೂ ತೂಗುದೀಪ ಶ್ರೀನಿವಾಸ್   

ರಣಕಲಿಗಳು : ಶಕ್ತಿ ಪ್ರಸಾದ್, ನಾಗಪ್ಪ, ದಿನೇಶ್

ವಿಕಟಕವಿಗಳು : ಹಾಸ್ಯ ಬ್ರಹ್ಮ ಬಾಲಣ್ಣ 
                       ಹಾಸ್ಯ ಚಕ್ರವರ್ತಿ ನರಸಿಂಹರಾಜು 
                       ಕುಳ್ಳ ಏಜೆಂಟ್ ದ್ವಾರಕೀಶ್ 
                       ಹಾಸ್ಯ ರಸತಜ್ಞ ಶಿವರಾಂ  

ಪೋಷಕ ವೃಂದದಲ್ಲಿ : ಹೊನ್ನವಳ್ಳಿ ಕೃಷ್ಣ, ಶಾಂತಮ್ಮ, ಪಾಪಮ್ಮ, ಸಂಪತ್, ಶನಿ ಮಹಾದೇವಪ್ಪ, ಅನಂತರಾಮ್ ಮಚ್ಚೇರಿ, ಗೋ ರಾ ಭೀಮರಾವ್, ಎಂ ಎಸ್ ಉಮೇಶ್, ಎಂ ಎಸ್ ಸತ್ಯ, ರಾಮಚಂದ್ರ ಶಾಸ್ತ್ರಿ, ಗಣಪತಿ ಭಟ್, ಅಶ್ವತ್ ನಾರಾಯಣ, ಜೋಕರ್ ಶ್ಯಾಮ್, ಕುಳ್ಳಿ ಜಯ, ರಮಾ ದೇವಿ, ಎಂ ಎನ್ ಲಕ್ಷ್ಮೀದೇವಿ  ಹಾಗೂ ಮತ್ತಿತರರು 

ನೃತ್ಯ ಪಟುಗಳು : ಉಡುಪಿ ಜಯರಾಂ, ದೇವಿ

ಸಾಹಸ: ಶಿವಯ್ಯ, ವಿಜಯ್, ಜೂಡೋ ರತ್ನಂ  
                                                             
ಈ ಪಟ್ಟಿಯಲ್ಲಿ ಇನ್ನೂ ಅನೇಕ ವಿಖ್ಯಾತ ಕಲಾವಿದರ, ಸಭಿಕರ, ಕಲಾ ಪೋಷಕರ ಹೆಸರುಗಳು ಪ್ರಕಟವಾಗಿಲ್ಲ. ಅವರನೆಲ್ಲಾ ಸೇರಿಸಿ ಒಂದು ದೊಡ್ಡ ಒಡ್ಡೋಲಗ ಮಾಡುವ ಅಭಿಲಾಷೆ ಇದೆ. ಎಲ್ಲರ ಮುಖ ಚಿತ್ರಗಳು ಜಗತ್ತಿಗೆ ಪರಿಚಯವಾಗಬೇಕೆಂಬ ಹಂಬಲ ಇದೆ.... ನೋಡೋಣ..ಪ್ರಯತ್ನ ಪಡೋಣ 

ಅಣ್ಣಾವ್ರ ಈ ಹುಟ್ಟು ಹಬ್ಬಕ್ಕೆ ಒಂದು ಕಲಾವಿದರ ಪಟ್ಟಿ.. ಹಾಗೂ ತಾವು ಮರೆಯಲ್ಲಿ ನಿಂತು ಕಲಾ ರತ್ನವನ್ನು ಬೆಳಕಿಗೆ ತಂದು ಹೊಳಪು ಕೊಟ್ಟ ಎಲ್ಲ ಕಲಾ ಮಣಿಗಳಿಗೆ ಈ ಲೇಖನ ಅರ್ಪಿತ!

Friday, April 12, 2013

ಮೈ ನೇಮ್ ಇಸ್ ರಾಜ್ ರಾಜ್ ರಾಜ್! - ಶಂಕರ್ ರಾಜ್ ಗುರು (2013)

ನಿನ್ನೆ ಯುಗಾದಿ ಹಬ್ಬದ ದಿನ ಏನೋ ಆಟವಾಡುತಿದ್ದ  ಮಗಳು ಎರಡು ಕಣ್ಣರಳಿಸಿ "ಅಪ್ಪಾ!" ಎಂದು ಕಿರುಚಿ ಕಣ್ಣು ಹೊಡೆದು ನಕ್ಕಳು.  ಮನಮಡದಿ "ಅದೆಷ್ಟು ಸಲ ಬಂದ್ರು  ಬಾಯಿ ಬಿಟ್ಕೊಂಡು ನೋಡ್ತೀರಾ" ಅಂದ್ಲು. ನನ್ನ ಅಭಿರುಚಿ ಗೊತ್ತಿದ್ದ ಮಗಳು  ಟಿ.ವಿ ಯ ಸೌಂಡ್ ಸ್ವಲ್ಪ ಹೆಚ್ಚಾಗಿಯೇ ಕೊಟ್ಟಳು.

ಕಲಶಂ ಪ್ರತಿಷ್ಟಾಪನ ಮಹೂರ್ತ ಆರಂಭಂ . ಎನ್ನುವಂತೆ ಲೆಕ್ಕವಿಲ್ಲದಷ್ಟು ಭಾರಿ ನೋಡಿದರು ಮತ್ತೊಮ್ಮೆ ನೋಡಲು ಸಿದ್ಧವಾಗಿ ಕೂತೆವು. ನಿನ್ನೆ ಯುಗಾದಿ ಹಬ್ಬದ ದಿನ ಉದಯ ಮೂವೀಸ್ ನಲ್ಲಿ ಅಣ್ಣಾವ್ರ ಶಂಕರ್ ಗುರು ಸಿನಿಮಾ ಬಿತ್ತರಗೊಂಡಿತು.

ನನ್ನ ಮಗಳಿಗೂ ರಾಜ್ ಚಿತ್ರ ಗಳು ಎಂದರೆ ಖುಷಿಯಾಗುತ್ತಿದೆ ಎಂದರೆ ಈ ಕಲಾವಿದ ಎಲ್ಲಾ ತಲೆಮಾರುಗಳಿಗೂ ಸಲ್ಲುವ ಕಲಾವಿದ ಎನ್ನುವುದಕ್ಕೆ ಇದು ಉದಾಹರಣೆ..

ಈ ಲೇಖನವನ್ನು ಇಬ್ಬರೂ "ರಾಜ"ರಿಗೆ ಸಮರ್ಪಿಸುತ್ತಿದ್ದೇನೆ. ಒಂದು ರಾಜಣ್ಣ (ಅಣ್ಣಾವ್ರು)   ..ಇನ್ನೊಂದು ನನ್ನ ಸೋದರ ಮಾವ ರಾಜ (ಇವನ ಹೆಸರೂ - ಶ್ರೀಕಾಂತ್)  (ಇವ ನಮ್ಮನ್ನು ಅಗಲಿ ೫ ವರ್ಷಗಳು ಕಳೆದಿವೆ).

ಶ್ರೀಕಾಂತ್ & ಶ್ರೀಕಾಂತ್!
ನನ್ನ ಸೋದರಮಾವ ರಾಜನ ಸಿನಿಮಾ ಹುಚ್ಚು ಅದರ ಬಗ್ಗೆ ಇನ್ನೊಂದು ಸುಧೀರ್ಘ ಮಾಲಿಕೆಯೇ ಬರೆಯಬೇಕು. ಇವನಿಗೆ "ಶಂಕರ್ ಗುರು" ಸಿನಿಮಾ ಎಷ್ಟು ಹುಚ್ಚು ಹಿಡಿಸಿತ್ತು ಎಂದರೆ.. ಕಳೆದ ಹದಿನೈದು ವರ್ಷಗಳಲ್ಲಿ ಶಂಕರ್ ಗುರು ಚಿತ್ರ ಬೆಂಗಳೂರಿನಲ್ಲಿ ಬಿಡುಗಡೆ ಕಂಡ ಕಡೆಯಲ್ಲೆಲ್ಲಾ ನೋಡಿ ಬಂದಿದ್ದೇವೆ. ಒಂದು ಫೋನ್ "ಶ್ರೀಕಾಂತು.....  ಶಂಕರ್ ಗುರು... ಬೇಗ ಬಂದು ಬಿಡು" ಇಷ್ಟೇ ಅವನು ಹೇಳ್ತಾ ಇದ್ದದ್ದು. ನಾನು ಬಿಟ್ಟ ಕೆಲಸ ಬಿಟ್ಟು ಓಡಿ ಬಿಡುತಿದ್ದೆ.

ತ್ರಿಪಾತ್ರದಲ್ಲಿ ಅಮೋಘ ಅಭಿನಯ! 
ಇನ್ನು ಶಂಕರ್ ಗುರು ಸಿನಿಮಾ... ಪಕ್ಕ ವ್ಯಾಪಾರಿ ಚಿತ್ರವಾದರೂ, ಒಂದು ಜೀವನದಲ್ಲಿ ಇರಬೇಕಾದ ಶಿಸ್ತು, ನೆಡತೆ,       ಮಾತಾ-ಪಿತೃಗಳ ಬಗ್ಗೆ ಗೌರವ, ಪ್ರೀತಿ ಪ್ರೇಮ, ಹಿರಿಯರ ಮೇಲಿನ ಗೌರವ, ಮನಕಲಕುವ ಸಂಭಾಷಣೆಗಳು, ಸಾಹಸ ದೃಶ್ಯಗಳು, ಸುಮಧುರ ಹಾಡುಗಳು ಈ ಚಿತ್ರದಲ್ಲಿದೆ.
  • "ಈಗ ನನ್ನ ಚಾನ್ಸ್" ಎನ್ನುತ್ತಾ ಕುಂಕುಮದ ಭರಣಿ ತೆಗೆದು ಮಡದಿಗೆ ಸಿಂಧೂರ ಇಡುವ ಪರಿ
  • ಕೆಲವೊಮ್ಮೆ ದೇಹಕ್ಕೆ ಈ ರೀತಿಯ ದಂಡನೆ ಅನಿವಾರ್ಯ ಎನ್ನುವ ಮಾತು.. 
  • ರೆಸ್ಟ್ ಬೇಕಾಗಿರೋದು ದೇಹಕ್ಕಲ್ಲ ಮನಸ್ಸಿಗೆ ... ಮನಸ್ಸಿಗೆ.. ಎನ್ನುವ ಸಂಭಾಷಣೆ  
  • ಫೋನ್ ನಲ್ಲಿ "ಜಿಂಕೆಯ ಕಣ್ಣೆ  ಚೆನ್ನಾ ಎನ್ನುತ್ತಾ ಹಾಗೆಯೇ ಅಳುತ್ತಾ ಕುಸಿದು ಕೂರುವ ದೃಶ್ಯ... "ಅಬ್ಬಬ್ಬಾ ಇಷ್ಟು ವರ್ಷಗಳಾದ ಇಂತಹ ಆನಂದ" ಎನ್ನುವಾಗ ಅವರ ಅಭಿನಯ!  
  • "ಅಡ್ರೆಸ್ ಕೇಳ್ತಾ ಇದ್ರೂ.. ನಾನು ಕೊಟ್ಟಿದ್ದೇನೆ.. ನೀವು ಮಿಕ್ಕಿದ್ದು ಕೊಡಿ"
  • "ಓಹ್ ಶಂಕರ್.. ನಾನು ಗೈಡ್ ಮಾಡ್ತೀನಿ ಅಂದೇ... ಕೇಳಲಿಲ್ಲ.. ಯಾರೋ ಮಿಸ್-ಗೈಡ್ ಮಾಡಿದ್ದಾರೆ"
  • "ಮೊದಲು ನಾನು ಹೇಳುವ ಮಾತು ಕೇಳೋ ಕ್ರಿಮಿನಲ್" ಎನ್ನುವ ಗುರು 
  • "ಕಾಶ್ಮೀರದ ಹೆಣ್ಣಿನ ಅಹಂಕಾರ ಇಳಿಸಿ.. ಕನ್ನಡ ನಾಡಿಗೆ ಕರೆತರದಿದ್ದರೆ ನನ್ನ ಹೆಸರು ಗುರು ಅಲ್ಲಾ" ಎಂದು ಎದೆ ತಟ್ಟಿ  ಕೊಳ್ಳುವ ಶೈಲಿ 
  • "ತಾತ.. ಹೀಗೆ ನನ್ನ ಇನ್ನೊಮ್ಮೆ ಹಿಡಿದುಕೊಂಡರೆ ನಾನು ಗೋತಾ"
  • ಸುಮಧುರ ಹಾಡುಗಳು, ಸುಂದರ ಪ್ರದೇಶಗಳಲ್ಲಿ ಚಿತ್ರಿಕರನವಾದ ಸಾಹಸ ದೃಶ್ಯಗಳು, ಮೂರು ಪಾತ್ರಗಳನ್ನೂ ಮಾಡಿದ್ದರೂ ಒಂದು ಪಾತ್ರದ ಛಾಯೆ ಇನ್ನೊಂದು ಪಾತ್ರದ ಮೇಲೆ ಮೂಡದಿರುವುದು.. ಇವೆಲ್ಲ ಕೇವಲ ಅಣ್ಣಾವ್ರಿಗೆ ಮಾತ್ರ ಸಾಧ್ಯ ಎನ್ನಿಸುತ್ತದೆ. ಧ್ವನಿಯಲ್ಲಿ ಏರಿಳಿತ, ಪಾತ್ರಕ್ಕೆ ತಕ್ಕ ಆಂಗಿಕ ಅಭಿನಯ. 
  • ತಾಂತ್ರಿಕವಾಗಿಯೂ ಶ್ರೀಮಂತವಾಗಿದ್ದ ಚಿತ್ರದ ಹೈ ಲೈಟ್ ಎಂದರೆ.. ಅಣ್ಣಾವ್ರ ಪಾತ್ರಗಳು ಒಬ್ಬರನ್ನು ಒಬ್ಬರು ಸಂಧಿಸಿದಾಗ ಭ್ರಮೆಯಲ್ಲ ನಿಜ ಅನ್ನುವಂತೆ ಮೂಡಿಬರುವ ಪಾತ್ರಧಾರಿಗಳ ಜೋಡಣೆ, ಮತ್ತು ಅಭಿನಯ. (ಮಧು ಅವರ ಛಾಯ ಚಿತ್ರಣ)
  • ಶಂಕರ್ ಪಾತ್ರ ಕೋಮಲವಾದ ಬಳ್ಳಿಯ ತರಹ ಇದ್ದರೇ, ಗುರುವಿನ ಪಾತ್ರ ಪಕ್ಕ ತರಲೆ, ನಗು ಬುಗ್ಗೆ ಉಕ್ಕಿಸುವ ಪಾತ್ರ, ಇನ್ನು ಇದಕ್ಕೆಲ್ಲ ಕಳಶಪ್ರಾಯ ಎನ್ನುವಂತೆ ಗಂಭೀರ ರಾಜ್ ಶೇಖರ್ ಪಾತ್ರ
  • ಈ ಚಿತ್ರದ ಬಗ್ಗೆ ಒಂದು ಬೇರೆಯೇ ಲೇಖನ ಬರೆಯುವ ಆಸೆ ಇದೆ.. ಕಾರಣ ನಾನು ತುಂಬಾ ಇಷ್ಟ ಪಟ್ಟು ಪದೇ ಪದೇ  ನೋಡಿದ ಹಲವಾರು ಚಿತ್ರಗಳಲ್ಲಿ ಇದೂ ಒಂದು. 
ಒಂದು ಕ್ಲಾಸಿಕ್ ದೃಶ್ಯ!
ಇಷ್ಟೆಲ್ಲಾ  ಮಾತುಗಳು ಏಕೆ ಅಂದ್ರೆ ಇನ್ನೂರು ಚಿಲ್ಲರೆ ಚಿತ್ರಗಳಲ್ಲಿ ಅಭಿನಯಿಸಿದರೂ, ಹಿರಿಯ ಕಿರಿಯ ಕಲಾವಿದರ ಜೊತೆ ಅಭಿನಯ, ಪಾತ್ರಕ್ಕೆ ಅಗತ್ಯವಿದ್ದಾಗ ಹಿರಿಯ ಕಿರಿಯಕಲಾವಿದ ಎಂದು ನೋಡದೆ.. ಕಾಲು ಮುಟ್ಟಿ  ನಮಸ್ಕರಿಸುವುದು, ಆಲಂಗಿಸಿಕೊಳ್ಳುವುದು, ಇದೆಲ್ಲ ತಲೆಯನ್ನು  ಭುಜದ ಮೇಲೆ ಸದಾ ಹೊತ್ತಿರೋರಿಗೆ ಮಾತ್ರ ಸಾಧ್ಯ. ನಿರ್ದೇಶಕರ, ನಿರ್ಮಾಪಕರ ನಟರಾಗಿದ್ದ ಇವರು ಒಂದು ರತ್ನವೇ...   ಅಂತಹ ಒಂದು ರತ್ನ ನಮ್ಮ ಅಣ್ಣಾವ್ರು. ಕಲಾವಿದ ರಾಜ್ ಎಂದಿಗೂ ಅಮರ! 

ಅವರ ಎಲ್ಲ ಚಿತ್ರಗಳನ್ನು ನೋಡಿ, ಪ್ರತಿಯೊಂದು ಚಿತ್ರದ ಬಗ್ಗೆ ನನಗನಿಸಿದ ಮಾತುಗಳನ್ನು ಬರೆಯುವ ಆಸೆ ಇದೆ. ಇದು  ಅಣ್ಣಾವ್ರಿಗೆ ತೋರುವ ಗೌರವ ಅಷ್ಟೇ ಅಲ್ಲಾ ... ಸಿನಿಮಾ ಹುಚ್ಚನ್ನು ನನಗೂ ದಾಟಿಸಿ, ಸಿನೆಮಾಗಳಲ್ಲಿ ಬರುವ ಒಳ್ಳೆಯ ವಿಚಾರಗಳನ್ನು ಕಲಿಸಿ, ತಿಳಿಸಿ, ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಾಯ ಮಾಡಿದ ನನ್ನ ಪ್ರೀತಿಯ ಸೋದರಮಾವ ರಾಜನಿಗೂ ಇದು ಒಂದು ನುಡಿ ನಮನವಾಗುತ್ತೆ ಎನ್ನುವ ಒಂದು ಹಂಬಲ .  

ನನ್ನ ಹೃದಯವನ್ನು ಮುಟ್ಟಿದ ಇಬ್ಬರು ಅನಭಿಷಿಕ್ತ "ರಾಜ"ರಿಗೆ ನನ್ನ ಅಕ್ಷರಗಳಲ್ಲಿ ನಮನ ಸಲ್ಲಿಸುವ ಒಂದು ಸಣ್ಣ ಪ್ರಯತ್ನ! 

ಅಣ್ಣಾವ್ರ ಪುಣ್ಯ ತಿಥಿಯ ಈ ಸಮಯದಲ್ಲಿ.. ಸದಾ ನೆನಪಲ್ಲಿ ಇರುವ ಕಲಾವಿದನನ್ನು ಒಮ್ಮೆ ಕಣ್ಣ ಮುಂದೆ ತಂದು                         ನಿಲ್ಲಿಸಿಕೊಳ್ಳುವ ಒಂದು ಪುಟ್ಟ ಪ್ರಯತ್ನ!

Monday, March 25, 2013

ಹಾಲಿನ ಸಮುದ್ರದಲ್ಲಿ ಹಾರಾಡಿದ "ಮೈನಾ" (2010)

ಬಹಳ ತಿಂಗಳುಗಳ ನಂತರ ಒಂದು ಸಿನೆಮಾಕ್ಕೆ ಹೋಗಬೇಕು ಅನ್ನಿಸಿತು. ಮಗಳಿಗೆ ಇವತ್ತು ಪರೀಕ್ಷೆ ಮುಗಿದಿತ್ತು. ಎಲ್ಲಿಗಾದರೂ ಕರೆದುಕೊಂಡು ಹೋಗೋಣ ಅನ್ನಿಸಿ ಸರಿ ದೂದ್ ಸಾಗರ್ ತೋರಿಸುವ ಎಂದು "ಮೈನಾ" ಚಿತ್ರಕ್ಕೆ "ಶ್ರೀವಿತಲ್" ಹೋದೆವು.

ಚಿತ್ರ ಕೃಪೆ - ಅಂತರ್ಜಾಲ 
ಇನ್ನು ಚಿತ್ರದ ಬಗ್ಗೆ ಆಗಲೇ ನೂರಾರು ವಿಮರ್ಶೆಗಳು, ಹೊಗಳಿಕೆಗಳು, ಗಲ್ಲಾಪೆಟ್ಟಿಗೆಯಲ್ಲೂ ಸದ್ದು ಮಾಡಿದ ಚಿತ್ರ ಎಂದು ಬಣ್ಣಿಸಿ ಬರೆದ ಲೇಖನಗಳು ಮೈನಾ ಹಕ್ಕಿಯಂತೆಯೇ ಹಾರಾಡುತ್ತಿದೆ. ನನಗೆ ಅನ್ನಿಸಿದ ಒಂದೆರಡು ಮಾತುಗಳನ್ನ ಬರೆಯೋಣ ಎನ್ನಿಸಿತು. ಹಾಗಾಗಿ ಈ ಬ್ಲಾಗ್ ಲೇಖನ!
ಚಿತ್ರ ಕೃಪೆ - ಅಂತರ್ಜಾಲ 
ಮೈ ನವಿರೇಳಿಸುವಂತಹ ಆರಂಭಿಕ ಸಾಹಸ ದೃಶ್ಯಗಳಿಂದ ಶುರುವಾಗುತ್ತದೆ ಚಿತ್ರ. ನಂತರ ನಿಧಾನಗತಿಯಲ್ಲಿ  ಕಾವೇರಿಸುತ್ತಾ ಸಾಗುತ್ತದೆ. ಈ ರಿಯಾಲಿಟಿ ಶೋಗಳು ಮನುಷ್ಯರನ್ನು ಮಾನವೀಯ ಕಂಪನಗಳಿಂದ ಹೇಗೆ ದೂರ ಒಯ್ಯಬಲ್ಲದು ಎಂದು ಸೂಕ್ಷ್ಮವಾಗಿ ಪರಿಚಯಿಸುತ್ತಾ ಹೋಗುತ್ತದೆ.

ನಂತರ ಶುರುವಾಗುತ್ತದೆ ರಿಯಲ್ ಸಿನಿಮಾ. ದೃಶ್ಯ ಕಾವ್ಯವಾಗಿ ಹರಿದಾಡುತ್ತದೆ. ಪ್ರತಿಯೊಂದು ಸನ್ನಿವೇಶವನ್ನು ಕುಸುರಿಗಾರನ ಕೈಚಳಕದಲ್ಲಿ ಅರಳಿದ ಕಲೆಯಂತೆ ಸಾಗುತ್ತದೆ. ಪಾತ್ರಧಾರಿಗಳು ಕೂಡ ಆ ಪಾತ್ರಗಳಿಗೆ ಎಷ್ಟು ಬೇಕೋ ಅಷ್ಟು ಅಭಿನಯವನ್ನು ಮುದ್ದಾಗಿ ಅಭಿನಯಿಸಿದ್ದಾರೆ.

ಮನಸೆಳೆಯುವ ಅಂಶಗಳು :
  •  ಚೇತನ್ ಅವರ ಆಕರ್ಷಕ ಮೈಕಟ್ಟು, ಓಡುವ ಶೈಲಿ, ಸುಂದರ ನಗು ಚೆಲ್ಲುವ ಕಣ್ಣುಗಳು, ಜಲಪಾತದಂತೆಯೇ ಹರಿದಾಡುವ ತಲೆಗೂದಲು
  • ಬೇಸರವೆನಿಸುವ ತಬಲಾ ನಾಣಿಯ ಅದೇ ಕುಡುಕನ ಶೈಲಿಯ ಮಾತುಗಳು, ಆದರೆ ಬರು ಬರುತ್ತಾ ನಾಯಕನಿಗೆ ಅವನ ಪ್ರೇಮಕ್ಕೆ  ಸಹಾಯ ಮಾಡುವ ಹೃದಯ ಸಿರಿವಂತಿಕೆ (ಬಹುಶಃ ಸಿನಿಮಾದಲ್ಲಿ ಮಾತ್ರ ಸಿಗುತ್ತೆ)
  •  ಸಾಧು ಕೋಕಿಲ ಅವರ ಹಾಸ್ಯ ನಟನೆಗಿಂತ ಹಿನ್ನೆಲೆ ಸಂಗೀತದಲ್ಲಿ ಗಮನ ಸೆಳೆಯುತ್ತಾರೆ (ಕನ್ನಡ ಚಿತ್ರರಂಗದಲ್ಲಿ ಅವರಂತೆ ಪರಿಣಾಮಕಾರಿಯಾಗಿ ಹಿನ್ನೆಲೆ ಸಂಗೀತ ಕೊಡುವರು ಇನ್ನೊಬ್ಬರಿಲ್ಲಾ ಎನ್ನಿಸುತ್ತದೆ)
  • ಪೋಲಿಸ್ ಸಮವಸ್ತ್ರದಲ್ಲಿ (ಮೊದಲಬಾರಿಗೆ) ಮೈ ತುಂಬಾ ಬಟ್ಟೆ ಹಾಕಿಕೊಂಡು ಮುದ್ದಾಗಿ ಕಾಣುವ  ಸುಮನ್ ರಂಗನಾಥ್
  • ಸಾಹಸ ದೃಶ್ಯಗಳು ಗಮನ ಸೆಳೆಯುತ್ತವೆ. 
  • ಚಿತದ ೯೮ % ಭಾಗ ಅತ್ಯುತ್ತಮ ನಿರ್ದೇಶನ ಮಾಡಿರುವ ನಾಗ್ ಶೇಖರ್! (ಇನ್ನುಳಿದ ೨% ಮಾಹಿತಿಗೆ ಲೇಖನದ ಕೊನೆಯಲ್ಲಿ ನೋಡಿ) 

ಹುಚ್ಚೆಬ್ಬಿಸುವ ಅಂಶಗಳು:
ಚಿತ್ರ ಕೃಪೆ - ಅಂತರ್ಜಾಲ
  • ಹಿರಿಯ ತಾರೆ "ಸರಿತಾ" ನಂತರ ಕಣ್ಣುಗಳಲ್ಲೇ ಅಭಿನಯಿಸುವ ನಾಯಕಿ ನಿತ್ಯಾ ಮೆನನ್. ಅವರ ಪಾತ್ರಕ್ಕೆ ಮಾತುಗಳೇ ಬೇಡವಾಗಿತ್ತು ಅನ್ನಿಸುವಷ್ಟು ಅದ್ಭುತವಾಗಿವೆ ಕಣ್ಣಿನ ಅಭಿನಯ 
  • ಕಲರಫುಲ್ ಎನ್ನುವಾಗ ಕಣ್ಣಲ್ಲಿ ಕಾಣುವ ಕಾಂತಿ 
  • ಚಿಕ್ಕ ವಯಸ್ಸಿನಲ್ಲಿ ತೆವಳಲು ಮಜಾ ಎನ್ನಿಸುತ್ತಿತ್ತು.. ತೆವಳುವುದೇ ಜೀವನದ ಅಂತಿಮ ಎನ್ನುವ  ದೃಶ್ಯದಲ್ಲಿ ಕಣ್ಣುಗಳು ಕಾರುವ ಭಾವ 
  • ನನಗೆ ಗಂಡ ಬೇಕು ಎನ್ನುವಾಗ ಕಣ್ಣಲ್ಲಿ ಕಾಣುವ ದೂದ್ ಸಾಗರ!
  • ನಿತ್ಯಾ ಮೆನನ್ ಅವರದು "ಮೈನಾ"ದಲ್ಲಿ "ಮೈ"ನಾ  ತೋರಿಸದೆ ಮನಸನ್ನು ಬಿಚ್ಚಿಟ್ಟ ಒಂದು ಸುಂದರ ಪಾತ್ರ 
ಕುರ್ಚಿಯ ಮೇಲೆ ನಿಲ್ಲಬೇಕು ಎನ್ನಿಸುವ ಅಂಶಗಳು:


ಜಾದುಗಾರ ಸತ್ಯ ಹೆಗಡೆ (ಚಿತ್ರ ಕೃಪೆ - ಅಂತರ್ಜಾಲ )
  • ಈ ಚಿತ್ರದ ನಿಜವಾದ ನಾಯಕ ಛಾಯಾಗ್ರಾಹಕ ಸತ್ಯ ಹೆಗಡೆ. ಕ್ಯಾಮೆರಾಗಳನ್ನು ಎಲ್ಲೆಲ್ಲಿ ಇಟ್ಟಿದ್ದಾರೆ ಎನ್ನುವ ಅನುಮಾನ ಹುಟ್ಟಿಸುವಷ್ಟು ದೃಶ್ಯಗಳು ಶ್ರೀಮಂತವಾಗಿವೆ. 
  • ಸಮುದ್ರ ತೀರದ ದೃಶ್ಯಗಳು, ಕ್ಯಾಮೆರಾಗಳು ಹರಿದಾಡುವ ಸೊಗಸು ನೋಡಿಯೇ ಅನುಭವಿಸಬೇಕು 
  • ಮಳೆ ದೃಶ್ಯಗಳನ್ನು ಬೊಂಬಾಟ್ ಆಗಿ ಚಿತ್ರೀಕರಿಸಿದ್ದಾರೆ
  • ದೂದ್ ಸಾಗರ ಜಲಪಾತದ ಕಣಿವೆ ದೃಶ್ಯಗಳು, ಕ್ಯಾಸಲ್ ರಾಕ್, ಬ್ರಿಗಾಂಜ್ ಘಾಟ್, ರೈಲು ಪಟ್ಟಿಯ ಮಧ್ಯೆ ಬರುವ ಸುರಂಗಗಳು, ಪ್ರತಿಯೊಂದು ದೃಶ್ಯಕಾವ್ಯ. ಇನ್ನೊಮ್ಮೆ ಈ ಚಿತ್ರವನ್ನು ನೋಡಬೇಕೆನಿಸಿದರೆ ಅದು ಸತ್ಯ ಅವರ ಅದ್ಭುತ ಕೆಲಸಕ್ಕೆ. ಜಲಪಾತಗಳನ್ನು ಇಷ್ಟು ಸುಂದರವಾಗಿ ಸೆರೆಹಿಡಿಯಬಹುದು ಎಂದು ತೋರಿಸಿದ್ದಾರೆ. ಅವರ ಶ್ರಮಕ್ಕೆ ಶಿರಬಾಗಿ ನಮಿಸುವೆ 
ತಲೆಕೂದಲು ಕಿತ್ತು ಕೊಳ್ಳಬೇಕು ಅನ್ನಿಸುವ ಅಂಶಗಳು:
  • ಚಿತ್ರದುದ್ದಕ್ಕೂ ಮೈ ಮುಚ್ಚುವ ಪೋಲಿಸ್ ಧಿರುಸಿನಲ್ಲಿ ಸುಂದರವಾಗಿ ಕಾಣುವ ಸುಮನ್ ರಂಗನಾಥ್ ಕಡೆ ದೃಶ್ಯದಲ್ಲಿ ಒಂದು ಸುಂದರ ಹಾಡನ್ನು ಗಬ್ಬೆಬ್ಬಿಸಿ ರಿಮಿಕ್ಸ್ ಅನ್ನುವ ಕೆಟ್ಟ ತಂತ್ರ ಮಾಡಿ ವಯೋವೃದ್ಧರಾದ ಕೆಲ ನಟರನ್ನ ಬಾಯಿ ಬಾಯಿ ಬಿಡುತ್ತಾ ಚಿತ್ರೀಕರಿಸಿರುವ ಹಾಡು. ಅದಕ್ಕೆ  ಹಿರಿಯ ನಟರನ್ನು ಬಳಸಿಕೊಂಡ ರೀತಿ (ಲೋಕನಾಥ್, ಪಾರ್ಥಸಾರಥಿ, ಉಮೇಶ್)... ದೇವರೇ ಕಾಪಾಡಪ್ಪ! 
  • ರಾತಿ ಪೂರ್ತ ಸಂಕಟ ಅನುಭವಿಸಿ ಹೆತ್ತ ಮಗುವನ್ನು ನಾಯಿ ಕಚ್ಚಿಕೊಂಡು ಹೋಯಿತು ಎನ್ನುವ ಹಾಗೆ... ಒಳ್ಳೆ ಅಂತ್ಯ ಕೊಡಬೇಕಾದ ಜಾಗದಲ್ಲಿ @#$@#$@#$!
  • ಈ ಕಡೆ ಪ್ರೇಮ ಕಾವ್ಯವೂ ಆಗದೆ, ಸೇಡಿನ ರಾಜಕಾರಣವೂ ಆಗದ ಎಡಬಿಡಂಗಿಯಂತಹ ಅಂತ್ಯ
  • ಸಂಜು ಮತ್ತು ಗೀತ ದುಖಾಂತ್ಯವಾಯಿತು ಗಲ್ಲಾ  ಪೆಟ್ಟಿಗೆ ತುಂಬಿತ್ತು ಅಂತ   ಈ ಚಿತ್ರದಲ್ಲಿಯೂ  ಬೇಡದ ಅದೇ ದೋರಣೆಯನ್ನು ತೋರಿರುವುದು. 
  • ಒಳ್ಳೆಯ ನಟರನ್ನು ಪಾತ್ರ ಪೋಷಣೆ ಇಲ್ಲದೆ ವ್ಯರ್ಥ ಮಾಡಿರುವುದು (ಸುಹಾಸಿನಿ, ಅನಂತನಾಗ್, ಜೈ ಜಗದೀಶ್)
  • ಶರತ್ ಕುಮಾರ್ ಈ ಪಾತ್ರಕ್ಕೆ ಬೇಕಿತ್ತೆ ಎನ್ನುವ ಗೊಂದಲ ಕಾಡುತ್ತದೆ

ಹೊಡಿ ಬಡಿ ಚಚ್ಚು ಎನ್ನುವ ಸಿದ್ಧ ಸೂತ್ರಗಳ ಮಧ್ಯೆ ನಿಜಕ್ಕೂ ಉಸಿರಾಡಿಸುವ ಸುಂದರ ಚಿತ್ರ. ನೋಡಿ ಅಪರೂಪಕ್ಕೆ ಎಂಬಂತೆ ಬಂದಿರುವ ಒಂದು ಸುಂದರ ಕನ್ನಡ ಚಿತ್ರವನ್ನು ಬೆಂಬಲಿಸಿ. 

Thursday, March 14, 2013

Bangaradha Manushya (1972)

The first in the list features evergreen movie in Kannada movie land “Bangarada Manushya”.  It ran successfully for two years with out a break, a record in Kannada cini industry.  The re-release after a gap of 20 years also ran in to 100 days.

Part I
It was based on a novel by T K Ramarao, directed by Siddalingaiah, Starring Rajkumar, Bharathi, Balakrishna, Vajramuni in the leads.

Rajkumar returns from the city to visit his Sister’s house in the village, he comes to know his brother in law finished duty on the earth, and is on the way to heavenly abode. The moment his sister (played beautifully by Character Artist “Aadhavani Lakshmidevi”), and her children (Two sons played by Srinath, and Vajramuni), and a daughter sees Rajkumar they ran and hug him.  They all knew, he is the one who can bail them out. 

In this scene, she will be having a rich elder Brother (Lokanath), but still her hearts beats for the younger brother who was still studying, but she will have more faith on her younger brother(Rajkumar) than  on elder brother. 

This shows money is not the criteria for love and affection, always the relationship is between heart to heart, but not from wallet to heart.

Part II

When Rajkumar, retrieves the land from the mortgage, he decides to plough on his own.  After the basic rituals, instead of starting to plough, he gently massages the bulls, and then he lifts soil from the land, and prays to the goddess earth to support his noble gesture to save his sister’s family from the troubled waters.

You will fail to choose the winner who is the most innocent, the bulls, the earth, or the Hero.  It brings tears down the cheeks any time I visit this scene.

This teaches, never neglect the hands which lend you the support in the crisis, and also, never forget to seek the divine intervention, which helps you to clear all the path strewn with thorns.

The character of Rajeeva played by Rajkumar was a gem in its own respect.  Sometimes after reading the novel, and watching the movie, you will tempted to debate whether novel was written by keeping Rajkumar in the mind, or Rajkumar was born to portray the character of Rajeeva.  It is like debating whether egg came first or the hen.

Sunday, November 11, 2012

ಮೈನಾವತಿ ಸಿನಿ ಹೃದಯವಂತರ ನೆನಪುಗಳಿಂದ ಮಾಣಿಕ್ಯ (2012)


ಅರವತ್ತು ಎಪ್ಪತ್ತರ ದಶಕದ ಸಿನಿಮಾಗಳನ್ನು ನೋಡಿದವರಿಗೆ ನೋಡಲು ಇಚ್ಚಿಸುವವರಿಗೆ ಪಂಡರಿಬಾಯಿ ಮತ್ತು ಮೈನಾವತಿ ಮರೆಯಲಾರದ ಹೆಸರುಗಳು. 

ಅಕ್ಕ ಪಂಡರಿಬಾಯಿ ಸಾಧು ಸ್ವಭಾವದ ಪಾತ್ರಗಳನ್ನೂ ಮಾಡಿ "ಅಮ್ಮ" ಎಂದರೆ ಹೀಗೆ ಇರುತ್ತಾರೆ ಎನ್ನಿಸುವಷ್ಟು ನೈಜತೆ ಮೆರೆದಿದ್ದಾರೆ

ಆದರೆ ಮೈನಾವತಿ ಘಟವಾಣಿ, ಜಂಭದ ಹುಡುಗಿ, ಹಟಮಾರಿ, ಮತ್ತು ಹಾಸ್ಯ ಪಾತ್ರಗಳಿಂದ ರಂಜಿಸುತಿದ್ದರು. 


ಕನ್ನಡ ಚಿತ್ರಗಳಲ್ಲಿ ಬಾಲಕೃಷ್ಣ ನರಸಿಂಹರಾಜು ಇವರಿಬ್ಬರನ್ನು ಪರದೆಯ ಮೇಲೆ ಹುರಿದು ಮುಕ್ಕುವಂತೆ ಅಭಿನಯಿಸುತಿದ್ದ ಪಾತ್ರಗಳು ಇಂದಿಗೂ ಜೀವಂತ.

ಇಂತಹ ಕಲಾವಿದೆಯನ್ನ ದೇವರು ಸಹ ಬಿಟ್ಟಿರಲಾರ ಎನ್ನಿಸುತ್ತದೆ, ಕಾರಣ ಅವರು ಚಿತ್ರಗಳಲ್ಲಿ ಗೋಳುಹುಯ್ದುಕೊಂಡ ಬಾಲಣ್ಣ, ನರಸಿಂಹರಾಜು, ಕಲ್ಯಾಣ್ ಕುಮಾರ್ ಎಲ್ಲರು ದೇವರ ಬಳಿ ಇರುವಾಗ ಇವರನ್ನು ಕರೆದು ಕೊಂಡು ಬಿಟ್ಟ..

ಈ ಕಲಾವಿದೆಯನ್ನ ಕಪ್ಪು ಬಿಳುಪು ಚಿತ್ರಗಳಲ್ಲಿ ನೋಡುವುದೇ ಒಂದು ಸುಂದರ ಅನುಭವ..ಮರೆಯಾಗದಿರಲಿ ಈ ಮಾಣಿಕ್ಯ ಸಿನಿ ಹೃದಯವಂತರ ನೆನಪುಗಳಿಂದ!!!


Thursday, October 11, 2012

Redefined Alphabets in Indian Cinema - Big B - 70th Birthday!! (2012)


The man who reinvented the order of the alphabets..ABC.. 

he him self a corporate entity for the movie moguls of World in General and India In particular.  

He enthralled all of the movie buffs in his own way..It is unethical, inhuman or a shameful act to list of top ten movies of him.  Each and every movie is a gem in its own way.  Just to satisfy my ego, am listing out few of his best movies in my opinion which stands tall all the way.

1. Kaala Patthar
Courtesy - Google Images
The intensity filled eyes, very less and less dialogues  the scene where he catch holds of the knife with the sharp edge, and looks deep in the villain eyes..a seriously wonderful intensity filled performance of AB.

2. Anand
Courtesy - Google Images
The star about to explode, the serious acting, the dialogue delivery, no no star image..all this almost gave a head to head fight with Rajesh Khanna. 

3. Sharaabhi
Courtesy - Google Images
He is the one who almost redefined drunken act on the screen. and this movie has out and out sharabhi act through out the movie.  The dance sequence with Jayapradha where he keeps on banging that paayal with effective involvement and the interrupted singing in the same sequence just spectacular. The fight with sharabhi people a new kind.

4. Muqaddar ka Sikandar 
Courtesy - Google Images
Jugal bandhi song with Rekha is just awesome. The "tere bhi na bhi kya jeena.." song acting, and last fight all are too good.

5. Main azaad hoon
Courtesy - Google Images
No heroism, no image..a plain but powerful movie.  Worth watching many times.  Shabhana Azmi powerful performance, and Big B towering performance makes this as a gem. How the media are making fool of the public nicely portrayed in this movie.

6. Aankhen 
Courtesy - Google Images
You write a script..and AB with out any hassles he will get in to the skin.  Here playing a typical cranky role..what a performance from him.

7. Abhimaan
Courtesy - Google Images
How ego can destory the nice family, his brooding eyes, egoistic expression, the frustration everything comes in this great movie.

8. Bombay to Goa
Courtesy - Google Images
Ekdum raw performance..no inhibition, no star giri...

9. Agneepath
Courtesy - Google Images
There is no actor who can repeat his act of Vijay Deenanath Chouhan..is there any?..a master piece performance from the master.

10. Namak Haraam
Courtesy - Google Images
Again friendship, frustration, revenge, sacrifice everything comes in a package in this movie.


There are other movies to which didn't appeared in the listed out movies ..Sholay, Deewaar, Laawaris, Don, Shaan, Zanjeer...and so many..But my personal best are listed above.


Few picks from his movies are

1. Comic timing in Chupke Chupke
2. Dialogues in Deewar
3. Towering performance in Kabhi Kabhi
4. Fire with Fire in Trishul
5. Famous mirror acting in Amar Akbar Anthony
6. Famous Pan dance in Don
7. Mere Angaane mein dance in Lawaris
8. Intensity role in Zanjeer
9. Action, Drama, Humor in Sholay
10. Super dance for Apni to jaise taise in Lawwaris and Pagha Gungru..in Namak Halaal

many more endless....

He is celebrating 70th Birthday..a milestone in its own way in the hindu tradition.  

The man who is stepping in to 70th year..but has a enthusiasm of a teenager.  

Common friends let us wish the Emperor of Indian Cinema's Magical Kingdom The Amitabh Bachhan..

a special birthday..

Happy Birthday to God of Indian Cinema....Amitabh Bachhan!!!

Wednesday, July 18, 2012

Rajesh Khanna - The Phenomena (2012)

जिन्दगी बादी होनी चाहिहे लम्बी नही।..!!!


His famous dialogue from the evergreen movie "Anand"


He wrote a new chapter in the movie..irrespective of the language barrier.  He created his own path..where few dreaded to tread along.


His style, the looks, the tweaky smile, nodding head..all these made him a first of its kind in the movie world. He was simple man's lover boy.  


The scene where Rajesh says to Amitabh..."am seeing my death in your eyes..." my all time favorite dialogue. The beauty of friendship echoes in those words!!!!


The greatest movies I admire him was in Anand,  Namak Haram & Bawarchi. These are the perfect university for how lead the life.  


I admire him on most of his movies...but the best pick are :


1. Anand : How to lead the life when you know you are at the end of the tunnel.  His body language, dialogues, songs..his jugal bandhi with Amitabh, Johny Walker are still fresh in my memory.


2. Namak Haram : Always look at the situation from close quarters...be with them..then you realise the pain.  How neatly explains this basic principle in the movie..tailor made for Rajesh & Amitabh.


3. Baawarchi: Always we tend to miss the small small things which blows us out of the proportion..and ultimately we live in the mess...just take the small threads & neatly tie it..it becomes a perfect fabric.  just iron out the small small differences..you will get wrinkle free life..how beautifully essayed in this movie.


Ironically all the above three movies were from the table of Hrishikesh Mukherjee..and no doubt all these are few master pebbles from his table.


Long live Rajesh Khanna..you will be there with us forever... dialogue from your own movie...



आनंद मरा नही...आनंद मरेते नही।.. 


राजेश खन्न मरा नही राजेश खन्न मरते नही।..

ರಾಜೇಶ್ ಖನ್ನ...ಒಂದು ಸುಂದರ ಹೊಂಗನಸು (2012)

जिन्दगी बादी होनी चाहिहे लम्बी नही।..


ಅದ್ಧುತವಾದ ಸಂಭಾಷಣೆ.ಆನಂದ್ ಚಿತ್ರದಿಂದ.


ತನ್ನ ನಗು ಮುಖ, ರಾಗವಾಗಿ ಸಂಭಾಷಣೆ ಹೇಳುವ ಪರಿ, ಸುಂದರ ನಡಿಗೆ..ಆಗಿನ, ಈಗಿನ ಯುವಕ, ಯುವತಿಯರೆಲ್ಲರ ಮನವನ್ನು ಕದ್ದ ನಾಯಕ..


ಸಿನಿಮಾ ನಾಯಕನಾಗಲು ಕಟ್ಟು ಮಸ್ತಾದ ದೇಹವಿರಲೇ ಬೇಕು ಎನ್ನುವ ಅಲಿಖಿತ ನಿಯಮವನ್ನು ಕಿತ್ತು ಹಾಕಿದ ಅನೇಕ ನಾಯಕರಲ್ಲಿ ಮೊದಲಿಗೆ ನಿಲ್ಲುವಾತ ಈತ...ಆಗಿನ ಎಲ್ಲ ನಾಯಕರು ಒಂದಲ್ಲ ಒಂದು ಸ್ಟೈಲ್ ಗೆ ಹೆಸರಾಗಿದ್ದರು.  ರಾಜ್ ಕಪೂರ್ ದೇವಾನಂದ್, ದಿಲೀಪ್ ಕುಮಾರ್, ಶಮ್ಮಿ ಕಪೂರ್, ಮನೋಜ್ ಕುಮಾರ್, ಜಾಯ್ ಮುಖರ್ಜೀ,ಸುನಿಲ್ ದತ್, ಹೀಗೆ...ಅವರ ಮಧ್ಯೆ ತನ್ನ ತನವನ್ನು ಕಾಪಾಡಿಕೊಂಡು ಹಾಗೆಯೇ ಹೊಸದೊಂದು ಶಖೆಯನ್ನು  ಹುಟ್ಟು ಹಾಕಿದ ಕಲಾವಿದ...


ಶಕ್ತಿ ಸಾಮಂತ ನೀಡಿದ ಅದ್ಭುತ ಚಿತ್ರ ಆರಾಧನಾ..ಇಲ್ಲಿಂದ ಶುರುವಾಯಿತು ಕಿಶೋರ್-ರಾಜೇಶ್ ಜುಗಲ್ ಬಂಧಿ...
ಸುಲಲಿತ ಸಂಭಾಷಣೆ, ಹಾಡುಗಳು..ನಾಯಕಿಯರ ಜೊತೆ ಪ್ರೀತಿ, ಪ್ರೇಮ ಎಲ್ಲದರಲ್ಲೂ ಒಂದು ತರಹ ಹೊಸತನ ತಂದ ನಟ..


ನನಗೆ ಅತ್ಯಂತ ಪ್ರೀತಿಯ ಚಿತ್ರ ಆನಂದ್ ಹಾಗು ನಮಕ್ ಹರಾಮ್...ಇಬ್ಬರು ಸೂಪರ್ ಸ್ಟಾರ್ ಗಳು ಒಂದೇ ಚಿತ್ರದಲ್ಲಿ ಅಭಿನಯಿಸಿದ ಅತ್ಯುತ್ತಮ ಚಿತ್ರಗಳು.


ಆನಂದ್ ಸಿನಿಮಾದಲ್ಲಿ ರಾಜೇಶ್ ಬಿಟ್ಟರೆ ಬೇರೆ ಇನ್ಯಾರು ಆ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲರು ಎನ್ನುವ ಸಂದೇಹ ಇವತ್ತಿಗೂ ನನ್ನ ಕಾಡುತ್ತದೆ..


ಆನಂದ್, ನಮಕ್ ಹರಾಮ್, ಬಾವರ್ಚಿ, ಕಟಿ ಪತಂಗ್, ಅನುರೋದ್, ಆಪ್ ಕಿ ಕಸಂ ನನ್ನ ಮೆಚ್ಚಿನ ಚಿತ್ರಗಳು..


ಆನಂದ್ ಸಿನಿಮಾದ ಕಡೆ ಸಂಭಾಷಣೆ...


आनंद मरा नही...आनंद मरेते नही।.. 


राजेश खन्न मरा नही...... राजेश खन्न मरते नही।..
ಯಾವಾಗಲೂ  ಹಸಿರಾಗಿ, ಉಸಿರಾಗಿ ತಮ್ಮ ಚಿತ್ರಗಳ ಮೂಲಕ ನಮ್ಮ ಮನದಲ್ಲಿ ಸದಾ ಇರುತ್ತಾರೆ ರಾಜೇಶ್ ಖನ್ನ...

Tuesday, July 10, 2012

ಕಲಿಯುಗ - ಭಾವನಾ ಲೋಕದ ಚಿತ್ರ (1984)


ಸಾವಿತ್ರಿ..ತನ್ನ ಗಂಡನ್ನ ಉಳಿಸಿಕೊಳ್ಳಲು ಯಮರಾಜನ ಜೊತೆ ವಾಗ್ವಾದ ನಡೆಸಿ ಗೆದ್ದಳು..ಇದಕ್ಕೆ ಸ್ವಲ್ಪ ಅಪವಾದ ಎನ್ನುವಂತೆ ತಾಯಿ ಹೃದಯ ಮಕ್ಕಳಿಗೋಸ್ಕರ ಮಿಡಿಯುತ್ತೆ ಅನ್ನುವ ವಿಷಯವನ್ನು ಹಿಡಿದು ಮಾಡಿದ ಚಿತ್ರ "ಕಲಿಯುಗ"

ನನ್ನ ಅಮ್ಮ ನನ್ನನ್ನು  ಹನುಮಂತನಗರದ ರಾಜಲಕ್ಷ್ಮಿ ಎನ್ನುವ ಟಾಕಿಸ್ಗೆ(ಟೆಂಟ್) ಕರೆದು ಕೊಂಡು ಹೋದ ಏಕೈಕ ಚಿತ್ರ...

ಒಂದು ಸುಂದರ ಜಗತನ್ನು ನನಗೆ ಪರಿಚಯ ಕೊಟ್ಟರು..ನಾನು ಭಾವನಾ    ಲೋಕದಲ್ಲಿ ತೇಲಲು ಶುರು ಮಾಡಿದ್ದೂ ಬಹುಶಃ ಇಲ್ಲಿಂದಲೇ..

ನನ್ನ ಮೆಚ್ಚಿನ ನಟ ರಾಜೇಶ್ ಅಭಿನಯಿಸಿದ ನನಗೆ ಇಷ್ಟವಾದ ಕೆಲವು ಚಿತ್ರಗಳಲ್ಲಿ ಕಲಿಯುಗ ಮತ್ತು  ದೇವರ ದುಡ್ಡು ಒಂದು... 
http://moved-movies.blogspot.in/2012_01_01_archive.html
ದೇವರ ದುಡ್ಡು ಚಿತ್ರದ ಬಗ್ಗೆ ಬರೆದಿದ್ದೆ..

ಈಗ ಕಲಿಯುಗ ಚಿತ್ರದ ಬಗ್ಗೆ ಬರೆಯೋಣ ಅನ್ನಿಸಿತು.

ರಾಜೇಶ್  - ಕನ್ನಡ ನಟ 
ಇದು ರಿಮೇಕ್ ಚಿತ್ರವಾದರೂ, ಅಮೋಘ ಅಭಿನಯ ನೀಡಿದ ಚಿತ್ರ..ನನ್ನ ನೆಚ್ಚಿನ ಆರತಿ ಕೂಡ ಅದ್ಭುತ ಎನ್ನುವ ರೀತಿಯಲ್ಲಿ ಪೈಪೋಟಿ ಕೊಟ್ಟು ಅಭಿನಯಿಸಿದ ಚಿತ್ರ ಇದು.
ಆರತಿ.ಆಗಿನ ಎಲ್ಲ ಹೆಸರಾಂತ ನಾಯಕರ ಜೊತೆ  ಅಭಿನಯ 
ಕಥೆ ಮಾಮೂಲಿ..ತಂದೆ ತಾಯಿ ಮಕ್ಕಳಿಗೋಸ್ಕರ ಜೀವ ತೇಯ್ದು ಸಾಕುತ್ತಾರೆ..
ರೆಕ್ಕೆ ಬಲಿತ ಹಕ್ಕಿಗಳು ಗೂಡು ಬಿಟ್ಟು ಹೋಗುವಂತೆ ಹಾರಿ ಹೋಗುತ್ತಾರೆ..
ಒಂದು ಚೂರು ರೊಟ್ಟಿ ಕೊಟ್ಟರೆ ಜೀವನವಿಡಿ ಹಿಂದೆ ಬರುವ ಶ್ವಾನದಂತೆ ರಕ್ತ ಸಂಬಂಧವಿಲ್ಲದಿದ್ದರು ನೆರಳಾಗಿ ಸಾಕುವ ಸಾಕು ಮಗ...

ಕಡೆಗೆ ಮಕ್ಕಳಿಗೆ ತಾವು ಜೀವನದಲ್ಲಿ ಎಡವಿ ಬಿದ್ದು..ಮತ್ತೆ ಶರಣು ಅಂತ ಬಂದಾಗ ಅಪ್ಪ ಮಕ್ಕಳಿಗೆ ಶಿಕ್ಷೆ ಕೊಡಬೇಕು ಅಂತ ಬಯಸುತ್ತಾನೆ.

ಆದ್ರೆ ತಾಯಿ ಹೃದಯ ತಾನು ಗಂಡನ ಕಷ್ಟದಲ್ಲಿ ನೆರಳಾಗಿ ಜೊತೆಯಿದ್ದು..ಹೆಗಲಿಗೆ ಹೆಗಲು ಕೊಟ್ಟು ನಿಂತರು..ಕಡೆಗೆ ಬಯಸುವುದು ಮಕ್ಕಳ ಸಾನಿಧ್ಯ

ಕಡೆಗೆ ಗಂಡ ಹೆಂಡತಿಯನ್ನು ಅರ್ಥ ಮಾಡಿಕೊಂಡಿದ್ದರು ಕೂಡ, ಮಕ್ಕಳ ಮೇಲಿನ ಕೋಪಕ್ಕೆ ದೂರ ನಿಲ್ಲಲು ನಿರ್ಧಾರ ಮಾಡಿ..ಹೆಂಡತಿಯ ದುಡುಕು ಮಾತುಗಳಿಂದ ನೊಂದು ಹೃದಯಾಘಾತವಾಗಿ ಮಡಿಯುತ್ತಾನೆ..ಮತ್ತು ಉಯಿಲು ಪತ್ರದಲ್ಲಿ ತನ್ನ ಎಲ್ಲ ಆಸ್ತಿಯ ಬಹು ಭಾಗವನ್ನು ತನ್ನ ಸಾಕು ಮಗನಿಗೆ ಬಿಟ್ಟು, ಮಡದಿಯ ಪುತ್ರ ಮೋಹಕ್ಕೆ ಕೆಲವು ಲಕ್ಷ ರುಪಾಯಿಗಳನ್ನು ಕೊಡುವುದು ಎಂದು ಬರೆದಿರುತ್ತಾನೆ

ಮಕ್ಕಳಿಗೆ ತಮ್ಮ ತಪ್ಪು ಅರಿವಾಗುವಷ್ಟರಲ್ಲಿ ಪಿತನ ಕಳೆದುಕೊಂಡು ಅನಾಥವಾಗುತ್ತಾರೆ..

ರಾಜೇಶ್ ಜೀವಮಾನದ ಶ್ರೇಷ್ಠ ನಟನೆ..ಪ್ರತಿಯೊಂದು ಸನ್ನಿವೇಶವನ್ನು ಅನುಭವಿಸಿ ಅಭಿನಯಿಸಿದ್ದಾರೆ..ಅವರು ಹೇಳುವ ಸಂಭಾಷಣೆ.."ಸಾವು ತಾನಾಗೆ ಬರುವವರೆಗೆ ಸಾಯಲು ಇಷ್ಟ ಪಡುವುದಿಲ್ಲ..ಸತ್ತ ಮೇಲೂ ಬದುಕಲು ಇಷ್ಟ ಪಡುತ್ತೇನೆ.." ಅದ್ಭುತ ಸಾಲುಗಳು..ರಾಜೇಶ್ ಪ್ರತಿಯೊಂದು ಸಂಭಾಷಣೆಯು ಕರತಲಾಮಲಕ ಎನ್ನುವಷ್ಟು ಸಲೀಸಾಗಿ ಹೇಳಿದ್ದಾರೆ..

ಆರತಿ ಕಣ್ಣಲ್ಲೇ ಭಾವನೆಗಳನ್ನು ವ್ಯಕ್ತ ಪಡಿಸುತ್ತಾ..ತನ್ನ ಮಕ್ಕಳೆಲ್ಲ ಮೋಸ ಮಾಡಿ ಬಿಟ್ಟು ಹೋದಾಗ ತನ್ನ ಸಾಕು ಮಗನನ್ನು ಕರೆದು "ನಂದೀಶ ಯಾಕೋ ನನ್ನ ಹೊಟ್ಟೆಯಲ್ಲಿ ಹುಟ್ಟಲಿಲ್ಲ?" ಎಂದು ಹೇಳುವ ದೃಶ್ಯ ನಿಜಕ್ಕೂ ಕಣ್ಣೇರು ತರಿಸುತ್ತೆ ...

ಆರತಿಯಾ ಅಭಿನಯ ಮೆಚ್ಚಿದ ಕೆಲವು ಚಿತ್ರಗಳ ದೃಶ್ಯಗಳಲ್ಲಿ  ಇದು ಒಂದು.. ಕಡೆಗೆ ಮಕ್ಕಳ ಮೇಲಿನ ಪ್ರೀತಿಯಿಂದ ಗಂಡನಿಗೆ "ನಿಮ್ಮ ಹೃದಯ ಕಲ್ಲು..ಕಲ್ಲು" ಎಂದು ಹೇಳುವ ದೃಶ್ಯ..ತಾಯಿ ಪ್ರೇಮವನ್ನು ಸಾರಿ ಸಾರಿ ಹೇಳುತ್ತದೆ...ಅಮೋಘ ಅಭಿನಯ..

ನನ್ನ ಅಚ್ಚು ಮೆಚ್ಚಿನ ಹಾಗು ನಾನು ಆರಾಧಿಸುವ ಬಾಲಣ್ಣ ಈ ಚಿತ್ರದಲ್ಲಿ ಹೇಳುವ ಸಂಭಾಷಣೆ "ನಾನು ಹೋಗೋಲ್ಲ..ನನ್ನ ಈ ಮನೆಯಿಂದ ಹೊರಗೆ ಹಾಕಬೇಡಿ.." ಎಂದು ಮಳೆಯಲ್ಲಿ ತೋಯುತ್ತ ಹೇಳುವ ಅಭಿನಯ..ಮಳೆಯಲ್ಲೂ ಕಣ್ಣೀರು ತರಿಸುತ್ತೆ.... 
ಅಭಿನಯದ ವಿಶ್ವ ಕೋಶ...ನಮ್ಮ ಬಾಲಣ್ಣ 
ಗಂಡನ ಮೇಲೆ ಪ್ರೀತಿ ಮಮಕಾರ ಎಷ್ಟೇ ಇದ್ದ್ದರು.. ತಾನು ಜನ್ಮ ನೀಡಿದ ಕಂದಮ್ಮಗಳು ಏನೇ ತಪ್ಪು ಮಾಡಿದರು ಅದನ್ನು ಕ್ಷಮಿಸುವ ಉದಾರ ಗುಣ ತಾಯಿಯಲ್ಲಿ ತೋರುವ ಕಥೆಯಲ್ಲಿ ಪ್ರತಿಯೊಬ್ಬರ ಅಭಿನಯ ಸ್ಮರಣೀಯ...

ಸಾವಿರ ಜನುಮ ಬರಲೇನು..ನೀನು ಇರುವಾಗ ನನಗೆ ಭಯವೇನು..
ನಿಮ್ಮ ತೊಳಲ್ಲಿ ನಾ ಸೇರೆಯಾದಾಗ ಸಾವು ಕೂಡ ಹಿತವೇನು
ಜೀವನ ನನಗೆ ಸಿಹಿಯಾಯ್ತು ..ಕಹಿ ನೀ ಬಂದು ಬಾಳಿಂದ ದೂರಾಯ್ತು.. 
ಎಂತಹ ಸೊಗಸಾದ ಸಾಲುಗಳು..ದಾಂಪತ್ಯ ಅಂದ್ರೆ ಇದೆ ಅಲ್ಲವೇ...

ತಾಯಿ ಜನ್ಮ ಕೊಡುತ್ತಾಳೆ
ತಂದೆ ಬಾಳು ಕೊಡುತ್ತಾನೆ..
ತಾಯಿ ಕ್ಷಮಿಸುತ್ತಾಳೆ
ತಂದೆ ಶಿಕ್ಷಿಸಿ ದಾರಿ ತೋರುತ್ತಾನೆ..
ಆದರೆ ಪ್ರೀತಿಸಿ, ಶಿಕ್ಷಿಸಿ, ಕ್ಷಮಿಸುವ ಉದಾರಿಗಳು 
ಅವರು ಯಾರು ಎಂದರೆ...
ತಂದೆ ತಾಯಿ ಮಾತ್ರ..
ಅದು ಸಾರ್ವಕಾಲಿಕ ಸತ್ಯ..

Saturday, June 16, 2012

12 Angry Men (1957)

This is one of the rare movie where there is no show bazzy to the heights!!!!  

The movie counts on the human emotion. The movie is a court room drama all the way for about 1.30 Hours.  For Indian audience this movies sounds different, as there is no jury system in our judiciary, but it closely reflects our village panchayat, where elders of the village usually decides guilty or not guilty after examination of the facts and the truths.

This movies clearly shows the prejudice is the word which can act more on human psyche.  The movie depicts any decisions, or judging on anything should never be suicidal, churn the facts, situation to come out with a clear words than judging something without knowing the facts.

We can not think something..and ink something that is the essence of the whole movie!!!

This movie shows various shades of human mentality, worth watching, nice dialogues, tight screenplay, and wonderful portraying of each character according to the shades.

Saturday, May 5, 2012

Seven Samurai - Akira Kurosawa (1954)

This movie was always in my wish list.  After watching Rashoman, and Dreams..my great friend Vikram suggested me to watch this.  The grand marathon movie is of about 3 Hours 26 Minutes classic released in 1954.  Some how the day came in.

This movie is all about the farmers guts to get rid of the bandits who used to torment the villagers at their will. 

As always happens, there were indifference among the villagers to get rid of bandits or feed them on regular basis and plead them not to end the lives.

The grand-dad of the village of the opinion to hire good samurai's who help us only for the meals villagers would provide, and nothing extra.  So few volunteers who were effected by the bandits one or the other way decides to hire the samurai's.  

The movie ticks off from here, the alignment of seven samurai for the task was hillarious, and at the same time..shows the emotional side of the humans as well.  

The finding of the last samurai was the most hilarious one, and from then on he carries the movie on his shoulder.  The favorite actor of Akira Kurosawa steals the show from there on.  He histrionics, body language, dialogue delivery, expression, punch line all worth mentioning.

Breeze camera work, sleek editing, awesome dialogues, and few one liners, and Kurosawa's trade mark rainy shot just takes the breath away. There is not even a single dull moment in the entire length of the movie.


Every character in this movie doesn't act, instead they become the characters itself. 

The plan to stop the bandits, its prepartion, and execution everything had been shot very well.

This movie has some of the best dialogues to ponder over long time

  • Danger always strikes when everything seems fine


  • So. Again we are defeated. The farmers have won. Not us.


  • This is the nature of war. By protecting others, you save yourself. If you only think of yourself, you’ll only destroy yourself.

  • Bandits are coming, you fool. Why worry about the beard, when the head is about to fall?

  • A good fort needs a gap. The enemy must be lured in. So we can attack them. If we only defend, we lose the war.

  • Well — it's impossible to kill 'em all, so I usually run away

  • As a matter of fact, I'm preparing for a tough war. It will bring us neither money nor fame. Want to join?.....may be we die this time!!!!

The last scene, where in two surviving samurai talks to each other saying "we have survived again"...and with a pause "Villagers won...we were defeated again" signifies how the moods of the human changes....

This movie inspired making many movies like The Magnificent Seven,  The Guns of Navarone,  and many more..and our own Sholay...

This movie is about different shades of human beings...A great salute to the master craftsman AKIRA KUROSAWA.

Monday, April 23, 2012

ಅಣ್ಣಾವ್ರೆ ನಿಮಗೆ ಜನುಮ ದಿನದ ಶುಭಾಶಯಗಳು (2012)

ಕರುನಾಡು ಕನ್ನಡಮ್ಮನ ದೇವಾಲಯ
ಆ ದೇವಾಲಯದ ಅರ್ಚಕರು ಅನೇಕ
ಪ್ರತಿ ಅರ್ಚಕರು ತಮ್ಮ ತನು ಮನಗಳಿಂದ ಆ ದೇವಿಯನ್ನು ಅರ್ಚಿಸಿ
ಕೆಲವರು ನಟವರರಾದರು..!!!!!
ಕೆಲವರು ನಟಿಯರಿಗೆ ವರರಾದರು!!!
ಆದರೆ ನಮ್ಮ ಅಣ್ಣ ರಾಜಣ್ಣ ವರ ಪಡೆದ ನಟರಾಗಿ ವರನಟರಾದರು!!!
ಎಲ್ಲಕಡೆ ಕೂಗು..ಅಣ್ಣ ಮತ್ತೊಮ್ಮೆ ಹುಟ್ಟಿ ಬನ್ನಿ ಅಂತ ಹೇಳುತ್ತಾರೆ..
ಆದ್ರೆ ನನ್ನ ಕೂಗು..ಅಣ್ಣ ಹೋಗಿದ್ದರಲ್ಲವೇ ಮತ್ತೊಮ್ಮೆ ಹುಟ್ಟಿ ಬನ್ನಿ ಎಂದು ಹೇಳುವುದು 
ಅವರು ನಮ್ಮ ಹೃದಯ ಸಿಂಹಾಸನಧೀಶರಾಗಿ ಅಜರಾಮರ
ಆವರ ಪಾತ್ರಗಳು, ಸಂಭಾಷಣೆ, ಅಭಿನಯ, ಹಾಡುಗಾರಿಕೆ ಇವನ್ನು ನಾವು ನೂರು ಜನ್ಮ ಎತ್ತಿದರು ಮರೆಯಲು ಸಾಧ್ಯವಿಲ್ಲ..ಅಂಥಹ ಪಾತ್ರಗಳ ಪಿತಾಮಹ ನಮ್ಮ ರಾಜಣ್ಣ
ಕೆಲವರು ಇರುವಾಗಲೇ ಮರೆಯಾಗುತ್ತಾರೆ...ಕೆಲವರು ಮರೆಯಾದಮೇಲೆ ಇರುತ್ತಾರೆ ಆದರೆ ನಮ್ಮ ಅಣ್ಣ..ಸದಾ ಕಣ್ಣ ಮುಂದೆಯೇ ಇರುತ್ತಾರೆ ನಮ್ಮ ದಿನ ನಿತ್ಯದ ಜೀವನದ ಹಾದಿಯಲ್ಲಿ..
ನಿಮ್ಮ ಪಾತ್ರದ ಹರವು ನಮ್ಮ ಕಾವೇರಿ ನದಿಯ ಹರವಿಗಿಂತ ಮಿಗಿಲು..
ಅಣ್ಣಾವ್ರೆ ನಿಮಗೆ ಜನುಮ ದಿನದ ಶುಭಾಶಯಗಳು..

Saturday, April 14, 2012

ದಶಮುಖ ಒಂದು ವಿಭಿನ್ನ ಚಿತ್ರ (2012)

 ದಶಮುಖ ಸಿನಿಮಾದ ಜಾಹಿರಾತು, ಕೆಲವು ತುಣುಕುಗಳನ್ನ ನೋಡಿದಾಗ..ಮನಸು ಯಾಕೋ ಈ ಸಿನೆಮಾನಾ ನೋಡ್ಬೇಕು ಅಂತ ಅನ್ನಿಸ್ತು...ಶನಿವಾರ ಸಂಜೆ ಹೀಗೆ ಟಿ.ವಿ. ನೋಡುತ್ತಾ ಕುಳಿತ್ತಿದ್ದಾಗ..ದಿಗ್ಗನೆ ಎದ್ದು ಮನೆಯ ಹತ್ತಿರ ಇರುವ ವೀರೇಶ್ ಸಿನೆಮಾಸ್ ಗೆ ನನ್ನ ಪತ್ನಿಯ ಜೊತೆಗೆ ಹೋದೆ...
ಜನ ಗಣ ಮನದಿಂದ ಶುರುವಾಯಿತು...


ನಂತರ ಚಿತ್ರ ಶುರುವಾಯಿತು...


ಏನೋ ಗೊಂದಲ ಮೊದಲ ದೃಶ್ಯದಲ್ಲೇ..ಅದೇ ಗೊಂದಲ ನ್ಯಾಯಾಧೀಶ ಕೂಡ ತೋರುತ್ತಾರೆ...ಸರಿ ಮುಂದೆ ಶುರುವಾಗುತ್ತೆ ನಿಜಾವಾದ ಸಿನಿಮಾ...


ಇದು ನಿಜಕ್ಕೂ ಒಂದು ಭಿನ್ನ ಪ್ರಯತ್ನ..ಮಾಡಿದ ಎಲ್ಲ ಕಲಾವಿದರಿಗೂ ಒಂದು ತರಹ ಹೊಸ ತರಹದ ಪಾತ್ರಗಳು..
ಆದ್ರೆ ನಿಜವಾದ ಹೀರೋ...ಕೆ.ವಿ.ರಾಜು ಅವರ ಚಿತ್ರಕಥೆ...ನೀರಿನಷ್ಟೇ ಸುಲಭ...ಆದ್ರೆ ಅಷ್ಟೇ ಸುಲಲಿತ ಸಂಭಾಷಣೆ...
ನಂತರದ ನಾಯಕ...ನಮ್ಮ ರವಿ ಮಾಮ..(ರವಿಚಂದ್ರನ್)...ನಿಜಕ್ಕೋ ಅವರಿಗೆ ಒಪ್ಪುವ ಪಾತ್ರ...ಈ ಚಿತ್ರ ನೋಡಿದ ಮೇಲೆ ನಿಜಕ್ಕೋ ಕಾಡುವುದು ಮೂರು...

ಒಂದು ರವಿ, ಎರಡು ಮುದ್ದಾದ  ಮಾಳವಿಕ, ಮೂರು ಅನಂತ್ ನಾಗ್ ಅವರ ಕೊನೆಯ ದೃಶ್ಯದ ಅದ್ಭುತ ಅಭಿನಯ..

ಈ ತರಹದ ಚಿತ್ರಕತೆಯನ್ನ ಸುಮಾರು ಎರಡು ವರೆ ತಾಸು ಹಿಡಿದಿಡುವುದು ಸುಲಭದ ಮಾತಲ್ಲ..ಇದಕ್ಕೆ ಒಳ್ಳೆ ನಟರು, ಸಂಭಾಷಣೆ...ಚೌಕಟ್ಟು ಎಲ್ಲವು ಬೇಕು...ಅದು ಈ ಚಿತ್ರಕ್ಕೆ ಇದೆ...ಪಾತ್ರ ಮಾಡಿದ ಎಲ್ಲ ಕಲಾವಿದರು ನ್ಯಾಯ ಒದಗಿಸಿದ್ದಾರೆ...


ಮಾನವನಿಗೆ  ಹತ್ತು ಹಲವು ಭಾವನೆಗಳು ಇರುತ್ತವೆ..ಆದ್ರೆ ಅದನ್ನು ಒರೆ ಹಚ್ಚಿ ನೋಡುವ ಸಾಮರ್ಥ್ಯ, ತಾಳ್ಮೆ ಇರಬೇಕು ಇದು ಚಿತ್ರದ ಮೂಲ ಆಶಯ..


ಕೆಲವು ಪಾತ್ರಗಳು ಇನ್ನಷ್ಟು ಪೋಷಿಸಬೇಕಿತ್ತು ಅನ್ನಿಸುತ್ತೆ..ಮತ್ತು ಅಂತ್ಯಕ್ಕೆ ಇನ್ನಷ್ಟು ತಾರ್ಕಿಕತೆ ಬೇಕಿತ್ತು ಅನ್ನಿಸುತ್ತೆ..ಆದ್ರೆ ಹೊಡಿ ಬಡಿ, ಹುಚ್ಚು ಪ್ರೇಮದ ಅಮಲಿನ ಚಿತ್ರಗಳಿಗಿಂತ ತುಂಬಾ ಭಿನ್ನವಾಗಿ ನಿಲ್ಲುತ್ತೆ..

ಕಥೆ ಬಹಳ ಸರಳ, ಅದಕ್ಕೆ ಸಿಕ್ಕಿರುವ ಪ್ರಯತ್ನ ಚಪ್ಪಾಳೆ ಗಿಟ್ಟಿಸುತ್ತೆ
.
ರವಿಯಾ ನಟನೆ...ಎಲ್ಲವನ್ನು ಕೂಲಂಕುಶವಾಗಿ ನೋಡುವ ರೀತಿ 


ಅನಂತ್ ಅಭಿನಯ, ತಮ್ಮ ಜೀವನದ ಕಹಿ ಪ್ರಪಂಚದಲ್ಲಿ ಎಲ್ಲ ಕಡೆ ಎಂದು ಹೇಳುವ  ಪಾತ್ರ 


ಅವಿನಾಶ್ ಶ್ರೀಮಂತನ ಸೋಗಲಾಡಿ ಪಾತ್ರದಲ್ಲಿ ಸಂಭಾಷಣೆ ಹೇಳುವ ಶೈಲಿ..ತನ್ನ ನಿರ್ಧಾರವೇ ಸರಿ..ಬೇರೆಲ್ಲರೂ ಉಪಯೋಗವಿಲ್ಲ..ಅಂತ ನಿಲ್ಲುವ ತಪ್ಪು ನಿರ್ಧಾರಗಳು..ಚೆನ್ನಾಗಿ ಅಭಿನಯಿಸಿದ್ದಾರೆ..


ಮಾಳವಿಕಾ..ತನ್ನ ಮುದ್ದಾದ ಮೊಗವನ್ನು ತೋರುತ್ತ..ನಿರ್ಧಾರಗಳು ಭಾವನೆಗಳಿಗೆ ತಕ್ಕಂತೆ ಹೇಗೆ ಏರು-ಪೇರಾಗುತ್ತದೆ ಎಂದು ತೋರಿಸುವ ತವಕ


ಸರಿತಾ (ಬಹಳ ವರುಷಗಳ ನಂತರ ಮತ್ತೆ ಕನ್ನಡ ಚಿತ್ರದಲ್ಲಿ ಕಾಣಿಸಿದ್ದಾರೆ...ಅವರು ಮಾಗಿದ್ದಾರೆ ಆದ್ರೆ ಅವರ ಅಭಿನಯ ಒಂಚೂರು ಬದಲಾಗಿಲ್ಲ..ಅದ್ಭುತ ಕಲಾವಿದೆ) ಮನವೊಂದು ಕಡೆ, ದೇಹವೊಂದು ಕಡೆ, ಒಳಗೆ ಒಂದು ಕಸಿವಿಸಿ..ಹೊರಗೆ ಹೇಗೋ ಕೆಲಸ ಮುಗಿಸೋಣ ಅನ್ನುವ ಅನ್ಯಮನಸ್ಕ ಜೀವನ ..


ದತ್ತಣ್ಣ ಹಿರಿಯರು ತಮ್ಮ ಪೂರ್ವಗ್ರಹ ಪೀಡಿತ ದೃಷ್ಟಿ ಕೋನ ತಪ್ಪು ಎಂದು ತೋರಿಸುವ ಪರಿ..


ದೇವರಾಜ್ ನಾನೇ ಸರಿ ಎಲ್ಲರು ತಪ್ಪು ಎಂದು ತೋರಲು ಒದ್ದಾಡುವುದು 


ರವಿ ಕಾಳೆ (ಇನ್ನಷ್ಟು ಪೋಷಣೆ ಬೇಕಿತ್ತು)...ಎರಡು ಕಡೆ ವಾದ ವಿವಾದಗಳನ್ನು ತೂಗುತ್ತ ..ಕಡೆಗೆ ತನ್ನ ನಿರ್ಧಾರ ತಪ್ಪು ಎಂದು ತೋರುವುದು..


ಅಚ್ಯುತ ಕುಮಾರ್ ಧಾರಾವಾಹಿಗಳಲ್ಲಿನ ನಟನೆ ಬರಿ ಆಕಸ್ಮಿಕವಲ್ಲ ನಾನು ಉತ್ತಮ ನಟ ಅಂತ ತೋರಿಸಿದ್ದಾರೆ..ಸಂಭಾಷಣೆ ಪರಿ ಇಷ್ಟವಾಗುತ್ತೆ..ಬೇರೆಯವರು ತುಳಿಯಲು ಪ್ರಯತ್ನ ಮಾಡುತ್ತಾರೆ..ಆದ್ರೆ ಗಟ್ಟಿ ನೆಲ ಹಾಗು ನೆಲೆ ಸಿಕ್ಕಾಗ ಹೇಗೆ ಅದನ್ನು ಉಪಯೋಗಿಸಿಕೊಂಡು ಮೇಲೆ ಬರಬೇಕು ಎಂದು ಸೊಗಸಾಗಿ ತೋರಿದ್ದಾರೆ..


ಹೊಸ ನಟ (ನನ್ನ ಪ್ರಕಾರ - ಇನ್ನಷ್ಟು ಪೋಷಣೆ ಬೇಕಿತ್ತು)...ಉತ್ತಮ ಅಭಿನಯ ಮಾಡಿದ್ದಾರೆ..ತನ್ನ ಪೂರ್ವಾಶ್ರಮದ ಪಲುಕುಗಳು..ನಿರ್ಧಾರಗಳಿಗೆ ಹೇಗೆ ಸಹಾಯ ಮಾಡುತ್ತದೆ ಎಂದು ಚೆನ್ನಾಗಿ ವಿವರಿಸಿದ್ದಾರೆ..


ನಮ್ಮ ನಿರ್ಧಾರಗಳು ಪೂರ್ವಗ್ರಹ ಪೀಡಿತವಾದಾಗ ನಮ್ಮ ನಮ್ಭಿಕೆಗಳು ನಮ್ಮನ್ನ ದಾರಿ ತಪ್ಪಿಸುತ್ತವೆ..ಯೋಚನಾಲಹರಿಯನ್ನ ತುಂಡು ಮಾಡುತ್ತವೆ..ನಾವು ಕೇಳಿದ್ದೆ ಸತ್ಯ, ನೋಡಿದ್ದೇ ಸತ್ಯ, ಆಡಿದ್ದೆ ಸತ್ಯ ಅನ್ನ್ನುವ ಒಂದು ಭ್ರಮಾಲೋಕವನ್ನ ಸೃಷ್ಟಿ ಮಾಡುತ್ತದೆ..


ನಾವು ನಮ್ಮ ಪರಿಧಿಯಿಂದ ಹೊರಗೆ ಬಂದು ನಿಂತಾಗ, ಯೋಚನೆ ಮಾಡಿದಾಗ, ಹಾಗು ತಾರ್ಕಿಕ ಲಹರಿಯನ್ನ ಮುಂದಿಟ್ಟಾಗ ಮಾತ್ರ ನಿಜ ಅರಿಯುವ ಜಾಣ್ಮೆ, ತಾಳ್ಮೆ ಬರುತ್ತದೆ..


ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡು ಅನ್ನುವ ಗಾದೆ ಆಧಾರಿತ ಕತೆ ಚೆನ್ನಾಗಿ ಮೂಡಿ ಬಂದಿದೆ...


ಚಿತ್ರ ಮುಗಿದಾಗ ಇನ್ನೂ ಏನು ಬೇಕು ಅನ್ನಿಸುತ್ತದೆ..ಅದಕ್ಕೆ ಕಾರಣ ಕಥೆ ಹಾಗು ಚಿತ್ರಕಥೆ ಒಂದು ನಿರ್ಧಿಷ್ಟ ಚೌಕಟ್ಟಿನಲ್ಲಿ ಮಾತ್ರ ಸಾಗುತ್ತದೆ...ಇನ್ನು ಉತ್ತಮ ಪಡಿಸಬಹುದಿತ್ತು ಅನ್ನುವುದು ಸರಿ ಅಂತ ನನ್ನ ಭಾವನೆ..ಆದ್ರೆ ಇದು ಒಂದು ಉತ್ತಮ ಪ್ರಯತ್ನ ಹಾಗು ಉತ್ತಮ ಚಿತ್ರ ಎನ್ನುವುದು ಮಾತ್ರ ಸೂರ್ಯ ಚಂದ್ರ ಇರುವಷ್ಟೇ ಸತ್ಯ...


ದಯವಿಟ್ಟು ಒಳ್ಳೆಯ ಕನ್ನಡ ಚಿತ್ರಗಳನ್ನ ಬೆಂಬಲಿಸಿ, ನೋಡಿ ಒಂದು ಉತ್ತಮ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿ..

ಕಡೆ ಮಾತು : ರವಿಚಂದ್ರನ್ ಈ ರೀತಿಯ ಪಾತ್ರಗಳು ಜೀವಂತಿಕೆ ಕೂಡಿರುತ್ತದೆ..ಸ್ವಲ್ಪ ಸಣ್ಣ ಆಗಿ, ಈ ರೀತಿ ತೀಕ್ಷ್ನ ಪಾತ್ರಗಳನ್ನೂ ಮಾಡಿದರೆ..ಅವರು ಮತ್ತೆ ಕನಸುಗಾರನ ಹಾದಿಯಲ್ಲಿ ಕನ್ನಡ ಪ್ರೇಮಿಗಳಿಗೆ ಕನಸುಗಳನ್ನು ಉಣಬಡಿಸಬಹುದು...