tag:blogger.com,1999:blog-2942039035648576529.post334702869132370376..comments2023-12-22T19:58:14.946+05:30Comments on Moved Movies: ಎಡವಿದರೆ ಕಲ್ಲು ಗುಡ್ಡವೇ.. ಎಡಕಲ್ಲು ಗುಡ್ಡದ ಮೇಲೆ (1973)Srikanth Manjunathhttp://www.blogger.com/profile/04152086368173454221noreply@blogger.comBlogger3125tag:blogger.com,1999:blog-2942039035648576529.post-5828675537883179662014-11-26T06:04:40.478+05:302014-11-26T06:04:40.478+05:30"ಎಡಕಲ್ಲು ಗುಡ್ಡದ ಮೇಲೆ" ಚಿತ್ರ ಬಂದಾಗ ನಾನಿನ್..."ಎಡಕಲ್ಲು ಗುಡ್ಡದ ಮೇಲೆ" ಚಿತ್ರ ಬಂದಾಗ ನಾನಿನ್ನೂ ಚಿಕ್ಕವನು , ಆದರೆ ಈ ಚಿತ್ರದ ಹಾಡುಗಳು ಅತ್ಯಂತ ಜನಪ್ರೀಯವಾಗಿ ಕನ್ನಡ ನಾಡಿನ ಹಳ್ಳಿ ಹಳ್ಳಿಗಳಲ್ಲೂ ಮೊಳಗಿದ್ದವು , ಬುದ್ದಿ ಬಲಿತ ಮೇಲೆ ಮತ್ತೊಮ್ಮೆ ಚಿರ ನೋಡಿ ಅರ್ಥ ಮಾಡಿಕೊಂಡೆ . ಪುಟ್ಟಣ್ಣ ನವರ ಚಿತ್ರಗಳು ಒಂದು ತರಹ ಜೀವನ ದರ್ಶನ ಮಾಡಿಸುವ ಶಾಲೆಗಳಿದ್ದಂತೆ , ಒಂದೊಂದು ಚಿತ್ರವೂ ಒಂದೊಂದು ಅಧ್ಯಾಯವೇ . ಕೆಲವೊಮ್ಮೆ ಅನ್ನಿಸುತ್ತದೆ ಸರಿಯಾದ ಜೀವನ ಕ್ರಮ ಹೇಗೆ ಎಂಬುದನ್ನು ಹಿಂದೆ ಬಂದ ಹಳೆಯ ಕನ್ನಡ ಚಿತ್ರಗಳು ಜನರಿಗೆ ಹೇಳಿಕೊಟ್ಟು, ಉತ್ತಮ ಸಮಾಜ ನಿರ್ಮಾಣದಲ್ಲಿ ಪಾಲ್ಗೊಂಡಿದ್ದವು. ಈಗ ಆ ಮಾತು ಬೇರೆ ಬಿಡಿ. ಈ ಚಿತ್ರದಲ್ಲಿನ ವಿಚಾರ ಬಹಳ ಸೂಕ್ಷ್ಮವಾಗಿತ್ತು, ಅಂದಿನ ಸಮಾಜ ಇಂತಹ ವಿಚಾರಗಳನ್ನು ಹೇಗೆ ಸ್ವೀಕಾರ ಮಾಡುತ್ತದೆ ಎಂಬ ಪ್ರಶ್ನೆ ಹಲವರಿಗೆ ಇತ್ತು , ಆದರೆ ಪುಟ್ಟಣ್ಣ ಅದಕ್ಕೆ ಉತ್ತರ ನೀಡಿದ್ದರು, ಕನ್ನಡ ನಾಡಿನ ಜನತೆಗೆ ಇಂತಹ ಸೂಕ್ಷ್ಮ ವಿಚಾರವನ್ನು ತಮ್ಮದೇ ಶೈಲಿಯಲ್ಲಿ ಮುಂದಿಟ್ಟು, ಸೈ ಎನ್ನಿಸಿಕೊಂಡರು, ಈ ಚಿತ್ರವೂ ಕೂಡ ಸಾಮೂಹಿಕ ನಾಯಕ್ತ್ವದ ಚಿತ್ರವೇ, ಚಿತ್ರದ ತಂಡದ ಪ್ರತಿಯೊಬ್ಬ ವ್ಯಕ್ತಿಯೂ ಅಭಿನಂದನೆಗೆ ಅರ್ಹನೇ ಆಗಿದ್ದಾನೆ. ಅಂದಿಗೆ ಖಳನಾಯಕ ಪ್ರದಾನ ಚಿತ್ರವಿದು, ಈ ಪಾತ್ರವನ್ನು ನಿರ್ವಹಿಸಿ ಸೈ ಅನ್ನಿಸಿಕೊಂಡರು ಚಂದ್ರು, ಮುಂದೆ ಎಡಕಲ್ಲು ಗುಡ್ಡದ ಚಂದ್ರು ಆದರು. ಈ ಚಿತ್ರದಲ್ಲಿ ಒಂದು ಹಾಡಿದೆ "ನಿಲ್ಲು ನಿಲ್ಲೇ ಪತಂಗ, ಬೇಡ ಬೇಡ ಬೆಂಕಿಯ ಸಂಗ" ಇದು ಚಿತ್ರದ ಸಾರಾಂಶವನ್ನು ಹೇಳುತ್ತದೆ . ಇಲ್ಲಿ ಬೆಂಕಿ ಚಂದ್ರು ಆದರೆ ಪಟಂಗಗಳಾಗಿ ಜಯಂತಿ, ಆರತಿ ಕಾಣಿಸಿಕೊಳ್ಳುತ್ತಾರೆ , ಸುಂದರ ಸನ್ನಿವೇಶಗಳನ್ನು , ದೃಶ್ಯರೂಪಕ್ಕೆ ತಂದು ಯಾವುದೇ ರೀತಿಯ ಕಥೆಯನ್ನು ಪ್ರೇಕ್ಷಕರಿಗೆ ಇಷ್ಟವಾಗುವ ರೀತಿ ಮಾಡಿಸುವ ಕಲೆ ಪುಟ್ಟಣ್ಣನವರಿಗೆ ಇತ್ತು. ಯಾವುರವ್ವ ಇವ ಯಾವುರವ್ವ ಎಂ ಚಂದಾ ಬರೆಯುತ್ತಾನೆ ಯಾವುರವ್ವಾ ಇವ ಯಾವೂರವ್ವಾ ....!ಅಂತಾ ಹಾಡುತ್ತಾ ಶ್ರೀಕಾಂತ್ ಗೆ ಜೈ ಎನ್ನುತ್ತೇನೆ balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-2942039035648576529.post-82258192380988947022014-11-24T23:05:28.814+05:302014-11-24T23:05:28.814+05:30ಅಂದಿನ ಸಾಮಾಜಿಕ ಪರಿಸ್ಥಿತಿಗಳನ್ನು ವಿವರಿಸಿ ಅವುಗಳನ್ನು ಮಾ...ಅಂದಿನ ಸಾಮಾಜಿಕ ಪರಿಸ್ಥಿತಿಗಳನ್ನು ವಿವರಿಸಿ ಅವುಗಳನ್ನು ಮಾನವೀಯತೆಯ ದೃಷ್ಟಿಯಿಂದ ಕಾದಂಬರಿಗಳ ಮೂಲಕ ಮೇಲೆತ್ತುವುದರಲ್ಲಿ ತ್ರಿವೇಣಿಯವರ ಕಥೆಗಳು ಅತ್ಯುತ್ಕೃಷ್ಟ. <br />ಹಾಗೆಯೇ ಚಿತ್ರಗಳ ಮೂಲಕ ಸಮಾಜದ ಹಳೆಯ ಪದ್ಧತಿಗಳನ್ನು ಮುರಿದು ಇಂದಿನ ರೀತಿ ನೀತಿಗಳಿಗೆ ಹೊಂದಿಕೊಂಡು ಹೋಗುವಂತೆ ಮಾಡಿದ ಕೀರ್ತಿ ಪುಟ್ಟಣ್ಣನವರಿಗೆ ಸಲ್ಲುತ್ತದೆ. <br />ಅವುಗಳನ್ನು ಇಂದಿನ ಯುವಜನತೆಗೆ ಬ್ಲಾಗ್ ಗಳ ಮೂಲಕ ತಲುಪಿಸುತ್ತಿರುವ ನಿಮಗೆ ನನ್ನ ಮೆಚ್ಚುಗೆ...Harini Gntnoreply@blogger.comtag:blogger.com,1999:blog-2942039035648576529.post-26476870961628858852014-11-24T23:04:53.712+05:302014-11-24T23:04:53.712+05:30ಅಬ್ಬಾ... ಆ ರಂಗ... ಎಂಥ ನಟ ! ಬದುಕಿದ್ದಿದ್ದರೆ ಈ ಚಿತ್ರದ...ಅಬ್ಬಾ... ಆ ರಂಗ... ಎಂಥ ನಟ ! ಬದುಕಿದ್ದಿದ್ದರೆ ಈ ಚಿತ್ರದ ನಂತರ ಖಂಡಿತವಾಗಿ ಆತ ಒಂದೆರಡು ದಶಕ ಆಳುತ್ತಿದ್ದ. ವಿಲ್ಸನ್ ಗಾರ್ಡನ್ನಿನಲ್ಲಿ ನಮ್ಮ ಮನೆಯ ಎದುರಿದ್ದ ರಂಗಾ ಪಾಪ, 'ನಶಾ ವಶ'ನಾಗಿ ಅಸು ನೀಗಿದ. ಆ ಮಾತಿಗೀಗ ೪೨ ವರ್ಷ.Gopala Wajapeyinoreply@blogger.com