ಕೆ ಎಸ್ ಎಲ್ ಸ್ವಾಮಿ ತಮ್ಮ ಚೊಚ್ಚಲ ನಿರ್ದೇಶನದಲ್ಲಿ ರಾಜಕುಮಾರ್, ಲೀಲಾವತಿ, ನರಸಿಂಹರಾಜು, ಉದಯಕುಮಾರ್, ಬಿ ವಿ ರಾಧಾ, ಬಾಲಕೃಷ್ಣ ಮುಂತಾದವರ ಜೊತೆ ಚಿತ್ರ ತಯಾರಿಕೆ ಮಾಡಿದ್ದಾರೆ.
ಶ್ರೀನಿವಾಸ್ ಅನ್ನುವ ನಟ ಈ ಚಿತ್ರದಲ್ಲಿ ಮೊದಲ ಬಾರಿಗೆ ತೆರೆಗೆ ಪರಿಚಯವಾಗಿ ಮುಂದೆ ತೂಗುದೀಪ ಶ್ರೀನಿವಾಸ್ ಅಂತಾನೆ ಪ್ರಸಿದ್ಧಿಯಾದರು.
ಪಿ ಬಿ ಶ್ರೀನಿವಾಸ್ ಅವರು ಗಾಯಕರಾಗಿ ಪ್ರಸಿದ್ಧಿಯಾದವರು.. ಈ ಚಿತ್ರದಲ್ಲಿ ಮೊದಲ ಬಾರಿಗೆ ತೆರೆಯ ಮೇಲೆ ಹಾಡಿನ ಮೂಲಕ ಬಂದಿದ್ದಾರೆ.
ವಿಜಯಭಾಸ್ಕರ್ ಅವರ ಅದ್ಭುತ ಸಂಗೀತದಲ್ಲಿ ಎಂಟು ಸುಮಧರ ಸಂಗೀತ ನೀಡಿದ್ದಾರೆ..
ಆರ್ ಎನ್ ಜಯಗೋಪಾಲ್, ನಂಜರಾಜ್ ಅರಸ್, ಮತ್ತು ಕೆ ಎಸ್ ಎಲ್ ಸ್ವಾಮಿ ಅವರ ಸಾಹಿತ್ಯ ಸೊಗಸಾಗಿದೆ.
ಈ ಸಾಹಿತ್ಯಕ್ಕೆ ದನಿಯಾಗಿ ಪಿ ಬಿ ಶ್ರೀನಿವಾಸ್, ಪಿ ಸುಶೀಲ, ಮತ್ತು ಎಲ್ ಆರ್ ಈಶ್ವರಿ ಇದ್ದಾರೆ
ಇವರೆಲ್ಲರ ಶ್ರಮವನ್ನು ಆರ್ ಎನ್ ಕೃಷ್ಣಪ್ರಸಾದ್ ಸೆರೆ ಹಿಡಿದಿದ್ದಾರೆ ಛಾಯಾಗ್ರಾಹಕರಾಗಿ!
ಆರ್ ಜಿ ಕೇಶವ್ ಮೂರ್ತಿ ಅವರು ನಿರ್ಮಾಪಕರಾಗಿ ಈ ಅದ್ಭುತ ಚಿತ್ರವನ್ನು ತಂದಿದ್ದಾರೆ.. ಆದರೆ ದುರದೃಷ್ಟವಶಾತ್ ಈ ಚಿತ್ರದ ಎಲ್ಲೂ ಸಿಗದ ಕಾರಣ.. ಈ ಚಿತ್ರವನ್ನು ನೋಡುವ ಸೌಭಾಗ್ಯದಿಂದ ವಂಚಿತರಾಗಿದ್ದೀವಿ.. ಹಾಡುಗಳು ಸಿಗ್ತಾ ಇಲ್ಲ ಆದರೆ ಧ್ವನಿ ಸುರಳಿ ಲಭ್ಯವಿರುವುದರಿಂದ ಅದನ್ನಾದರೂ ಕೇಳಿ ಕುಶಿ ಪಡೋಣ ಅಲ್ಲವೇ..
No comments:
Post a Comment