ಇಪ್ಪತ್ತನಾಲ್ಕನೆ ತಾರೀಕು ನನ್ನ ಇನ್ನೊಬ್ಬ ನೆಚ್ಚಿನ ಕಲಾವಿದನ ಬಗ್ಗೆ ನೀ ಬರೆಯಬೇಕು.. ನಿನಗೆ ಹನ್ನೆರಡು ದಿನಗಳ ಸಮಯ ಕೊಟ್ಟಿದ್ದೀನಿ.. ಇದರ ಜವಾಬ್ಧಾರಿ ನಿನದು..
Thursday, April 24, 2025
ಸಹ ಕಲಾವಿದರ ಪ್ರತಿಭೆ ಅಣ್ಣಾವ್ರ ಮಾತುಗಳಲ್ಲಿ - ಅಣ್ಣಾವ್ರ ಜನುಮದಿನ (2025)
Sunday, April 20, 2025
ತೂಗುದೀಪ ಹೆಸರೇ ಹೇಳುವಂತೆ ತೂಗುವ ದೀಪ 1966 (ಅಣ್ಣಾವ್ರ ಚಿತ್ರ ೭೨/೨೦೭)
ಕೆ ಎಸ್ ಎಲ್ ಸ್ವಾಮಿ ತಮ್ಮ ಚೊಚ್ಚಲ ನಿರ್ದೇಶನದಲ್ಲಿ ರಾಜಕುಮಾರ್, ಲೀಲಾವತಿ, ನರಸಿಂಹರಾಜು, ಉದಯಕುಮಾರ್, ಬಿ ವಿ ರಾಧಾ, ಬಾಲಕೃಷ್ಣ ಮುಂತಾದವರ ಜೊತೆ ಚಿತ್ರ ತಯಾರಿಕೆ ಮಾಡಿದ್ದಾರೆ.
ಶ್ರೀನಿವಾಸ್ ಅನ್ನುವ ನಟ ಈ ಚಿತ್ರದಲ್ಲಿ ಮೊದಲ ಬಾರಿಗೆ ತೆರೆಗೆ ಪರಿಚಯವಾಗಿ ಮುಂದೆ ತೂಗುದೀಪ ಶ್ರೀನಿವಾಸ್ ಅಂತಾನೆ ಪ್ರಸಿದ್ಧಿಯಾದರು.
ಪಿ ಬಿ ಶ್ರೀನಿವಾಸ್ ಅವರು ಗಾಯಕರಾಗಿ ಪ್ರಸಿದ್ಧಿಯಾದವರು.. ಈ ಚಿತ್ರದಲ್ಲಿ ಮೊದಲ ಬಾರಿಗೆ ತೆರೆಯ ಮೇಲೆ ಹಾಡಿನ ಮೂಲಕ ಬಂದಿದ್ದಾರೆ.
ವಿಜಯಭಾಸ್ಕರ್ ಅವರ ಅದ್ಭುತ ಸಂಗೀತದಲ್ಲಿ ಎಂಟು ಸುಮಧರ ಸಂಗೀತ ನೀಡಿದ್ದಾರೆ..
ಆರ್ ಎನ್ ಜಯಗೋಪಾಲ್, ನಂಜರಾಜ್ ಅರಸ್, ಮತ್ತು ಕೆ ಎಸ್ ಎಲ್ ಸ್ವಾಮಿ ಅವರ ಸಾಹಿತ್ಯ ಸೊಗಸಾಗಿದೆ.
ಈ ಸಾಹಿತ್ಯಕ್ಕೆ ದನಿಯಾಗಿ ಪಿ ಬಿ ಶ್ರೀನಿವಾಸ್, ಪಿ ಸುಶೀಲ, ಮತ್ತು ಎಲ್ ಆರ್ ಈಶ್ವರಿ ಇದ್ದಾರೆ
ಇವರೆಲ್ಲರ ಶ್ರಮವನ್ನು ಆರ್ ಎನ್ ಕೃಷ್ಣಪ್ರಸಾದ್ ಸೆರೆ ಹಿಡಿದಿದ್ದಾರೆ ಛಾಯಾಗ್ರಾಹಕರಾಗಿ!
ಆರ್ ಜಿ ಕೇಶವ್ ಮೂರ್ತಿ ಅವರು ನಿರ್ಮಾಪಕರಾಗಿ ಈ ಅದ್ಭುತ ಚಿತ್ರವನ್ನು ತಂದಿದ್ದಾರೆ.. ಆದರೆ ದುರದೃಷ್ಟವಶಾತ್ ಈ ಚಿತ್ರದ ಎಲ್ಲೂ ಸಿಗದ ಕಾರಣ.. ಈ ಚಿತ್ರವನ್ನು ನೋಡುವ ಸೌಭಾಗ್ಯದಿಂದ ವಂಚಿತರಾಗಿದ್ದೀವಿ.. ಹಾಡುಗಳು ಸಿಗ್ತಾ ಇಲ್ಲ ಆದರೆ ಧ್ವನಿ ಸುರಳಿ ಲಭ್ಯವಿರುವುದರಿಂದ ಅದನ್ನಾದರೂ ಕೇಳಿ ಕುಶಿ ಪಡೋಣ ಅಲ್ಲವೇ..
ಮಕ್ಕಳ ಕಾಲದಿಂದಲೂ ಕೇಳಿ ಬೆಳೆದ ಕಥೆ ಬಾಲನಾಗಮ್ಮ 1966 (ಅಣ್ಣಾವ್ರ ಚಿತ್ರ ೭೧/೨೦೭)
ಓಡಿ ಓಡಿ ಸುಸ್ತಾಗಿದ್ದಾಗ ಮತ್ತೆ ಸ್ವಲ್ಪ ಓಡಬೇಕು ಅಂತ ಅಪ್ಪಣೆ ಬಂದಾಗ.. ಮೊದಲಿದ್ದ ಉತ್ಸಾಹ ಇರುತ್ತದೆ.. ಆದರೆ ದೇಹ ಕೆಲವೊಮ್ಮೆ ಅಲ್ಪ ವಿರಾಮ ಕೇಳುತ್ತದೆ.. ಆಗ ಮುಂದೆ ಇರುವ ಬದಲು ಕೊಂಚ ಹಿಂದೆ ಬಂದು ಸಹಕಾರ ನೀಡಿ ನೆಡೆಯುತ್ತಿರುವ ಓಟದ ಕಾರ್ಯಕ್ರಮಕ್ಕೆ ಬಲ ನೀಡೋದು..
ಈ ನಾಲ್ಕು ವರ್ಷಗಳು ರಾಜಕುಮಾರ್ ಅವರ ಪಾಲಿಗೆ ಬಿಡುವಿಲ್ಲದ ವರ್ಷಗಳು ಸರಿ ಸುಮಾರು ೪೬ ಚಿತ್ರಗಳು.. ಅಬ್ಬೊ.. ಆದರೆ ಅಷ್ಟೊಂದು ಸಿನೆಮಾಗಳಲ್ಲಿ ಅಭಿನಯಿಸಿದರೂ ಅಭಿನಯದಲ್ಲಿ ಯಾವುದೇ ರಾಜಿಯಿಲ್ಲ.. ತನ್ನ ಪಾತ್ರ ಪ್ರಮುಖವೋ, ಪ್ರಾಮುಖ್ಯತೆ ಇಲ್ಲವೋ, ಹೆಚ್ಚು ದೃಶ್ಯಗಳು ಇಲ್ಲವೋ ಯೋಚಿಸಿದೆ ಸಿನೆಮಾರಂಗದ ಏಳಿಗೆಗೆ ತಮ್ಮದೇ ರೀತಿಯಲ್ಲಿ ಕಾಣಿಕೆ ಕೊಟ್ಟವರು ಅವರು.
ಇಷ್ಟೇಕೆ ಪೀಠಿಕೆ ಅಂತೀರಾ.. ಈ ಸಿನಿಮಾದಲ್ಲಿ ಅವರ ಪಾತ್ರ ಬರೋದು ಸುಮಾರು ಐವತ್ತ ನಾಲ್ಕು ನಿಮಿಷಗಳಾದ ಮೇಲೆ.. ಅಂದರೆ ಚಿತ್ರದ ಎರಡೂವರೆ ಘಂಟೆಯಲ್ಲಿ ಅರ್ಧಭಾಗ ಎನ್ನಬಹುದು.. ನಂತರವೂ ಕೂಡ ಸುಮಾರು ಒಂದು ಎಂಟು ಹತ್ತು ದೃಶ್ಯಗಳು ಇರಬಹುದು.. ಅದರಲ್ಲೂ ಸಹಕಲಾವಿದರ ಜೊತೆಯಲ್ಲಿಯೇ ಹೆಚ್ಚು.. ಏಕಾಂಗಿ ದೃಶ್ಯಗಳು ಇಲ್ಲವೇ ಇಲ್ಲ.. ಮೊದಲೇ ಈ ಕಥೆಯ ಹೆಸರಿನಂತೆ ಬಾಲನಾಗಮ್ಮನ ಪಾತ್ರದ ಸುತ್ತಲೇ ಸುತ್ತುವ ಕಥೆ.. ಆದ್ದರಿಂದ ರಾಜಕುಮಾರ್ ಅವರ ಪಾತ್ರ ಪೋಷಣೆಗೆ ಹೆಚ್ಚು ಅವಕಾಶವಿಲ್ಲ.. ಆದರೂ ಅವರ ಪಾತ್ರವನ್ನು ಕೊಂಚ ಬೆಳೆಸಿದ್ದಾರೆ.. ವಾಣಿಜ್ಯ ದೃಷ್ಟಿಯಿಂದ ಇರಬಹದು. ಆದರೆ ನಮಗೆ ಆ ಕಾಲದ ಜಾನಪದ ಕಥೆಯನ್ನು ನೋಡುವ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯವೇ ಹೌದು..
ರಾಜಕುಮಾರ್ ರಾಜಕುಮಾರನಾಗಿಯೇ ಈ ಚಿತ್ರದಲ್ಲಿ ಇರುತ್ತಾರೆ.. ಸರಳವಾದ ಅಭಿನಯ.. ಮುದ್ದಾಗಿ ಕಾಣುವ ಅವರ ವೇಷಭೂಷಣ. ಮಾತಿನ ಧಾಟಿ.. ಎಲ್ಲವೂ ಅವರ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದೆ.. ರಾಜಕುಮಾರ್ ಇಲ್ಲದ ಸಿನೆಮಾವನ್ನು ಊಹಿಸಿಕೊಳ್ಳದ ಕಾಲ ಎಂದು ಆ ಕಾಲದ ಮಾಧ್ಯಮ ಹೇಳಿದ್ದು ಓದಿದ ನೆನಪು..
ಪೋಷಕ ಪಾತ್ರವಲ್ಲ ಆದರೆ ನಾಯಕ ಪಾತ್ರಕ್ಕೆ ಹೆಚ್ಚು ಅಭಿನಯ ಅವಕಾಶವಿಲ್ಲ.. ಆದರೂ ಅವರ ನಟನಾ ಹಸಿವು ಈ ಚಿತ್ರದಲ್ಲಿ ಮುಂದುವರೆದಿದೆ..
ಸಪ್ತಸಾಗರದಾಚೆ ದುರ್ಗಮ ಹಾದಿಯಲ್ಲಿ ದಟ್ಟ ಗೊಂಡಾರಣ್ಯದ ಮಧ್ಯೆ ಗವಿಯಲ್ಲಿ ಪಂಜರದ ಗಿಳಿಯಲ್ಲಿ ತನ್ನ ಪ್ರಾಣ ಇಟ್ಟು.. ತನ್ನ ಮಾಯಾವಿ ವಿದ್ಯೆಯಿಂದ ಜಗತ್ತನ್ನೇ ವಶಮಾಡಿಕೊಳ್ಳಲು ಹಂಬಲಿಸುವ ಮಾಯಾ ಮರಾಠಿ ಪಾತ್ರದಲ್ಲಿ ಉದಯಕುಮಾರ್ ಝಲ್ ಎನ್ನಿಸುತ್ತಾರೆ. ಆ ಅಭಿನಯ, ಗತ್ತು, ಧ್ವನಿ.. ಕಣ್ಣುಗಳು.. ಅವರ ವೇಷಭೂಷಣಕ್ಕೆ ಒಳ್ಳೆಯ ಸಾತ್ ಕೊಟ್ಟಿದೆ.
ಉಳಿದಂತೆ ಆರಂಭದಲ್ಲಿ ಕಾಣಿಸಿಕೊಳ್ಳುವ ಬಾಲಕೃಷ್ಣ, ಪಂಡರಿಬಾಯಿ, ಕಲ್ಪನಾ, ರಮಾದೇವಿ, ವಿ. ನಾಗಯ್ಯ, ಚಿತ್ರಕಥೆಗೆ ತಕ್ಕಂತೆ ಅಭಿನಯ ನೀಡಿದ್ದಾರೆ.
ಸುಮಾರು ಚಿತ್ರದ ಅಂತ್ಯದ ವೇಳೆ ಬರುವ ಮಾಸ್ಟರ್ ಬಾಬು ಅರ್ಥಾತ್ ಬಾಲನಾಗಮ್ಮನ ಮಗನ ಪಾತ್ರಧಾರಿ ಬಾಲವರ್ದನ ಗಮನ ಸೆಳೆಯುತ್ತಾನೆ. ಮರಿ ರಾಜಕುಮಾರನಿಗಿರಬೇಕಾದ ಗತ್ತು, ಮಾತುಗಳು, ಚಾಕಚಕ್ಯತೆ, ಕಣ್ಣುಗಳು ಎಲ್ಲವೂ ಸೊಗಸಾಗಿ ಮೇಳೈಸಿದೆ.
Saturday, April 19, 2025
ಸಾಮಾಜಿಕ ಕಥೆಗಳಿಗೂ ಒಗ್ಗಿಕೊಂಡು ಜಾದೂ ಮಾಡಿದ ಕಠಾರಿ ವೀರ 1966 (ಅಣ್ಣಾವ್ರ ಚಿತ್ರ ೭೦/೨೦೭)
Saturday, April 12, 2025
ಮಂತ್ರ ಹಾಕಿದಂತೆ ಪರಕಾಯ ಪ್ರವೇಶ ಮಾಡಿದ ಮಂತ್ರಾಲಯ ಮಹಾತ್ಮೆ 1966 (ಅಣ್ಣಾವ್ರ ಚಿತ್ರ ೬೯/೨೦೭)
ಒಂದು ನಾನು ನಾನಾಗಿರಬಹುದು.. ಇಲ್ಲವೇ ನಾನು ಏನಾದರೂ ಆಗಬಹುದು.. ಇದು ಎರಡು ಬಿಟ್ಟು ಇನ್ನೊಂದು ಸಾಧ್ಯತೆ ಇದೆ.. ಅದಕ್ಕೆ ದೈವ ಅನುಗ್ರಹದ ಜೊತೆಗೆ ಆ ಶಕ್ತಿಗೆ ಶರಣಾಗಬೇಕು..
ರಾಜಕುಮಾರ್ ಅವರು ಈ ಚಿತ್ರದಲ್ಲಿ ಆ ಮೂರನೇ ಹಂತದಲ್ಲಿ ವಿಜೃಂಭಿಸಿದ್ದಾರೆ.. ಈ ರೀತಿಯ ಸಂಕೀರ್ಣ ಪಾತ್ರಗಳನ್ನ ಹಿಂದಿನ ಅನೇಕ ಚಿತ್ರ ಪಾತ್ರಗಳಲ್ಲಿ ಮಾಡಿಕೊಂಡು ಬಂದಿದ್ದರು.. ಆದರೆ ಇಲ್ಲಿನ ಪಾತ್ರ ವಿಶೇಷ ಮತ್ತು ಅನೇಕಾನೇಕ ಭಕ್ತಾದಿಗಳು ತಮ್ಮ ಅಂತರಂಗ ಶಕ್ತಿ ಎಂದೇ ನಂಬಿ ಶತಮಾನಗಳಿಂದಲೂ ಮತ್ತು ಮುಂದಿನ ಶತಮಾನಗಳಲ್ಲೂ ಅನುಸರಿಸುವ.. ಭಕ್ತಿಯಿಂದ ನೆಡೆದುಕೊಳ್ಳುವ ಮಂತ್ರಾಲಯದ ಗುರುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳ ಪಾತ್ರ..
ಇಲ್ಲಿ ರಾಜಕುಮಾರ್ ಅಭಿನಯಿಸಿಲ್ಲ ಬದಲಿಗೆ ಅನೇಕ ಪವಾಡಗಳನ್ನು ಮಾಡಿ ರಾಘವೇಂದ್ರ ಸ್ವಾಮಿಗಳು ಇಲ್ಲಿ ಇನ್ನೊಂದು ಪವಾಡವನ್ನು ಮಾಡಿ.. ರಾಜಕುಮಾರ್ ಅವರ ಅಭಿನಯದೊಳಗೆ ಸೇರಿಕೊಂಡುಬಿಟ್ಟಿದ್ದಾರೆ.. ರಾಜಕುಮಾರ್ ಅವರು ಪರಕಾಯ ಪ್ರವೇಶ ಮಾಡಿಲ್ಲ ಬದಲಿಗೆ ರಾಯರೇ ರಾಜಕುಮಾರ್ ಅವರ ಬೆನ್ನ ಹಿಂದೆ ನಿಂತು ಈ ಪಾತ್ರವನ್ನು ಅಭಿನಯ ಮಾಡುವಂತೆ ಶಕ್ತಿ ನೀಡಿದ್ದಾರೆ ಅಂದರೆ ಇದು ಅತಿಶಯೋಕ್ತಿ ಅನ್ನೋಕೆ ಆಗೋಲ್ಲ.. ಕಾರಣ ಕಟ್ಟು ನಿಟ್ಟಾದ ವ್ರತವನ್ನು ಅನುಸರಿಸಿ ಈ ಸಿನಿಮಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಮಠದ ಜವಾಬ್ಧಾರಿಯನ್ನು ಹೊತ್ತು ನಿಭಾಯಿಸುವಾಗ ಬೇಕಾದ ಸಂಯಮ.. ಸ್ವಾಮಿಗಳಿಗೆ ಇರಬೇಕಾದ ತಾಳ್ಮೆ, ಅದಕ್ಕೆ ತಕ್ಕಂತೆ ತಮ್ಮ ಸಂಭಾಷಣೆಯ ಶೈಲಿಯನ್ನು ಒಗ್ಗಿಸಿಕೊಂಡಿರುವುದು.. ಅವರ ದೇಹದಾರ್ಢ್ಯ.. ಮುಖಭಾವ.. ಅದರಲ್ಲೂ ಯತಿಗಳಾದ ಮೇಲೆ ಗಡ್ಡಧಾರಿಯಾಗಿ ನೀಡಿದ ಅಭಿನಯ.. ಅಬ್ಬಬ್ಬಾ ಅನಿಸುತ್ತದೆ.. ರಾಯರನ್ನು ನೋಡಲೇ ಬೇಕಿಲ್ಲ.. ಈ ಸಿನೆಮಾವನ್ನು ಒಮ್ಮೆ ನೋಡಿದರೆ ಸಾಕು.. ಗುರು ರಾಘವೇಂದ್ರರೆ ಕಣ್ಣೆದುರು ನಿಂತಂತೆ ಭಾಸವಾಗುತ್ತದೆ.
ನಮಗರಿವಿಲ್ಲದೆ ಮನಸ್ಸು ಕೈ ಮುಗಿಯುತ್ತದೆ.
ಇಲ್ಲಿನ ಪ್ರತಿಯೊಂದು ಪಾತ್ರವೂ ಜೀವಿಸಿದೆ..
ಉದಯಕುಮಾರ್,ಆದವಾನಿ ಲಕ್ಷ್ಮಿದೇವಿ, ಕಲ್ಪನಾ, ಜಯಂತಿ ತಮ್ಮ ಪುಟ್ಟ ಪಾತ್ರಗಳಲ್ಲಿ ಸಲೀಸಾಗಿ ನಟಿಸಿದ್ದಾರೆ..
ಚಿತ್ರದ ಸುಮಾರು ದೃಶ್ಯಗಳಲ್ಲಿ ಬರುವ ಸುಧೀಂದ್ರ ತೀರ್ಥ ಪಾತ್ರದಲ್ಲಿ ಎಚ್ ರಾಮಚಂದ್ರ ಶಾಸ್ತ್ರೀ ಜೀವ ತುಂಬಿದ ಅಭಿನಯ ನೀಡಿದ್ದಾರೆ..
ಈ ಚಿತ್ರದ ಬಗ್ಗೆ ಬರೆದಷ್ಟು ಮುಗಿಯೋಲ್ಲ..
ಸುಶ್ರಾವ್ಯ ಸಂಗೀತ ನೀಡಿದ ರಾಜನ್ ನಾಗೇಂದ್ರ ಜೋಡಿ
ಗೀತೆಗಳನ್ನು ರಚಿಸಿದ ಜಿ ವಿ ಅಯ್ಯರ್
ರಾಯರೇ ರಚಿಸಿದ ಇಂದು ಎನಗೆ ಗೋವಿಂದ ಹಾಡಿಗೆ ಸುಮಧುರ ಸಂಗೀತ ನೀಡಿದ್ದಾರೆ ಅಷ್ಟೇ ಸೊಗಸಾಗಿ ಪಿ ಬಿ ಶ್ರೀನಿವಾಸ್ ಅವರ ಗಾಯನ ಮನಸ್ಸೆಳೆಯುತ್ತದೆ.
ಜಗಜ್ಯೋತಿ ಫಿಲಂಸ್ ಲಾಂಛನದಡಿ ತಯಾರಾದ ಚಿತ್ರಕ್ಕೆ
ಹಾಡುಗಳಿಗೆ ಪಿ ಶ್ರೀನಿವಾಸ್, ಎಸ್ ಜಾನಕೀ, ಪಿ ಲೀಲಾ ಎಲ್ ಆರ್ ಈಶ್ವರಿ ಸಿ ಎಸ್ ಸರೋಜಿನಿ ಬೆಂಗಳೂರು ಲತಾ ಮತ್ತು ವೀರಮಣಿ ತಮ್ಮ ಧ್ವನಿ ನೀಡಿದ್ದಾರೆ.
ಬಿ ದೊರೈರಾಜ್ ಛಾಯಾಗ್ರಹಣ ಮತ್ತು ಅವರ ಸ್ನೇಹಿತ ಭಗವಾನ್ ಸಹ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.
ಟಿ ವಿ ಸಿಂಗ್ ಠಾಕೂರ್ ಜೊತೆಗೆ ದೊರೈರಾಜ್ ಮತ್ತು ಭಗವಾನ್ ನಿರ್ಮಾಪಕರಾಗಿದ್ದಾರೆ.
ನಿರ್ದೇಶನವನ್ನು ಟಿ ವಿ ಸಿಂಗ್ ಠಾಕೂರ್ ನೋಡಿಕೊಂಡಿದ್ದಾರೆ.